<p><strong>ಮಹದೇಶ್ವರ ಬೆಟ್ಟ: </strong>ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ಪ್ರಕಟಿಸಿರುವ 2019ರ ಕ್ಯಾಲೆಂಡರ್ನಲ್ಲಿ ಆಗಸ್ಟ್ ತಿಂಗಳವರೆಗೆ ಮಾತ್ರ ಮುದ್ರಣವಾಗಿದೆ. ಈ ಕ್ಯಾಲೆಂಡರ್ ಅನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನ.30ರಂದು ಬಿಡುಗಡೆ ಮಾಡಿದ್ದರು.</p>.<p>ನಾಲ್ಕು ತಿಂಗಳ ವಿವರಗಳು ಇಲ್ಲದ ಕ್ಯಾಲೆಂಡರ್ಗಳನ್ನೇ ಭಕ್ತರು ಹಾಗೂ ಸ್ಥಳೀಯರಿಗೆ ಪ್ರಾಧಿಕಾರವು ₹ 20ಕ್ಕೆ ಮಾರಾಟ ಮಾಡುತ್ತಿದೆ.</p>.<p>ಪ್ರಾಧಿಕಾರವು ಪ್ರತಿ ವರ್ಷ ಕ್ಯಾಲೆಂಡರ್ ಮುದ್ರಿಸಿ ಮಾರಾಟ ಮಾಡುತ್ತದೆ. ದೇವಾಲಯದಲ್ಲಿ ನಡೆಯುವ ಉತ್ಸವಗಳು, ಪೂಜಾ ಸಮಯ, ವಿವಿಧ ಸೇವೆಗಳ ವಿವರಗಳು ಇದರಲ್ಲಿ ಇವೆ. ಹೀಗಾಗಿ, ತಪ್ಪನ್ನು ಸರಿಪಡಿಸಿ ಹೊಸದಾಗಿ ಕ್ಯಾಲೆಂಡರ್ ವಿತರಿಸುವಂತೆ ಭಕ್ತರು ಆಗ್ರಹಿಸಿದ್ದಾರೆ.</p>.<p>**<br />ಇದು ಮುದ್ರಣದೋಷದ ಪ್ರಮಾದ. ಮುಂದೆ ಮುದ್ರಣಗೊಳ್ಳಲಿರುವ ಕ್ಯಾಲೆಂಡರ್ಗಳಲ್ಲಿ ಈ ಸಮಸ್ಯೆ ಆಗದು. ದೋಷಪೂರಿತ ಕ್ಯಾಲೆಂಡರ್ ಖರೀದಿಸಿದವರಿಗೆ ಹೊಸ ಕ್ಯಾಲೆಂಡರ್ ವಿತರಿಸಲಾಗುವುದು<br /><em><strong>- ಕೆ.ಎಂ.ಗಾಯತ್ರಿ, ಪ್ರಾಧಿಕಾರದ ಕಾರ್ಯದರ್ಶಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಹದೇಶ್ವರ ಬೆಟ್ಟ: </strong>ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ಪ್ರಕಟಿಸಿರುವ 2019ರ ಕ್ಯಾಲೆಂಡರ್ನಲ್ಲಿ ಆಗಸ್ಟ್ ತಿಂಗಳವರೆಗೆ ಮಾತ್ರ ಮುದ್ರಣವಾಗಿದೆ. ಈ ಕ್ಯಾಲೆಂಡರ್ ಅನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನ.30ರಂದು ಬಿಡುಗಡೆ ಮಾಡಿದ್ದರು.</p>.<p>ನಾಲ್ಕು ತಿಂಗಳ ವಿವರಗಳು ಇಲ್ಲದ ಕ್ಯಾಲೆಂಡರ್ಗಳನ್ನೇ ಭಕ್ತರು ಹಾಗೂ ಸ್ಥಳೀಯರಿಗೆ ಪ್ರಾಧಿಕಾರವು ₹ 20ಕ್ಕೆ ಮಾರಾಟ ಮಾಡುತ್ತಿದೆ.</p>.<p>ಪ್ರಾಧಿಕಾರವು ಪ್ರತಿ ವರ್ಷ ಕ್ಯಾಲೆಂಡರ್ ಮುದ್ರಿಸಿ ಮಾರಾಟ ಮಾಡುತ್ತದೆ. ದೇವಾಲಯದಲ್ಲಿ ನಡೆಯುವ ಉತ್ಸವಗಳು, ಪೂಜಾ ಸಮಯ, ವಿವಿಧ ಸೇವೆಗಳ ವಿವರಗಳು ಇದರಲ್ಲಿ ಇವೆ. ಹೀಗಾಗಿ, ತಪ್ಪನ್ನು ಸರಿಪಡಿಸಿ ಹೊಸದಾಗಿ ಕ್ಯಾಲೆಂಡರ್ ವಿತರಿಸುವಂತೆ ಭಕ್ತರು ಆಗ್ರಹಿಸಿದ್ದಾರೆ.</p>.<p>**<br />ಇದು ಮುದ್ರಣದೋಷದ ಪ್ರಮಾದ. ಮುಂದೆ ಮುದ್ರಣಗೊಳ್ಳಲಿರುವ ಕ್ಯಾಲೆಂಡರ್ಗಳಲ್ಲಿ ಈ ಸಮಸ್ಯೆ ಆಗದು. ದೋಷಪೂರಿತ ಕ್ಯಾಲೆಂಡರ್ ಖರೀದಿಸಿದವರಿಗೆ ಹೊಸ ಕ್ಯಾಲೆಂಡರ್ ವಿತರಿಸಲಾಗುವುದು<br /><em><strong>- ಕೆ.ಎಂ.ಗಾಯತ್ರಿ, ಪ್ರಾಧಿಕಾರದ ಕಾರ್ಯದರ್ಶಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>