<p><strong>ಬೆಂಗಳೂರು:</strong> ಜಯನಗರದ 11ನೇ ಮುಖ್ಯರಸ್ತೆಯಲ್ಲಿರುವ ‘ತನೇರಿಯಾ’ ಸೀರೆ ಮಾರಾಟ ಮಳಿಗೆಗೆ ಶನಿವಾರ ಹೋಗಿದ್ದ ನಾಗಠಾಣ ಶಾಸಕ ದೇವಾನಂದ ಚವ್ಹಾಣ ಹಾಗೂ ಅವರ ಪತ್ನಿ, ಮಳಿಗೆಯ ಲಿಫ್ಟ್ನಲ್ಲಿ 15 ನಿಮಿಷ ಸಿಲುಕಿದ್ದರು.</p>.<p>ಸಂಜೆ 7.30 ಗಂಟೆ ಸುಮಾರಿಗೆ ಮಳಿಗೆ ಹೋಗಿದ್ದ ದೇವಾನಂದ್, ಕಟ್ಟಡದ ಮೇಲಿನ ಮಹಡಿಗೆ ಹೋಗಲೆಂದು ಪತ್ನಿ ಜೊತೆಯಲ್ಲಿ ಲಿಫ್ಟ್<br />ಹತ್ತಿದ್ದರು.</p>.<p>ದಿಢೀರ್ ಬಂದ್ ಆಗಿದ್ದ ಲಿಫ್ಟ್, 6 ಅಡಿಯಷ್ಟು ಕೆಳಗೆ ಕುಸಿದು ನಿಂತಿತ್ತು. ವಿದ್ಯುತ್ ಸಂಪರ್ಕ ಕಡಿತಗೊಂಡು ಲಿಫ್ಟ್ನಲ್ಲಿ ಕತ್ತಲು ಆವರಿಸಿತ್ತು. ಸಹಾಯಕ್ಕಾಗಿ ದೇವಾನಂದ್ ಕೂಗಾಡಲಾರಂಭಿಸಿದ್ದರು. ಮಳಿಗೆಯ ಸಿಬ್ಬಂದಿ, ಲಿಫ್ಟ್ ದುರಸ್ತಿಗೊಳಿಸಿ 15 ನಿಮಿಷಗಳ ನಂತರ ಶಾಸಕ ಹಾಗೂ ಅವರ ಪತ್ನಿಯನ್ನು ಸುರಕ್ಷಿತವಾಗಿ ಹೊರಗೆ ಕರೆತಂದರು.</p>.<p>‘ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಮಳಿಗೆಯವರು ಲಿಫ್ಟ್ ನಿರ್ವಹಣೆ ಸರಿಯಾಗಿ ಮಾಡಿಲ್ಲ. ಅವರ ನಿರ್ಲಕ್ಷ್ಯದಿಂದ ಈ ರೀತಿಯಾಗಿದೆ. ಅವರಿಗೆ ಎಚ್ಚರಿಕೆ ನೀಡಿದ್ದೇನೆ. ಪೊಲೀಸರಿಗೆ ಮಾಹಿತಿ ನೀಡಿದ್ದೇನೆ’ ಎಂದು ದೇವಾನಂದ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p><strong>ಉಡಾನ್–3 ಯೋಜನೆಗೆ ಬೆಳಗಾವಿ ವಿಮಾನ ನಿಲ್ದಾಣ ಆಯ್ಕೆ</strong></p>.<p><strong>ಬೆಳಗಾವಿ:</strong> ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಉಡಾನ್– 3 ಯೋಜನೆಗೆ ಇಲ್ಲಿನ ನಿಲ್ದಾಣ ಆಯ್ಕೆಯಾಗಿದೆ ಎಂದು ಸಂಸದ ಸುರೇಶ ಅಂಗಡಿ ಹೇಳಿದರು.</p>.<p>ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಈ ಯೋಜನೆಯಡಿ ಆಯ್ಕೆಯಾಗುವ ನಿಲ್ದಾಣಗಳಿಂದ ಹಾರಾಟ ನಡೆಸುವ ವಿಮಾನಗಳಿಗೆ ವಿಶೇಷ ರಿಯಾಯಿತಿ ಸೌಲಭ್ಯಗಳು ದೊರೆಯುತ್ತವೆ’ ಎಂದು ಹೇಳಿದರು.</p>.<p><strong>ಕಡಿಮೆ ದರ:</strong> ‘ಒಂದು ಗಂಟೆಗಿಂತ ಕಡಿಮೆ ಪ್ರಯಾಣದ ಅವಧಿ ಅಥವಾ 500 ಕಿ.ಮೀ ಅಂತರದೊಳಗಿನ ನಗರಗಳಿಗೆ ಹೊರಡುವ ವಿಮಾ<br />ನಗಳ ಶೇ 50ರಷ್ಟು ಆಸನಗಳಿಗೆ ಸರ್ಕಾರವು ₹2,500 ನಿಗದಿಪಡಿಸಿದೆ. ಇನ್ನುಳಿದ ವ್ಯತ್ಯಾಸದ ಪ್ರಯಾಣ ದರವನ್ನು ಕೇಂದ್ರ ಸರ್ಕಾರ ವಿಮಾನಯಾನ ಸಂಸ್ಥೆಗಳಿಗೆ ನೀಡುತ್ತದೆ’ ಎಂದು ಸಾಂಬ್ರಾ ವಿಮಾನ ನಿಲ್ದಾಣದ ನಿರ್ದೇಶಕ ರಾಜೇಶಕುಮಾರ ಮೌರ್ಯ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಜಯನಗರದ 11ನೇ ಮುಖ್ಯರಸ್ತೆಯಲ್ಲಿರುವ ‘ತನೇರಿಯಾ’ ಸೀರೆ ಮಾರಾಟ ಮಳಿಗೆಗೆ ಶನಿವಾರ ಹೋಗಿದ್ದ ನಾಗಠಾಣ ಶಾಸಕ ದೇವಾನಂದ ಚವ್ಹಾಣ ಹಾಗೂ ಅವರ ಪತ್ನಿ, ಮಳಿಗೆಯ ಲಿಫ್ಟ್ನಲ್ಲಿ 15 ನಿಮಿಷ ಸಿಲುಕಿದ್ದರು.