‘ಇಂಥ ಹೊತ್ತಿನಲ್ಲಿ ಮೃದುಮಾತಿಗೆ ಸ್ಥಾನವಿಲ್ಲದಂತಾಗಿದೆ.ಸಮಚಿತ್ತದಿಂದ ಖಚಿತವಾಗಿ ನುಡಿಯುವ ವ್ಯಕ್ತಿತ್ವದ ಅಗತ್ಯವಿದೆ. ಆದರೆ ಅಂಥ ವ್ಯಕ್ತಿ ಎಲ್ಲಿಯೂ ಕಾಣಿಸುತ್ತಿಲ್ಲ. ಸಾಮಾಜಿಕ ಘನತೆಯನ್ನು ಕಾಯ್ದುಕೊಂಡ ವ್ಯಕ್ತಿತ್ವಗಳು ಇಲ್ಲದಿದ್ದರೆ ಯಾವ ಹೋರಾಟಕ್ಕೂ ಅರ್ಥವಿರದು. ಸುದೀರ್ಘ ಸಾಂಸ್ಕೃತಿಕ ಇತಿಹಾಸ ಹೊಂದಿರುವ ಕರ್ನಾಟಕ ವಿದ್ಯಾವರ್ಧಕ ಸಂಘವು ಮತ್ತೆ ಕನ್ನಡ ಸಂಸ್ಕೃತಿಯನ್ನು ರಕ್ಷಿಸಲು ನಾಯಕತ್ವ ಪಡೆಯಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ’ ಎಂದರು.