<p><strong>ಚಿತ್ರದುರ್ಗ:</strong> ಇಲ್ಲಿನ ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣದ ಹಿನ್ನೆಲೆಯಲ್ಲಿ ಮಠದ ಭಾನುವಾರ ಬಿರುಸಿನ ಚಟುವಟಿಕೆಗಳಿಗೆ ಸಾಕ್ಷಿಯಾಯಿತು.</p>.<p>ಇನ್ನೊಂದು ಬೆಳವಣಿಗೆಯಲ್ಲಿ ಮಠದ ಭಕ್ತರು ಹಾಘೂ, ಸಲಹಾ ಸಮಿತಿ ಸದಸ್ಯರು ಮಧ್ಯಪ್ರವೇಶಿಸಿ ಪ್ರಕರಣದ ಸುಖಾಂತ್ಯಕ್ಕೆ ಪ್ರಯತ್ನಿಸಿದ್ದಾರೆ ಎಂದು ಹೇಳಲಾಗಿದೆ.</p>.<p>ಮುರುಘಾ ಶರಣರು ಹಾಗೂ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್ ಅವರನ್ನು ಮುಖಾಮುಖಿ ಮಾಡಿಸಿ ಚರ್ಚೆಗೆ ಅವಕಾಶ ಕಲ್ಪಿಸಲಾಗಿತ್ತು ಎಂದು ಮೂಲಗಳು ಮಾಹಿತಿ ನೀಡಿವೆ.</p>.<p>ತಾಲ್ಲೂಕಿನ ಸಿದ್ದಾಪುರ ಗ್ರಾಮದ ಮನೆಯೊಂದರಲ್ಲಿ ಎಲ್ಲರೂ ಸೇರಿದ್ದರು ಎನ್ನಲಾದ ಚಿತ್ರ ಜಾಲತಾಣದಲ್ಲಿ ಹರಿದಾಡುತ್ತಿದೆ. ವೀರಶೈವ ಲಿಂಗಾಯತ ಸಮುದಾಯದ ಮುಖಂಡರು, ವಿವಿಧ ಸಮುದಾಯದ ಮಠಾಧೀಶರ ಸಮ್ಮುಖದಲ್ಲಿ ಈ ಪ್ರಯತ್ನ ನಡೆದಿದೆ. ಸಾಕ್ಷ್ಯಾಧಾರಗಳನ್ನು ಪರಸ್ಪರ ಹಸ್ತಾಂತರ ಮಾಡಿಕೊಂಡು ಸುಖಾಂತ್ಯಗೊಳಿಸಿಕೊಳ್ಳುವ ಉದ್ದೇಶ ಈಡೇರಲಿಲ್ಲ ಎಂಬ ಮಾತೂ ಕೇಳಿಬಂದಿದೆ.</p>.<p><strong>ಶರಣರ ಪರ–ವಿರುದ್ಧ ಪ್ರತಿಭಟನೆ:</strong> ಆರೋಪಿ ಸ್ಥಾನದಲ್ಲಿರುವ ಶಿವಮೂರ್ತಿ ಮುರುಘಾ ಶರಣರ ಪರ ಹಾಗೂ ವಿರುದ್ಧ ಪ್ರತಿಭಟನೆಗಳು ಭಾನುವಾರ ನಡೆದವು. ಶರಣರನ್ನು ಬಂಧಿಸದಂತೆ ಭಕ್ತರು ಹಾಗೂ ಪ್ರಕರಣವನ್ನು ಉನ್ನತ ತನಿಖೆಗೆ ಒಳಪಡಿಸುವಂತೆ ಸಂಘಟನೆಗಳ ಮುಖಂಡರು ಪ್ರತ್ಯೇಕವಾಗಿ ಪ್ರತಿಭಟಿಸಿದರು.</p>.<p>ಶಿವಮೂರ್ತಿ ಮುರುಘಾ ಶರಣರನ್ನು ಭೇಟಿಯಾಗಿದ್ದ ಭಕ್ತರ ಗುಂಪು ಮೌನ ಪ್ರತಿಭಟನೆ ಆರಂಭಿಸಿತು. ಎಚ್ಚರಿಕೆಯ ಹೆಜ್ಜೆ ಇಡಬೇಕು, ಶರಣರನ್ನು ಬಂಧಿಸಬಾರದು ಎಂಬ ಒತ್ತಾಯ ಕೇಳಿಬಂತು. ಕಾನೂನು ಕ್ರಮ ಕೈಗೊಂಡರೆ ಪರಿಸ್ಥಿತಿ ಬಿಗಡಾಯಿಸುತ್ತದೆ ಎಂಬ ಮಾತುಗಳು ಕೇಳಿಬಂದವು</p>.<p>ಬಾಲಕಿಯರ ಬಾಲಮಂದಿರದ ಎದುರು ಸೇರಿದ್ದ ಮತ್ತೊಂದು ಗುಂಪು, ಆರೋಪಕ್ಕೆ ಗುರಿಯಾಗಿರುವ ಶರಣರ ವಿರುದ್ಧ ಆಕ್ರೋಶ ಹೊರಹಾಕಿತು. ಸಂತ್ರಸ್ತ ಬಾಲಕಿಯರಿಗೆ ಧೈರ್ಯ ತುಂಬುವ ಘೋಷಣೆ ಕೂಗಿತು. ನಿಷ್ಪಕ್ಷಪಾತ ತನಿಖೆ ನಡೆಸುವ ಕುರಿತು ಅನುಮಾನಗಳಿವೆ ಎಂದು ಗುಂಪು ಆರೋಪಿಸಿತು.