<p><strong>ಬೆಂಗಳೂರು</strong>: ಮಂಡ್ಯದ ಮೈಶುಗರ್ಸ್ ಕಾರ್ಖಾನೆ ಅಭಿವೃದ್ಧಿಗಾಗಿ, ಹಿಂದೆ ಸರ್ಕಾರವು ₹140 ಕೋಟಿಗೂ ಹೆಚ್ಚು ಅನುದಾನ ನೀಡಿತ್ತು. ಈ ಅನುದಾನವು ದುರ್ಬಳಕೆ ಆಗಿರುವ ಆರೋಪಗಳಿವೆ. ಈ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು ತಿಳಿಸಿದರು.</p>.<p>ವಿಧಾನ ಪರಿಷತ್ತಿನ ಕಲಾಪದಲ್ಲಿ ಮಂಗಳವಾರ ಪ್ರಶ್ನೋತ್ತರದ ವೇಳೆ ಕಾಂಗ್ರೆಸ್ನ ಮಧು ಜಿ.ಮಾದೇಗೌಡ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಆಡಳಿತ ನಡೆಸಿದ್ದ ಹಲವು ಪಕ್ಷಗಳ ಸರ್ಕಾರಗಳು ಮೈಶುಗರ್ಸ್ ಕಾರ್ಖಾನೆಗೆ ಈವರೆಗೆ ₹650 ಕೋಟಿಗೂ ಹೆಚ್ಚು ಅನುದಾನ ನೀಡಿವೆ. ಆ ವೆಚ್ಚದಲ್ಲಿ ಎರಡು ಹೊಸ ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಬಹುದಿತ್ತು’ ಎಂದರು.</p>.<p>‘ಇಷ್ಟು ದೊಡ್ಡ ಮೊತ್ತದ ಅನುದಾನ ನೀಡಿದ್ದರೂ, ಕಾರ್ಖಾನೆ ಪೂರ್ಣ ಪ್ರಮಾಣದಲ್ಲಿ ಪುನಶ್ಚೇತನಗೊಂಡಿಲ್ಲ. ಅನುದಾನ ದುರ್ಬಳಕೆ ಆಗಿರುವ ಬಗ್ಗೆ ತನಿಖೆ ನಡೆಸುತ್ತೇವೆ’ ಎಂದರು.</p>.<p>‘2022–23ರ ಅವಧಿಯಲ್ಲಿ ಕಾರ್ಖಾನೆ ಪುನರಾರಂಭಕ್ಕೆ ಯತ್ನ ಮಾಡಲಾಯಿತಾದರೂ, ನಷ್ಟ ಹೆಚ್ಚಾಯಿತು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದ ನಂತರ ₹50 ಕೋಟಿ ಅನುದಾನ ನೀಡಿದರು. ಅದನ್ನು ಕಟ್ಟುನಿಟ್ಟಾಗಿ ವೆಚ್ಚ ಮಾಡಿ, ಕಾರ್ಖಾನೆ ಪುನರಾರಂಭ ಮಾಡಲಾಗಿದೆ’ ಎಂದರು.</p>.<p>ಮಧು ಜಿ. ಮಾದೇಗೌಡ ಅವರು, ‘ಕಾರ್ಖಾನೆಯನ್ನು ವಿಸ್ತರಿಸಬೇಕು ಮತ್ತು ಡಿಸ್ಟಿಲರಿಯನ್ನು ಪುನರಾರಂಭ ಮಾಡಬೇಕು’ ಎಂದು ಒತ್ತಾಯ ಮಾಡಿದರು. ಅದಕ್ಕೆ ಸಚಿವರು, ‘ಈಗ ಇರುವ ಬಾಯ್ಲರ್ ಅನ್ನು ಸರಿಪಡಿಸಿದರೆ ಸಾಕಾಗುತ್ತದೆ. ಅದನ್ನು ಮೊದಲು ಮಾಡಿ ತೋರಿಸಿ. ನಂತರ ಡಿಸ್ಟಿಲರಿಯನ್ನು ಆರಂಭಿಸುತ್ತೇವೆ’ ಎಂದರು.