ಬೆಂಗಳೂರು: ಲಾಕ್ಡೌನ್ ತೆರವುಗೊಳಿಸುವ ಪ್ರಕ್ರಿಯೆ ಸೋಮವಾರ ದಿಂದ ಆರಂಭವಾಗಿದ್ದರೂ, ರಾಜ್ಯದ ಗಡಿ ಜಿಲ್ಲೆಗಳಲ್ಲಿ ಅಂತರ ರಾಜ್ಯ ವಾಹನಗಳ ಸಂಚಾರಕ್ಕೆ ಇನ್ನೂ ಮುಕ್ತ ಅವಕಾಶ ನೀಡಿಲ್ಲ. ‘ಸೇವಾ ಸಿಂಧು’ ಪೋರ್ಟಲ್ನಲ್ಲಿ ನೋಂದಣಿ ಮಾಡಿಸಿದವರಿಗೆ ಮಂಗಳೂರು, ಮೈಸೂರು ಮೂಲಕ ರಾಜ್ಯ ಪ್ರವೇಶಿಸಲು ಒಮ್ಮೆ ಮಾತ್ರ ಅವಕಾಶ ನೀಡಲಾಗುತ್ತಿದೆ.
ಕೇರಳ, ತಮಿಳುನಾಡು, ಆಂಧ್ರ ಹಾಗೂ ತೆಲಂಗಾಣದ ಗಡಿ ಜಿಲ್ಲೆಗಳಲ್ಲಿ ಮುಕ್ತ ಸಂಚಾರಕ್ಕೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಈ ಭಾಗದ ಜನರಿ ದ್ದರು. ಆದರೆ, ಯಾವ ರಾಜ್ಯವೂ ಅನುಮತಿ ನೀಡದಿರುವುದರಿಂದ ನಿರ್ಬಂಧ ಮುಂದುವರಿದಿದೆ.
ಚಾಮರಾಜನಗರ ಜಿಲ್ಲೆಯಲ್ಲಿರುವ ನಾಲ್ಕು ಗಡಿಭಾಗದಲ್ಲೂ ವಾಹನ– ಜನ ಸಂಚಾರ ತಡೆಯಲಾಗುತ್ತಿದೆ.