</p>.<p>*</p>.<p>ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಆಘಾತಕಾರಿ ಆಪಾದನೆ ಕೇಳಿಬಂದಿದೆ. ಮಠಕ್ಕೆ ಉತ್ತಮ ಹೆಸರಿದೆ. ಅದನ್ನು ಮತ್ತೆ ಎತ್ತಿಹಿಡಿಯುವ ವಿಶ್ವಾಸವಿದೆ.<br />-<em><strong>ಮಹಿಮ ಪಟೇಲ್, ಜೆಡಿಯು ರಾಜ್ಯ ಘಟಕದ ಅಧ್ಯಕ್ಷ</strong></em></p>.<p>*</p>.<p>ಪೀಠಾಧ್ಯಕ್ಷರ ಮೇಲಿನ ಆರೋಪ ಸತ್ಯಕ್ಕೆ ದೂರ ಗುರುಗಳ ಧರ್ಮ ಸಂಸ್ಕಾರ ಮತ್ತು ಹೆಜ್ಜೆಗುರುತು ಗಮನಿಸಿದರೆ ಅಹಿತಕರ ಘಟನೆ ನಡೆದಿರಲು ಸಾಧ್ಯವಿಲ್ಲ.<br /><em><strong>-ಎಚ್.ಎಸ್. ಶಿವಶಂಕರ್, ಮಾಜಿ ಶಾಸಕ, ಹರಿಹರ</strong></em></p>.<p><strong>ಇವನ್ನೂ ಓದಿ...</strong></p>.<p><a href="https://www.prajavani.net/karnataka-news/murugha-sharanaru-chitradurga-sexual-harassment-case-fir-against-shivamurthy-966989.html" itemprop="url" target="_blank">ಮುರುಘಾ ಶರಣರ ವಿರುದ್ಧ ದೂರು: ಚಿತ್ರದುರ್ಗ ಮಠದಲ್ಲಿ ಬಿರುಸಿನ ಚಟುವಟಿಕೆ</a></p>.<p><a href="https://www.prajavani.net/karnataka-news/rape-sexual-harassment-by-swamiji-of-a-prestigious-mysore-math-complaint-karnataka-966966.html" itemprop="url" target="_blank">ನಾಡಿನ ಪ್ರತಿಷ್ಠಿತ ಮಠವೊಂದರ ಸ್ವಾಮೀಜಿಯಿಂದ ನಿರಂತರ ಲೈಂಗಿಕ ಕಿರುಕುಳ: ದೂರು</a></p>.<p><a href="https://www.prajavani.net/karnataka-news/odanadi-mysore-sexual-harassment-case-against-shivamurthy-murugha-sharanaru-966995.html" target="_blank">ಮುರುಘಾ ಶರಣರ ಪ್ರಕರಣ: ನ್ಯಾಯಾಂಗ ತನಿಖೆಗೆ ಒಡನಾಡಿ ಸಂಸ್ಥೆ ಆಗ್ರಹ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ:</strong> ಇಲ್ಲಿನ ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣದ ಹಿನ್ನೆಲೆಯಲ್ಲಿ ಮಠದ ಭಾನುವಾರ ಬಿರುಸಿನ ಚಟುವಟಿಕೆಗಳಿಗೆ ಸಾಕ್ಷಿಯಾಯಿತು.