ಶೈಕ್ಷಣಿಕ ವೇಳಾಪಟ್ಟಿಯಂತೆ ಪಿಯು ಪ್ರವೇಶಕ್ಕೆ ಮೇ 22ರಿಂದ ಜೂನ್ 15ರವರೆಗೆ ಅವಕಾಶ ನೀಡಲಾಗಿತ್ತು. ನಂತರದ ವಿಳಂಬ ಪ್ರವೇಶಕ್ಕೆ ₹ 730 ಹೆಚ್ಚುವರಿ ದಂಡಶುಲ್ಕ ವಿಧಿಸಲಾಗಿದೆ. ಸರ್ಕಾರಿ, ಅನುದಾನಿತ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ಬಹುತೇಕ ವಿದ್ಯಾರ್ಥಿಗಳು ಬಡ ಕುಟುಂಬಗಳಿಂದ ಬರುತ್ತಾರೆ. ದಂಡಶುಲ್ಕ ಭರಿಸುವುದು ಕಷ್ಟವಾಗುತ್ತದೆ. ಹಾಗಾಗಿ, ಜೂನ್ 27ರವರೆಗೆ ಅವಕಾಶ ನೀಡಬೇಕು ಎಂದು ಸಂಘದ ಅಧ್ಯಕ್ಷ ಎ.ಎಚ್.ನಿಂಗೇಗೌಡ, ಪ್ರಮುಖರಾದ ಎಸ್.ಆರ್.ವೆಂಕಟೇಶ್, ಶಿವರಾಮ ಬಿ.ಮಾಲೀಪಾಟೀಲ, ಎಂ.ಜಯಣ್ಣ ಮನವಿ ಮಾಡಿದ್ದಾರೆ.