ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ತಮ್ಮ ಸರ್ಕಾರದ ಗ್ಯಾರಂಟಿಗಳಿಂದ ಬಡವರ ಬದುಕು ಹಸನಾಗಿದೆ, ಬಡತನ ನಿರ್ಮೂಲನೆ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ ಬೊಗಳೆ ಬಿಡುತ್ತಾರೆ. ನಿಜವಾಗಿಯೂ ಗ್ಯಾರಂಟಿಗಳಿಂದ ಬಡವರ ಕಷ್ಟ ಪರಿಹಾರ ಆಗಿದ್ದಿದ್ದರೆ, ಇವತ್ತು ಹೊಟ್ಟೆಪಾಡಿಗಾಗಿ ಗ್ರಾಮ ಗ್ರಾಮಗಳೇ ಗುಳೆ ಹೋಗುವ ಪರಿಸ್ಥಿತಿ ಯಾಕೆ ಬರುತ್ತಿತ್ತು ಎಂದು ಪ್ರಶ್ನಿಸಿದ್ದಾರೆ.
ಗ್ಯಾರಂಟಿಗಳು ನಿಮ್ಮ ಪಕ್ಷವನ್ನು (ಕಾಂಗ್ರೆಸ್) ಚುನಾವಣೆಯಲ್ಲಿ ಗೆಲ್ಲಿಸಿತೇ ಹೊರತು, ಜನರ ಬದುಕನ್ನು ಖಂಡಿತ ಗೆಲ್ಲಿಸಲಿಲ್ಲ. ಜನರ ಬದುಕನ್ನು ಗೆಲ್ಲಿಸಲು ಬೇಕಿರುವುದು ದೂರದೃಷ್ಟಿಯುಳ್ಳ, ಶಾಶ್ವತವಾದ ಅಭಿವೃದ್ಧಿ ಎಂದು ಅವರು ತಿಳಿಸಿದ್ದಾರೆ.