<p><strong>ಬೆಂಗಳೂರು:</strong> ತೆಂಗಿನ ಉಪ ಉತ್ಪನ್ನ ‘ನೀರಾ’ವನ್ನು ಅಧಿಕ ಪ್ರಮಾಣದಲ್ಲಿ ಉತ್ಪಾದಿಸುವುದಕ್ಕಾಗಿರೈತರ ಕಂಪನಿಗಳಿಗೆ ಅನುಮತಿ ನೀಡುವಲ್ಲಿ ಕೇಂದ್ರದ ತೆಂಗು ಅಭಿವೃದ್ಧಿ ಮಂಡಳಿ (ಸಿಡಿಬಿ) ತಾರತಮ್ಯ ಧೋರಣೆ ತಳೆದಿದೆ ಎಂಬ ಬಲವಾದ ಆರೋಪ ಕೇಳಿಬಂದಿದೆ.</p>.<p>ಕಂಪನಿಗೆ ನೀರಾ ಇಳಿಸಲು ಅನುಮತಿ ನೀಡುವಂತಿಲ್ಲ,ಸೊಸೈಟಿಗಳ ಒಕ್ಕೂಟದ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ಮಂಡಳಿ ಹೇಳುತ್ತದೆ. ಆದರೆ ಕರ್ನಾಟಕ ಸೊಸೈಟಿ ಕಾಯ್ದೆ ಪ್ರಕಾರ ಒಂದು ಸೊಸೈಟಿಯು ಇನ್ನೊಂದು ಸೊಸೈಟಿಯ ಸದಸ್ಯನಾಗುವುದು ಸಾಧ್ಯವಿಲ್ಲ. ಹೀಗಾಗಿ ಈ ನಿಯಮ ಸಡಿಲಿಸಬೇಕು ಎಂಬ ಬೇಡಿಕೆ ಇದೆ.</p>.<p>‘ಕಂಪನಿಯೊಂದಕ್ಕೆ ನೀರಾ ಉತ್ಪಾದಿಸಲು ಅನುಮತಿ ನೀಡಬೇಕಿದ್ದರೆ ಗರಿಷ್ಠ ಷೇರು ಬಂಡವಾಳ ₹1 ಕೋಟಿ ಹಾಗೂ ಪಾವತಿ ಬಂಡವಾಳ ₹50 ಲಕ್ಷ ಇರಬೇಕು ಎಂಬ ನಿಯಮ ರೂಪಿಸಲಾಗಿದೆ. ಆದರೆ ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ ಈ ನಿಯಮದಲ್ಲಿ ಸಡಿಲಿಕೆ ಮಾಡಿ, ಕ್ರಮವಾಗಿ ₹20 ಲಕ್ಷ ಮತ್ತು ₹ 10 ಲಕ್ಷಕ್ಕೆ ತಗ್ಗಿಸಲಾಗಿದೆ’ ಎಂದು ಮಲೆನಾಡ್ ನಟ್ಸ್ ಆ್ಯಂಡ್ಸ್ಪೈಸಸ್ಪ್ರೊಡ್ಯೂಸರ್ ಕಂಪನಿ ಸಂಸ್ಥಾಪಕ ಮನೋಹರ ಮಸ್ಕಿ ತಿಳಿಸಿದರು.</p>.<p>‘ಸಬ್ಸಿಡಿ ವಿಷಯದಲ್ಲೂ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ.ಹಲವು ಖಾಸಗಿ ಕಂಪನಿಗಳಿಗೆ ಸಬ್ಸಿಡಿ ನೀಡಲಾಗಿದೆ. ಆದರೆ ನಮ್ಮ ಕಂಪನಿ ಎಲ್ಲ ಮಾನದಂಡಗಳನ್ನು ಹೊಂದಿದ್ದರೂ ಸುಮಾರು ₹50 ಲಕ್ಷದಷ್ಟು ಸಬ್ಸಿಡಿ ನೀಡದೆ ಸತಾಯಿಸಲಾಗುತ್ತಿದೆ’ ಎಂದರು.</p>.<p>ಈ ಬಗ್ಗೆ ಬೆಂಗಳೂರಿನಸಿಡಿಬಿ ನಿರ್ದೇಶಕರನ್ನು ಸಂಪರ್ಕಿಸಿದಾಗ, ‘ನಿಜವಾದ ತೆಂಗು ಬೆಳೆಗಾರ ಸಂಘಕ್ಕೆ ಅಥವಾ ಕಂಪನಿಗೆ ಮಾತ್ರ ಮಂಡಳಿಯ ಮಾನ್ಯತೆ ಕೊಡಲಾಗುತ್ತಿದೆ, ನೀರಾ ಇಳಿಸುವ ಪರವಾನಗಿ ನೀಡುವುದು ರಾಜ್ಯ ಸರ್ಕಾರಕ್ಕೆ ಬಿಟ್ಟ ವಿಚಾರ’ ಎಂದರು.</p>.<p><strong>***</strong></p>.<p>ಸಿಡಿಬಿ ತಾರತಮ್ಯ ನೀತಿ ಸರಿಯಿಲ್ಲ. ಈ ಹಿಂದೆ ನಾಲ್ವರು ಸಿಬಿಐ ತನಿಖೆಗೆ ಒಳಪಟ್ಟು ಅಮಾನತುಗೊಂಡಿದ್ದನ್ನು ಮರೆತಿಲ್ಲ</p>.