</p>.<p>‘ಕಾರ್ಖಾನೆಯ ಆವರಣದಲ್ಲೇ ವಿದ್ಯುತ್ ಉತ್ಪಾದನಾ ಘಟಕ ಆರಂಭಿಸಲಾಗಿದ್ದು, 2024–25ರಲ್ಲಿ 1.57 ಕೋಟಿ ಯೂನಿಟ್ ಉತ್ಪಾದಿಸಲಾಗಿದೆ. 71.83 ಲಕ್ಷ ಯೂನಿಟ್ಗಳನ್ನು ಚೆಸ್ಕಾಂಗೆ ಮಾರಾಟ ಮಾಡಿ, ₹4.33 ಕೋಟಿ ಆದಾಯ ಗಳಿಸಲಾಗಿದೆ’ ಎಂದು ಸದನಕ್ಕೆ ಮಾಹಿತಿ ನೀಡಿದರು.</p>.<p> ಸಚಿವ ಹೇಳಿದ್ದು... </p><p>* ₹140 ಕೋಟಿಯಲ್ಲಿ ಯಾವ ಅಭಿವೃದ್ಧಿ ಕಾರ್ಯವೂ ಆಗಿಲ್ಲ. ಯಾವುದಕ್ಕೆ ವೆಚ್ಚವಾಗಿದೆ ಎಂಬ ವಿವರ ಇಲ್ಲ </p><p>* ಮೈಶುಗರ್ಸ್ಗೆ ಒಟ್ಟು ₹650 ಕೋಟಿ ನೀಡಿದ್ದು, ಅದರಲ್ಲಿ ಎರಡು ಕಾರ್ಖಾನೆ ಆರಂಭಿಸಬಹುದಿತ್ತು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಮಂಡ್ಯದ ಮೈಶುಗರ್ಸ್ ಕಾರ್ಖಾನೆ ಅಭಿವೃದ್ಧಿಗಾಗಿ, ಹಿಂದೆ ಸರ್ಕಾರವು ₹140 ಕೋಟಿಗೂ ಹೆಚ್ಚು ಅನುದಾನ ನೀಡಿತ್ತು. ಈ ಅನುದಾನವು ದುರ್ಬಳಕೆ ಆಗಿರುವ ಆರೋಪಗಳಿವೆ. ಈ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು ತಿಳಿಸಿದರು.</p>.<p>ವಿಧಾನ ಪರಿಷತ್ತಿನ ಕಲಾಪದಲ್ಲಿ ಮಂಗಳವಾರ ಪ್ರಶ್ನೋತ್ತರದ ವೇಳೆ ಕಾಂಗ್ರೆಸ್ನ ಮಧು ಜಿ.ಮಾದೇಗೌಡ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಆಡಳಿತ ನಡೆಸಿದ್ದ ಹಲವು ಪಕ್ಷಗಳ ಸರ್ಕಾರಗಳು ಮೈಶುಗರ್ಸ್ ಕಾರ್ಖಾನೆಗೆ ಈವರೆಗೆ ₹650 ಕೋಟಿಗೂ ಹೆಚ್ಚು ಅನುದಾನ ನೀಡಿವೆ. ಆ ವೆಚ್ಚದಲ್ಲಿ ಎರಡು ಹೊಸ ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಬಹುದಿತ್ತು’ ಎಂದರು.</p>.