<p><strong>ಬೆಂಗಳೂರು:</strong> 'ಸಂವಿಧಾನ ಮತ್ತು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಅವರನ್ನು ಅವಮಾನಿಸುವವರಿಗೆ ಆರ್ಎಸ್ಎಸ್ ಬೆಂಬಲ ಹಾಗೂ ಬಿಜೆಪಿಯಿಂದ ರಕ್ಷಣೆ ನೀಡಲಾಗುತ್ತದೆ' ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.</p><p>ಈ ಕುರಿತು ಫೇಸ್ಬುಕ್ ಪೋಸ್ಟ್ನಲ್ಲಿ ಬರೆದುಕೊಂಡಿರುವ ಪ್ರಿಯಾಂಕ್, 'ಪ್ರಧಾನಿ ಮೋದಿಯವರ ಅಮೃತಕಾಲದಲ್ಲಿ, ಸರ್ಕಾರದ ಮುಂದೆ ಮಂಡಿಯೂರಿದರೆ ಮತ್ತು ವಿಶ್ವಗುರುವನ್ನು ಪೂಜಿಸಿದರೆ ಎಲ್ಲವೂ ಯಥೋಚಿತ. ಯಾರಾದರೂ ಧ್ವನಿ ಎತ್ತಲು ನಿರ್ಧರಿಸಿದ ಕೂಡಲೇ, ಅವರನ್ನು ವಿಚಾರಣೆ ಅಥವಾ ಜಾಮೀನು ಇಲ್ಲದೆ ಜೈಲಿಗೆ ಹಾಕಲಾಗುತ್ತದೆ' ಎಂದು ಟೀಕಿಸಿದ್ದಾರೆ. </p><p>'ಏತನ್ಮಧ್ಯೆ, ನಮ್ಮ ಸಂವಿಧಾನ ಮತ್ತು ಸಿಜೆಐ ಅವರನ್ನು ಅವಮಾನಿಸುವವರಿಗೆ ಆರ್ಎಸ್ಎಸ್ ಬೆಂಬಲ ಹಾಗೂ ಬಿಜೆಪಿಯಿಂದ ರಕ್ಷಣೆ ನೀಡಲಾಗುತ್ತದೆ' ಎಂದು ದೂರಿದ್ದಾರೆ. </p><p>ಈ ಸಂಬಂಧ ರಾಕೇಶ್ ಕಿಶೋರ್ ಅವರನ್ನು ಬಿಜೆಪಿ, ಆರ್ಎಸ್ಎಸ್ ಬೆಂಬಲಿಸುತ್ತಿರುವುದು ಸೇರಿದಂತೆ ಅಂಕಿಅಂಶವನ್ನು ಪ್ರಿಯಾಂಕ್ ಖರ್ಗೆ ಬಿಡುಗಡೆ ಮಾಡಿದ್ದಾರೆ. </p>.ಶೂ ಎಸೆಯಲು ಯತ್ನ; ನಮಗಿದು ಮುಗಿದ ಅಧ್ಯಾಯ: ಸಿಜೆಐ ಗವಾಯಿ.ಸಂಪಾದಕೀಯ | ಸಿಜೆಐ ಅವಮಾನಿಸುವ ಪ್ರಯತ್ನ: ದ್ವೇಷ–ಅಸಹನೆಯ ಕೊಳಕು ಕೃತ್ಯ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> 'ಸಂವಿಧಾನ ಮತ್ತು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಅವರನ್ನು ಅವಮಾನಿಸುವವರಿಗೆ ಆರ್ಎಸ್ಎಸ್ ಬೆಂಬಲ ಹಾಗೂ ಬಿಜೆಪಿಯಿಂದ ರಕ್ಷಣೆ ನೀಡಲಾಗುತ್ತದೆ' ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.</p><p>ಈ ಕುರಿತು ಫೇಸ್ಬುಕ್ ಪೋಸ್ಟ್ನಲ್ಲಿ ಬರೆದುಕೊಂಡಿರುವ ಪ್ರಿಯಾಂಕ್, 'ಪ್ರಧಾನಿ ಮೋದಿಯವರ ಅಮೃತಕಾಲದಲ್ಲಿ, ಸರ್ಕಾರದ ಮುಂದೆ ಮಂಡಿಯೂರಿದರೆ ಮತ್ತು ವಿಶ್ವಗುರುವನ್ನು ಪೂಜಿಸಿದರೆ ಎಲ್ಲವೂ ಯಥೋಚಿತ. ಯಾರಾದರೂ ಧ್ವನಿ ಎತ್ತಲು ನಿರ್ಧರಿಸಿದ ಕೂಡಲೇ, ಅವರನ್ನು ವಿಚಾರಣೆ ಅಥವಾ ಜಾಮೀನು ಇಲ್ಲದೆ ಜೈಲಿಗೆ ಹಾಕಲಾಗುತ್ತದೆ' ಎಂದು ಟೀಕಿಸಿದ್ದಾರೆ. </p><p>'ಏತನ್ಮಧ್ಯೆ, ನಮ್ಮ ಸಂವಿಧಾನ ಮತ್ತು ಸಿಜೆಐ ಅವರನ್ನು ಅವಮಾನಿಸುವವರಿಗೆ ಆರ್ಎಸ್ಎಸ್ ಬೆಂಬಲ ಹಾಗೂ ಬಿಜೆಪಿಯಿಂದ ರಕ್ಷಣೆ ನೀಡಲಾಗುತ್ತದೆ' ಎಂದು ದೂರಿದ್ದಾರೆ. </p><p>ಈ ಸಂಬಂಧ ರಾಕೇಶ್ ಕಿಶೋರ್ ಅವರನ್ನು ಬಿಜೆಪಿ, ಆರ್ಎಸ್ಎಸ್ ಬೆಂಬಲಿಸುತ್ತಿರುವುದು ಸೇರಿದಂತೆ ಅಂಕಿಅಂಶವನ್ನು ಪ್ರಿಯಾಂಕ್ ಖರ್ಗೆ ಬಿಡುಗಡೆ ಮಾಡಿದ್ದಾರೆ. </p>.ಶೂ ಎಸೆಯಲು ಯತ್ನ; ನಮಗಿದು ಮುಗಿದ ಅಧ್ಯಾಯ: ಸಿಜೆಐ ಗವಾಯಿ.ಸಂಪಾದಕೀಯ | ಸಿಜೆಐ ಅವಮಾನಿಸುವ ಪ್ರಯತ್ನ: ದ್ವೇಷ–ಅಸಹನೆಯ ಕೊಳಕು ಕೃತ್ಯ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>