‘ಕಾರ್ಯಕ್ರಮದ ಆರಂಭದಿಂದಲೂ ಡಿ.ಕೆ ಸಹೋದರರ ಹಿಂಬಾಲಕರು ಕೆಣಕಲು ಆರಂಭಿಸಿದ್ದರು. ಬಳಿಕ ಗಲಾಟೆ ಮಾಡಿದರು. ಮುಖ್ಯಮಂತ್ರಿಯವರು ಇದ್ದ ಸಭೆಯಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ವಿವೇಚನೆಯೇ ಇವರಿಗಿಲ್ಲ. ಹೀಗಾಗಿ ಅವರ ಹಿಂಬಾಲಕರು ಸೇರಿ ಗಲಾಟೆ ಮಾಡಿದರು. ಈ ಸಹೋದರರಿಗೆ ಅಭದ್ರತೆ ಕಾಡಿರಬಹುದು. ಅದಕ್ಕೆಂದೇ ಈ ರೀತಿ ಮಾಡಿದ್ದಾರೆ’ ಎಂದರು.