ಬೆಂಗಳೂರು:ಕುಸಿಯುತ್ತಿರುವ ಆರ್ಥಿಕತೆಯ ಬದಲಿಗೆ ದೇಶದಲ್ಲಿ ‘ಪವಿತ್ರ ಆರ್ಥಿಕತೆ’ಗೆ ಆಗ್ರಹಿಸಿ ಕರಕುಶಲ ನೌಕರರು, ಗಾರ್ಮೆಂಟ್ಸ್ ನೌಕರರು, ಪೌರಕಾರ್ಮಿಕರು, ಸಣ್ಣ ಉದ್ಯಮಿಗಳು, ಬೀದಿಬದಿ ವ್ಯಾಪಾರಿಗಳು, ಅಂಗನವಾಡಿ ನೌಕರರು ಒಗ್ಗೂಡಿ ಅಕ್ಟೋಬರ್ 2ರಿಂದ ಉಪವಾಸ ಸತ್ಯಾಗ್ರಹ ಚಳವಳಿ ನಡೆಸಲು ನಿರ್ಧರಿಸಿದ್ದಾರೆ. ಸತ್ಯಾಗ್ರಹವು ನಗರದ ಗಾಂಧಿಭವನ ಸಮೀಪದ ವಲ್ಲಭ ನಿಕೇತನ್ನಲ್ಲಿ ಆರಂಭವಾಗಲಿದೆ.