</p>.<p>ಸಂಜೆ 7.30 ಗಂಟೆ ಸುಮಾರಿಗೆ ಮಳಿಗೆ ಹೋಗಿದ್ದ ದೇವಾನಂದ್, ಕಟ್ಟಡದ ಮೇಲಿನ ಮಹಡಿಗೆ ಹೋಗಲೆಂದು ಪತ್ನಿ ಜೊತೆಯಲ್ಲಿ ಲಿಫ್ಟ್<br />ಹತ್ತಿದ್ದರು.</p>.<p>ದಿಢೀರ್ ಬಂದ್ ಆಗಿದ್ದ ಲಿಫ್ಟ್, 6 ಅಡಿಯಷ್ಟು ಕೆಳಗೆ ಕುಸಿದು ನಿಂತಿತ್ತು. ವಿದ್ಯುತ್ ಸಂಪರ್ಕ ಕಡಿತಗೊಂಡು ಲಿಫ್ಟ್ನಲ್ಲಿ ಕತ್ತಲು ಆವರಿಸಿತ್ತು. ಸಹಾಯಕ್ಕಾಗಿ ದೇವಾನಂದ್ ಕೂಗಾಡಲಾರಂಭಿಸಿದ್ದರು. ಮಳಿಗೆಯ ಸಿಬ್ಬಂದಿ, ಲಿಫ್ಟ್ ದುರಸ್ತಿಗೊಳಿಸಿ 15 ನಿಮಿಷಗಳ ನಂತರ ಶಾಸಕ ಹಾಗೂ ಅವರ ಪತ್ನಿಯನ್ನು ಸುರಕ್ಷಿತವಾಗಿ ಹೊರಗೆ ಕರೆತಂದರು.</p>.<p>‘ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಮಳಿಗೆಯವರು ಲಿಫ್ಟ್ ನಿರ್ವಹಣೆ ಸರಿಯಾಗಿ ಮಾಡಿಲ್ಲ. ಅವರ ನಿರ್ಲಕ್ಷ್ಯದಿಂದ ಈ ರೀತಿಯಾಗಿದೆ. ಅವರಿಗೆ ಎಚ್ಚರಿಕೆ ನೀಡಿದ್ದೇನೆ. ಪೊಲೀಸರಿಗೆ ಮಾಹಿತಿ ನೀಡಿದ್ದೇನೆ’ ಎಂದು ದೇವಾನಂದ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p><strong>ಉಡಾನ್–3 ಯೋಜನೆಗೆ ಬೆಳಗಾವಿ ವಿಮಾನ ನಿಲ್ದಾಣ ಆಯ್ಕೆ</strong></p>.<p><strong>ಬೆಳಗಾವಿ:</strong> ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಉಡಾನ್– 3 ಯೋಜನೆಗೆ ಇಲ್ಲಿನ ನಿಲ್ದಾಣ ಆಯ್ಕೆಯಾಗಿದೆ ಎಂದು ಸಂಸದ ಸುರೇಶ ಅಂಗಡಿ ಹೇಳಿದರು.</p>.<p>ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಈ ಯೋಜನೆಯಡಿ ಆಯ್ಕೆಯಾಗುವ ನಿಲ್ದಾಣಗಳಿಂದ ಹಾರಾಟ ನಡೆಸುವ ವಿಮಾನಗಳಿಗೆ ವಿಶೇಷ ರಿಯಾಯಿತಿ ಸೌಲಭ್ಯಗಳು ದೊರೆಯುತ್ತವೆ’ ಎಂದು ಹೇಳಿದರು.</p>.<p><strong>ಕಡಿಮೆ ದರ:</strong> ‘ಒಂದು ಗಂಟೆಗಿಂತ ಕಡಿಮೆ ಪ್ರಯಾಣದ ಅವಧಿ ಅಥವಾ 500 ಕಿ.ಮೀ ಅಂತರದೊಳಗಿನ ನಗರಗಳಿಗೆ ಹೊರಡುವ ವಿಮಾ<br />ನಗಳ ಶೇ 50ರಷ್ಟು ಆಸನಗಳಿಗೆ ಸರ್ಕಾರವು ₹2,500 ನಿಗದಿಪಡಿಸಿದೆ. ಇನ್ನುಳಿದ ವ್ಯತ್ಯಾಸದ ಪ್ರಯಾಣ ದರವನ್ನು ಕೇಂದ್ರ ಸರ್ಕಾರ ವಿಮಾನಯಾನ ಸಂಸ್ಥೆಗಳಿಗೆ ನೀಡುತ್ತದೆ’ ಎಂದು ಸಾಂಬ್ರಾ ವಿಮಾನ ನಿಲ್ದಾಣದ ನಿರ್ದೇಶಕ ರಾಜೇಶಕುಮಾರ ಮೌರ್ಯ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>