</p>.<p>ಇನ್ನೊಂದು ಬೆಳವಣಿಗೆಯಲ್ಲಿ ಮಠದ ಭಕ್ತರು ಹಾಘೂ, ಸಲಹಾ ಸಮಿತಿ ಸದಸ್ಯರು ಮಧ್ಯಪ್ರವೇಶಿಸಿ ಪ್ರಕರಣದ ಸುಖಾಂತ್ಯಕ್ಕೆ ಪ್ರಯತ್ನಿಸಿದ್ದಾರೆ ಎಂದು ಹೇಳಲಾಗಿದೆ.</p>.<p>ಮುರುಘಾ ಶರಣರು ಹಾಗೂ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್ ಅವರನ್ನು ಮುಖಾಮುಖಿ ಮಾಡಿಸಿ ಚರ್ಚೆಗೆ ಅವಕಾಶ ಕಲ್ಪಿಸಲಾಗಿತ್ತು ಎಂದು ಮೂಲಗಳು ಮಾಹಿತಿ ನೀಡಿವೆ.</p>.<p>ತಾಲ್ಲೂಕಿನ ಸಿದ್ದಾಪುರ ಗ್ರಾಮದ ಮನೆಯೊಂದರಲ್ಲಿ ಎಲ್ಲರೂ ಸೇರಿದ್ದರು ಎನ್ನಲಾದ ಚಿತ್ರ ಜಾಲತಾಣದಲ್ಲಿ ಹರಿದಾಡುತ್ತಿದೆ. ವೀರಶೈವ ಲಿಂಗಾಯತ ಸಮುದಾಯದ ಮುಖಂಡರು, ವಿವಿಧ ಸಮುದಾಯದ ಮಠಾಧೀಶರ ಸಮ್ಮುಖದಲ್ಲಿ ಈ ಪ್ರಯತ್ನ ನಡೆದಿದೆ. ಸಾಕ್ಷ್ಯಾಧಾರಗಳನ್ನು ಪರಸ್ಪರ ಹಸ್ತಾಂತರ ಮಾಡಿಕೊಂಡು ಸುಖಾಂತ್ಯಗೊಳಿಸಿಕೊಳ್ಳುವ ಉದ್ದೇಶ ಈಡೇರಲಿಲ್ಲ ಎಂಬ ಮಾತೂ ಕೇಳಿಬಂದಿದೆ.</p>.<p><strong>ಶರಣರ ಪರ–ವಿರುದ್ಧ ಪ್ರತಿಭಟನೆ:</strong> ಆರೋಪಿ ಸ್ಥಾನದಲ್ಲಿರುವ ಶಿವಮೂರ್ತಿ ಮುರುಘಾ ಶರಣರ ಪರ ಹಾಗೂ ವಿರುದ್ಧ ಪ್ರತಿಭಟನೆಗಳು ಭಾನುವಾರ ನಡೆದವು. ಶರಣರನ್ನು ಬಂಧಿಸದಂತೆ ಭಕ್ತರು ಹಾಗೂ ಪ್ರಕರಣವನ್ನು ಉನ್ನತ ತನಿಖೆಗೆ ಒಳಪಡಿಸುವಂತೆ ಸಂಘಟನೆಗಳ ಮುಖಂಡರು ಪ್ರತ್ಯೇಕವಾಗಿ ಪ್ರತಿಭಟಿಸಿದರು.</p>.<p>ಶಿವಮೂರ್ತಿ ಮುರುಘಾ ಶರಣರನ್ನು ಭೇಟಿಯಾಗಿದ್ದ ಭಕ್ತರ ಗುಂಪು ಮೌನ ಪ್ರತಿಭಟನೆ ಆರಂಭಿಸಿತು. ಎಚ್ಚರಿಕೆಯ ಹೆಜ್ಜೆ ಇಡಬೇಕು, ಶರಣರನ್ನು ಬಂಧಿಸಬಾರದು ಎಂಬ ಒತ್ತಾಯ ಕೇಳಿಬಂತು. ಕಾನೂನು ಕ್ರಮ ಕೈಗೊಂಡರೆ ಪರಿಸ್ಥಿತಿ ಬಿಗಡಾಯಿಸುತ್ತದೆ ಎಂಬ ಮಾತುಗಳು ಕೇಳಿಬಂದವು</p>.<p>ಬಾಲಕಿಯರ ಬಾಲಮಂದಿರದ ಎದುರು ಸೇರಿದ್ದ ಮತ್ತೊಂದು ಗುಂಪು, ಆರೋಪಕ್ಕೆ ಗುರಿಯಾಗಿರುವ ಶರಣರ ವಿರುದ್ಧ ಆಕ್ರೋಶ ಹೊರಹಾಕಿತು. ಸಂತ್ರಸ್ತ ಬಾಲಕಿಯರಿಗೆ ಧೈರ್ಯ ತುಂಬುವ ಘೋಷಣೆ ಕೂಗಿತು. ನಿಷ್ಪಕ್ಷಪಾತ ತನಿಖೆ ನಡೆಸುವ ಕುರಿತು ಅನುಮಾನಗಳಿವೆ ಎಂದು ಗುಂಪು ಆರೋಪಿಸಿತು.