ಬಿಸಿಐಸಿಯ ಅಧ್ಯಕ್ಷ ಡಾ.ಎಲ್. ರವೀಂದ್ರನ್ ಮಾತನಾಡಿ, ‘ಪ್ರತಿದಿನ ರಾಜ್ಯದಲ್ಲಿ ಅಪಾರ ಪ್ರಮಾಣದ ಕೈಗಾರಿಕಾ ತ್ಯಾಜ್ಯ, ಮುನಿಸಿಪಲ್ ಘನತ್ಯಾಜ್ಯ, ಜೈವಿಕ- ವೈದ್ಯಕೀಯ ತ್ಯಾಜ್ಯ, ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಇ-ತ್ಯಾಜ್ಯಗಳು ಸೃಷ್ಟಿಯಾಗುತ್ತಿವೆ. ಈ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಕೆಎಸ್ಪಿಸಿಬಿಯ ಪ್ರಯತ್ನಗಳು ಶ್ಲಾಘನೀಯ’ ಎಂದರು.