<p>‘ಇಷ್ಟು ದೊಡ್ಡ ಮೊತ್ತದ ಅನುದಾನ ನೀಡಿದ್ದರೂ, ಕಾರ್ಖಾನೆ ಪೂರ್ಣ ಪ್ರಮಾಣದಲ್ಲಿ ಪುನಶ್ಚೇತನಗೊಂಡಿಲ್ಲ. ಅನುದಾನ ದುರ್ಬಳಕೆ ಆಗಿರುವ ಬಗ್ಗೆ ತನಿಖೆ ನಡೆಸುತ್ತೇವೆ’ ಎಂದರು.</p>.<p>‘2022–23ರ ಅವಧಿಯಲ್ಲಿ ಕಾರ್ಖಾನೆ ಪುನರಾರಂಭಕ್ಕೆ ಯತ್ನ ಮಾಡಲಾಯಿತಾದರೂ, ನಷ್ಟ ಹೆಚ್ಚಾಯಿತು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದ ನಂತರ ₹50 ಕೋಟಿ ಅನುದಾನ ನೀಡಿದರು. ಅದನ್ನು ಕಟ್ಟುನಿಟ್ಟಾಗಿ ವೆಚ್ಚ ಮಾಡಿ, ಕಾರ್ಖಾನೆ ಪುನರಾರಂಭ ಮಾಡಲಾಗಿದೆ’ ಎಂದರು.</p>.<p>ಮಧು ಜಿ. ಮಾದೇಗೌಡ ಅವರು, ‘ಕಾರ್ಖಾನೆಯನ್ನು ವಿಸ್ತರಿಸಬೇಕು ಮತ್ತು ಡಿಸ್ಟಿಲರಿಯನ್ನು ಪುನರಾರಂಭ ಮಾಡಬೇಕು’ ಎಂದು ಒತ್ತಾಯ ಮಾಡಿದರು. ಅದಕ್ಕೆ ಸಚಿವರು, ‘ಈಗ ಇರುವ ಬಾಯ್ಲರ್ ಅನ್ನು ಸರಿಪಡಿಸಿದರೆ ಸಾಕಾಗುತ್ತದೆ. ಅದನ್ನು ಮೊದಲು ಮಾಡಿ ತೋರಿಸಿ. ನಂತರ ಡಿಸ್ಟಿಲರಿಯನ್ನು ಆರಂಭಿಸುತ್ತೇವೆ’ ಎಂದರು.</p>.<p>‘ಕಾರ್ಖಾನೆಯ ಆವರಣದಲ್ಲೇ ವಿದ್ಯುತ್ ಉತ್ಪಾದನಾ ಘಟಕ ಆರಂಭಿಸಲಾಗಿದ್ದು, 2024–25ರಲ್ಲಿ 1.57 ಕೋಟಿ ಯೂನಿಟ್ ಉತ್ಪಾದಿಸಲಾಗಿದೆ. 71.83 ಲಕ್ಷ ಯೂನಿಟ್ಗಳನ್ನು ಚೆಸ್ಕಾಂಗೆ ಮಾರಾಟ ಮಾಡಿ, ₹4.33 ಕೋಟಿ ಆದಾಯ ಗಳಿಸಲಾಗಿದೆ’ ಎಂದು ಸದನಕ್ಕೆ ಮಾಹಿತಿ ನೀಡಿದರು.</p>.<p> ಸಚಿವ ಹೇಳಿದ್ದು... </p><p>* ₹140 ಕೋಟಿಯಲ್ಲಿ ಯಾವ ಅಭಿವೃದ್ಧಿ ಕಾರ್ಯವೂ ಆಗಿಲ್ಲ. ಯಾವುದಕ್ಕೆ ವೆಚ್ಚವಾಗಿದೆ ಎಂಬ ವಿವರ ಇಲ್ಲ </p><p>* ಮೈಶುಗರ್ಸ್ಗೆ ಒಟ್ಟು ₹650 ಕೋಟಿ ನೀಡಿದ್ದು, ಅದರಲ್ಲಿ ಎರಡು ಕಾರ್ಖಾನೆ ಆರಂಭಿಸಬಹುದಿತ್ತು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>