<p><strong>ರಾಯಚೂರು:</strong> ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಸುಂಕೇಶ್ವರಹಾಳ ಸಮೀಪ ನಾರಾಯಣಪುರ ಬಲದಂಡೆ ಕಾಲುವೆಯ (ಎನ್ಆರ್ಬಿಸಿ) 94 ಕಿಲೋ ಮೀಟರ್ ಸಮೀಪ 17ನೇ ವಿತರಣಾ ಕಾಲುವೆಯು ಸೋಮವಾರ ಬೆಳಿಗ್ಗೆ ಒಡೆದು ಅಪಾರ ಪ್ರಮಾಣದ ಬೆಳೆಹಾನಿಯಾಗಿದೆ.</p>.<p>40 ಎಕರೆಗಿಂತಲೂ ಹೆಚ್ಚು ಭತ್ತದ ಬೆಳೆಯಲ್ಲಿ ನೀರು ನಿಂತಿದ್ದು, ಆಲ್ದರ್ತಿ, ಜಾಡಲದಿನ್ನಿ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆ ಕೊಚ್ಚಿಹೋಗಿದ್ದರಿಂದ ಸಂಪರ್ಕ ಕಡಿತವಾಗಿದೆ. ಮಧ್ಯಾಹ್ನವಾದರೂ ಸ್ಥಳಕ್ಕೆ ಯಾವುದೇ ಅಧಿಕಾರಿಗಳ ಬರದೆ ಇರುವುದಕ್ಕೆ ರೈತರ ಅಸಮಾಧಾನ ವ್ಯಕ್ತಪಡಿಸಿದ್ದು, ಬೆಳೆಹಾನಿಗೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.</p>.<p>‘ಒಂದುವರೆ ಅಡಿ ಬಿಟ್ಟಿರುವ ನೀರಿನ ಒತ್ತಡಕ್ಕೆ ಕಾಲುವೆ ಎರಡು ಕಡೆಗಳಲ್ಲಿ ಒಡೆದಿದೆ. ಸುಮಾರು 40 ಅಡಿ ಕೊಚ್ಚಿಹೋಗಿದೆ. ಕಾಲುವೆ ದುರಸ್ತಿಗೆ ಅಗತ್ಯ ಸಲಕರಣೆಗಳನ್ನು ಎನ್ಆರ್ಬಿಸಿ ಎಂಜಿನಿಯರುಗಳು ಕ್ರೋಢೀಕರಿಸಿಕೊಂಡಿದ್ದು, ತ್ವರಿತವಾಗಿ ದುರಸ್ತಿ ಕೆಲಸ ಮಾಡಲಿದ್ದಾರೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು:</strong> ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಸುಂಕೇಶ್ವರಹಾಳ ಸಮೀಪ ನಾರಾಯಣಪುರ ಬಲದಂಡೆ ಕಾಲುವೆಯ (ಎನ್ಆರ್ಬಿಸಿ) 94 ಕಿಲೋ ಮೀಟರ್ ಸಮೀಪ 17ನೇ ವಿತರಣಾ ಕಾಲುವೆಯು ಸೋಮವಾರ ಬೆಳಿಗ್ಗೆ ಒಡೆದು ಅಪಾರ ಪ್ರಮಾಣದ ಬೆಳೆಹಾನಿಯಾಗಿದೆ.</p>.<p>40 ಎಕರೆಗಿಂತಲೂ ಹೆಚ್ಚು ಭತ್ತದ ಬೆಳೆಯಲ್ಲಿ ನೀರು ನಿಂತಿದ್ದು, ಆಲ್ದರ್ತಿ, ಜಾಡಲದಿನ್ನಿ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆ ಕೊಚ್ಚಿಹೋಗಿದ್ದರಿಂದ ಸಂಪರ್ಕ ಕಡಿತವಾಗಿದೆ. ಮಧ್ಯಾಹ್ನವಾದರೂ ಸ್ಥಳಕ್ಕೆ ಯಾವುದೇ ಅಧಿಕಾರಿಗಳ ಬರದೆ ಇರುವುದಕ್ಕೆ ರೈತರ ಅಸಮಾಧಾನ ವ್ಯಕ್ತಪಡಿಸಿದ್ದು, ಬೆಳೆಹಾನಿಗೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.</p>.<p>‘ಒಂದುವರೆ ಅಡಿ ಬಿಟ್ಟಿರುವ ನೀರಿನ ಒತ್ತಡಕ್ಕೆ ಕಾಲುವೆ ಎರಡು ಕಡೆಗಳಲ್ಲಿ ಒಡೆದಿದೆ. ಸುಮಾರು 40 ಅಡಿ ಕೊಚ್ಚಿಹೋಗಿದೆ. ಕಾಲುವೆ ದುರಸ್ತಿಗೆ ಅಗತ್ಯ ಸಲಕರಣೆಗಳನ್ನು ಎನ್ಆರ್ಬಿಸಿ ಎಂಜಿನಿಯರುಗಳು ಕ್ರೋಢೀಕರಿಸಿಕೊಂಡಿದ್ದು, ತ್ವರಿತವಾಗಿ ದುರಸ್ತಿ ಕೆಲಸ ಮಾಡಲಿದ್ದಾರೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>