<p><strong>-ಮನೋಹರ ಮಸ್ಕಿ, ಮಲನಾಡ್ ನಟ್ಸ್ ಕಂಪನಿಯ ಸಂಸ್ಥಾಪಕ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ತೆಂಗಿನ ಉಪ ಉತ್ಪನ್ನ ‘ನೀರಾ’ವನ್ನು ಅಧಿಕ ಪ್ರಮಾಣದಲ್ಲಿ ಉತ್ಪಾದಿಸುವುದಕ್ಕಾಗಿರೈತರ ಕಂಪನಿಗಳಿಗೆ ಅನುಮತಿ ನೀಡುವಲ್ಲಿ ಕೇಂದ್ರದ ತೆಂಗು ಅಭಿವೃದ್ಧಿ ಮಂಡಳಿ (ಸಿಡಿಬಿ) ತಾರತಮ್ಯ ಧೋರಣೆ ತಳೆದಿದೆ ಎಂಬ ಬಲವಾದ ಆರೋಪ ಕೇಳಿಬಂದಿದೆ.</p>.<p>ಕಂಪನಿಗೆ ನೀರಾ ಇಳಿಸಲು ಅನುಮತಿ ನೀಡುವಂತಿಲ್ಲ,ಸೊಸೈಟಿಗಳ ಒಕ್ಕೂಟದ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ಮಂಡಳಿ ಹೇಳುತ್ತದೆ. ಆದರೆ ಕರ್ನಾಟಕ ಸೊಸೈಟಿ ಕಾಯ್ದೆ ಪ್ರಕಾರ ಒಂದು ಸೊಸೈಟಿಯು ಇನ್ನೊಂದು ಸೊಸೈಟಿಯ ಸದಸ್ಯನಾಗುವುದು ಸಾಧ್ಯವಿಲ್ಲ. ಹೀಗಾಗಿ ಈ ನಿಯಮ ಸಡಿಲಿಸಬೇಕು ಎಂಬ ಬೇಡಿಕೆ ಇದೆ.</p>.<p>‘ಕಂಪನಿಯೊಂದಕ್ಕೆ ನೀರಾ ಉತ್ಪಾದಿಸಲು ಅನುಮತಿ ನೀಡಬೇಕಿದ್ದರೆ ಗರಿಷ್ಠ ಷೇರು ಬಂಡವಾಳ ₹1 ಕೋಟಿ ಹಾಗೂ ಪಾವತಿ ಬಂಡವಾಳ ₹50 ಲಕ್ಷ ಇರಬೇಕು ಎಂಬ ನಿಯಮ ರೂಪಿಸಲಾಗಿದೆ. ಆದರೆ ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ ಈ ನಿಯಮದಲ್ಲಿ ಸಡಿಲಿಕೆ ಮಾಡಿ, ಕ್ರಮವಾಗಿ ₹20 ಲಕ್ಷ ಮತ್ತು ₹ 10 ಲಕ್ಷಕ್ಕೆ ತಗ್ಗಿಸಲಾಗಿದೆ’ ಎಂದು ಮಲೆನಾಡ್ ನಟ್ಸ್ ಆ್ಯಂಡ್ಸ್ಪೈಸಸ್ಪ್ರೊಡ್ಯೂಸರ್ ಕಂಪನಿ ಸಂಸ್ಥಾಪಕ ಮನೋಹರ ಮಸ್ಕಿ ತಿಳಿಸಿದರು.</p>.<p>‘ಸಬ್ಸಿಡಿ ವಿಷಯದಲ್ಲೂ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ.ಹಲವು ಖಾಸಗಿ ಕಂಪನಿಗಳಿಗೆ ಸಬ್ಸಿಡಿ ನೀಡಲಾಗಿದೆ. ಆದರೆ ನಮ್ಮ ಕಂಪನಿ ಎಲ್ಲ ಮಾನದಂಡಗಳನ್ನು ಹೊಂದಿದ್ದರೂ ಸುಮಾರು ₹50 ಲಕ್ಷದಷ್ಟು ಸಬ್ಸಿಡಿ ನೀಡದೆ ಸತಾಯಿಸಲಾಗುತ್ತಿದೆ’ ಎಂದರು.</p>.<p>ಈ ಬಗ್ಗೆ ಬೆಂಗಳೂರಿನಸಿಡಿಬಿ ನಿರ್ದೇಶಕರನ್ನು ಸಂಪರ್ಕಿಸಿದಾಗ, ‘ನಿಜವಾದ ತೆಂಗು ಬೆಳೆಗಾರ ಸಂಘಕ್ಕೆ ಅಥವಾ ಕಂಪನಿಗೆ ಮಾತ್ರ ಮಂಡಳಿಯ ಮಾನ್ಯತೆ ಕೊಡಲಾಗುತ್ತಿದೆ, ನೀರಾ ಇಳಿಸುವ ಪರವಾನಗಿ ನೀಡುವುದು ರಾಜ್ಯ ಸರ್ಕಾರಕ್ಕೆ ಬಿಟ್ಟ ವಿಚಾರ’ ಎಂದರು.</p>.<p><strong>***</strong></p>.<p>ಸಿಡಿಬಿ ತಾರತಮ್ಯ ನೀತಿ ಸರಿಯಿಲ್ಲ. ಈ ಹಿಂದೆ ನಾಲ್ವರು ಸಿಬಿಐ ತನಿಖೆಗೆ ಒಳಪಟ್ಟು ಅಮಾನತುಗೊಂಡಿದ್ದನ್ನು ಮರೆತಿಲ್ಲ</p>.<p><strong>-ಮನೋಹರ ಮಸ್ಕಿ, ಮಲನಾಡ್ ನಟ್ಸ್ ಕಂಪನಿಯ ಸಂಸ್ಥಾಪಕ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>