ರಾಯಚೂರು: ತಾಲ್ಲೂಕಿನ ಗಾಣದಾಳ ಹಾಗೂ ಬಿಚ್ಚಾಲಿ ಗ್ರಾಮಗಳಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳನ್ನು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಗುರುವಾರ ಪರಿಶೀಲಿಸಿದರು.
ಗಾಣದಾಳದಲ್ಲಿ ರೈತರ ಜಮೀನುಗಳಲ್ಲಿ ನಿರ್ಮಿಸುತ್ತಿರುವ ಕೃಷಿಹೊಂಡ ಕಾಮಗಾರಿ ಹಾಗೂ ಬಿಚ್ಚಾಲಿಯಲ್ಲಿ ₹30 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ತಡೆಗೋಡೆ ಕಾಮಗಾರಿಯನ್ನು ವೀಕ್ಷಿಸಿದರು.
ಮಾರ್ಗಮಧ್ಯೆ ಮಂತ್ರಾಲಯ, ಪಂಚಮುಖಿ ಹಾಗೂ ಬಿಚ್ಚಾಲಿಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮೀಜಿ ಅವರ ಬೃಂದಾವನಗಳ ದರ್ಶನ ಪಡೆದರು.