ಪಕ್ಷದ ಎಲ್ಲ ಅಭ್ಯರ್ಥಿಗಳೊಂದಿಗೆ ಸುದ್ದಿಗೋಷ್ಠಿ ನಡೆಸಿದ ಅವರು, ‘ಅಭ್ಯರ್ಥಿಗಳನ್ನು ಹುಡುಕಿ ಟಿಕೆಟ್ ನೀಡುವ ಪದ್ಧತಿ ಪ್ರಜಾಕೀಯದಲ್ಲಿ ಇಲ್ಲ. 110 ಕ್ಷೇತ್ರಗಳಲ್ಲಿ ಪ್ರಜಾ ಕಾರ್ಮಿಕನಾಗಿ ಕೆಲಸ ಮಾಡಲು ಆಸಕ್ತಿ ಇದ್ದವರು ಮುಂದೆ ಬಂದಿದ್ದಾರೆ. ಇವರು ಸೂಕ್ತವೇ ಎಂಬುದನ್ನು ತೀರ್ಮಾನಿಸಲು ವೆಬ್ಸೈಟ್ನಲ್ಲಿ ಪ್ರಕಟಿಸಿದ್ದೆವು. ಜನ ಯಾರ ಪರ ಹೆಚ್ಚು ಒಲವು ವ್ಯಕ್ತಪಡಿದರೋ ಅವರಿಗೆ ಟಿಕೆಟ್ ನೀಡಲಾಗಿದೆ’ ಎಂದರು.