</p>.<p>*</p>.<p>ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಆಘಾತಕಾರಿ ಆಪಾದನೆ ಕೇಳಿಬಂದಿದೆ. ಮಠಕ್ಕೆ ಉತ್ತಮ ಹೆಸರಿದೆ. ಅದನ್ನು ಮತ್ತೆ ಎತ್ತಿಹಿಡಿಯುವ ವಿಶ್ವಾಸವಿದೆ.<br />-<em><strong>ಮಹಿಮ ಪಟೇಲ್, ಜೆಡಿಯು ರಾಜ್ಯ ಘಟಕದ ಅಧ್ಯಕ್ಷ</strong></em></p>.<p>*</p>.<p>ಪೀಠಾಧ್ಯಕ್ಷರ ಮೇಲಿನ ಆರೋಪ ಸತ್ಯಕ್ಕೆ ದೂರ ಗುರುಗಳ ಧರ್ಮ ಸಂಸ್ಕಾರ ಮತ್ತು ಹೆಜ್ಜೆಗುರುತು ಗಮನಿಸಿದರೆ ಅಹಿತಕರ ಘಟನೆ ನಡೆದಿರಲು ಸಾಧ್ಯವಿಲ್ಲ.<br /><em><strong>-ಎಚ್.ಎಸ್. ಶಿವಶಂಕರ್, ಮಾಜಿ ಶಾಸಕ, ಹರಿಹರ</strong></em></p>.<p><strong>ಇವನ್ನೂ ಓದಿ...</strong></p>.<p><a href="https://www.prajavani.net/karnataka-news/murugha-sharanaru-chitradurga-sexual-harassment-case-fir-against-shivamurthy-966989.html" itemprop="url" target="_blank">ಮುರುಘಾ ಶರಣರ ವಿರುದ್ಧ ದೂರು: ಚಿತ್ರದುರ್ಗ ಮಠದಲ್ಲಿ ಬಿರುಸಿನ ಚಟುವಟಿಕೆ</a></p>.<p><a href="https://www.prajavani.net/karnataka-news/rape-sexual-harassment-by-swamiji-of-a-prestigious-mysore-math-complaint-karnataka-966966.html" itemprop="url" target="_blank">ನಾಡಿನ ಪ್ರತಿಷ್ಠಿತ ಮಠವೊಂದರ ಸ್ವಾಮೀಜಿಯಿಂದ ನಿರಂತರ ಲೈಂಗಿಕ ಕಿರುಕುಳ: ದೂರು</a></p>.<p><a href="https://www.prajavani.net/karnataka-news/odanadi-mysore-sexual-harassment-case-against-shivamurthy-murugha-sharanaru-966995.html" target="_blank">ಮುರುಘಾ ಶರಣರ ಪ್ರಕರಣ: ನ್ಯಾಯಾಂಗ ತನಿಖೆಗೆ ಒಡನಾಡಿ ಸಂಸ್ಥೆ ಆಗ್ರಹ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>