‘ಪಾದಯಾತ್ರೆಗೆ ಹರಿಹರ ಪೀಠ ಬೆಂಬಲಿಸುವುದಿಲ್ಲ, ಎರಡೂ ಪೀಠಗಳ ನಡುವೆ ಸಹಮತ ಇಲ್ಲ ಎಂಬ ಭಾವನೆ ಅನೇಕರಲ್ಲಿತ್ತು. ಪಾದಯಾತ್ರೆ ಹರಿಹರಕ್ಕೆ ಬಂದಾಗ ಹೋರಾಟ ವಿಫಲವಾಗುತ್ತದೆ ಎಂದು ಊಹಿಸಿದ್ದರು. ಆದರೆ, ನಾವಿಬ್ಬರೂ ಒಂದೇ ಆಗಿದ್ದೀವಿ. ಬಹಿರಂಗವಾಗಿ ಒಂದಾಗಿದ್ದೇವೆ. ಅದಕ್ಕಾಗಿ ನಾಯಕರು, ಜನರು ಒಂದಾದರು’ ಎಂದು ಸ್ವಾಮೀಜಿ ಹೇಳಿದರು.