‘ಕೋವಿಡ್ ಸಮಯದಲ್ಲಿ ಕೇಂದ್ರ ಸರ್ಕಾರ ಬಿಸಿಯೂಟ ಯೋಜನೆಗೆ ಹಣಕಾಸಿನ ನೆರವು ನೀಡಿತ್ತು. ಈಗ ರಾಜ್ಯ ಬರಗಾಲಕ್ಕೆ ಒಳಗಾಗುದೆ. ಅದಕ್ಕಾಗಿ ಕೇಂದ್ರದ ನೆರವು ಕೋರಲಾಗಿದೆ. ಬಿಸಿಯೂಟ ವಿಸ್ತರಣೆಯಿಂದ ಶೇ 40ರಷ್ಟು ಮಕ್ಕಳು ಪ್ರಯೋಜನ ಪಡೆಯುವ ನಿರೀಕ್ಷೆ ಇದೆ. ಮಕ್ಕಳು ರಜೆಗೆ ಬೇರೆ ಊರುಗಳಿಗೆ ತೆರಳಿದರೂ, ಹತ್ತಿರದ ಶಾಲೆಗಳಲ್ಲಿ ಊಟದ ಸೌಲಭ್ಯ ಪಡೆಯಬಹುದು. ಈ ಸಮಯದಲ್ಲಿ ಕ್ಷೀರ ಭಾಗ್ಯ ಯೋಜನೆ ಇರುವುದಿಲ್ಲ’ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.