ಬೆಂಗಳೂರು: ಸಭಾಧ್ಯಕ್ಷರು, ಸಭಾಪತಿ, ಮುಖ್ಯಮಂತ್ರಿ, ಸಚಿವರು, ಶಾಸಕರ ವೇತನ, ಭತ್ಯೆಗಳನ್ನು ಹೆಚ್ಚಿಸುವ ಮಸೂದೆಗೆ ವಿಧಾನಸಭೆಮಂಗಳವಾರ ಅಂಗೀಕಾರ ನೀಡಿತು.
ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಈ ಸಂಬಂಧ ಎರಡು ಮಸೂದೆಗಳನ್ನು ಕಾಂಗ್ರೆಸ್ ನಾಯಕರಧರಣಿ ಮತ್ತು ಗದ್ದಲದ ಮಧ್ಯೆಯೇ ಮಂಡಿಸಿದರು.
ಮುಖ್ಯಮಂತ್ರಿ ಯವರ ಸಂಬಳ ₹ 50 ಸಾವಿರ ದಿಂದ ₹ 75 ಸಾವಿರಕ್ಕೂ, ಸಚಿವರ ವೇತನ ₹ 40 ಸಾವಿರದಿಂದ ₹ 60 ಸಾವಿರಕ್ಕೆ ಹೆಚ್ಚಿಸಲಾಗಿದೆ. ಪ್ರತಿ ವರ್ಷ ನೀಡುವ ಆತಿಥ್ಯ ಭತ್ಯೆ₹ 3 ಲಕ್ಷದಿಂದ ₹ 4.50 ಲಕ್ಷಕ್ಕೆ ಏರಿಕೆ ಮಾಡಲಾಗಿದೆ.
ಮನೆ ಬಾಡಿಗೆಯನ್ನು ₹ 90 ಸಾವಿರದಿಂದ ₹ 1.20 ಲಕ್ಷಕ್ಕೆ ಹೆಚ್ಚಿಸಲಾಗಿದೆ. ತೋಟಗಳ ನಿರ್ವಹಣೆ ಮತ್ತು ವಿನ್ಯಾಸಕ್ಕೆ ₹ 20ಸಾವಿರದಿಂದ ₹ 30 ಸಾವಿರಕ್ಕೆ ಹೆಚ್ಚಿಸಲಾಗಿದೆ. ಪೆಟ್ರೋಲ್ ಭತ್ಯೆ ತಿಂಗಳಿಗೆ 1 ಸಾವಿರ ಲೀಟರ್ ಬದಲು 2 ಸಾವಿರ ಲೀಟರ್ಗೆ ಹೆಚ್ಚಿಸಲಾಗಿದೆ.