<p><strong>ಬೆಂಗಳೂರು</strong>: ‘ಕೃಷಿ ವೆಚ್ಚ ಮತ್ತು ಕಬ್ಬಿನ ಬೆಲೆಯ ನಡುವಿನ ಅಂತರ ಹೆಚ್ಚಲು ಕೇಂದ್ರ ಸರ್ಕಾರವೇ ಕಾರಣ. ಅದನ್ನು ತಪ್ಪಿಸಲು ಯಾವುದೇ ಕ್ರಮ ತೆಗೆದುಕೊಳ್ಳದಿರುವುದರಿಂದ ಲಕ್ಷಾಂತರ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.</p><p>ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಬರೆದ ಪತ್ರಕ್ಕೆ ಉತ್ತರಿಸಿರುವ ಅವರು, ‘ಕೇಂದ್ರ ಸರ್ಕಾರವು ಪ್ರತಿ ಕ್ವಿಂಟಲ್ಗೆ ಶೇ 10.25 ಇಳುವರಿ ಪ್ರಮಾಣಕ್ಕೆ ನಿಗದಿಪಡಿಸಿದ ₹ 3,550 ನ್ಯಾಯಯುತ ಮತ್ತು ಲಾಭದಾಯಕ ದರವನ್ನು (ಎಫ್ಆರ್ಪಿ) ಪ್ರಮುಖ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಎನ್ಡಿಎ ಆಡಳಿತಾವಧಿಯಲ್ಲಿ ಸತತ ಎರಡು ವರ್ಷಗಳ ಕಾಲ ಎಫ್ಆರ್ಪಿ ಹೆಚ್ಚಿಸಿಲ್ಲ. ಇದು ರೈತರಿಗೆ ಹೆಚ್ಚಿನ ನಷ್ಟ ಉಂಟು ಮಾಡಿದೆ’ ಎಂದಿದ್ದಾರೆ.</p><p>‘ಎಥೆನಾಲ್ ಮಿಶ್ರಣ ಮತ್ತು ಹೆಚ್ಚಿದ ಎಥೆನಾಲ್ ಸಂಗ್ರಹಣೆಯನ್ನು ಸಕ್ಕರೆ ವಲಯಕ್ಕೆ ವರದಾನವೆಂದು ಪತ್ರದಲ್ಲಿ ಉಲ್ಲೇಖಿಸಿದ್ದೀರಿ. ಆದರೆ, 2023ರ ವೇಳೆಗೆ ಎಥೆನಾಲ್ ಮಿಶ್ರಣವು ಶೇ 10ಕ್ಕೆ ತಲುಪಿದ್ದರೂ, ವಾಸ್ತವವಾಗಿ ಅದಕ್ಕಿಂತ ಹೆಚ್ಚಿದೆ. ಕರ್ನಾಟಕದ ಡಿಸ್ಟಿಲರಿಗಳಿಂದ ಎಥೆನಾಲ್ ಪೂರೈಕೆಯು 2022-23ರಲ್ಲಿ 38 ಕೋಟಿ ಲೀಟರ್ಗಳಿಂದ 2024-25ರಲ್ಲಿ ಕೇವಲ 47 ಕೋಟಿ ಲೀಟರ್ಗಳಿಷ್ಟೆ ಹೆಚ್ಚಾಗಿದೆ. ಆದರೆ, ಸ್ಥಾಪಿತ ಸಾಮರ್ಥ್ಯವು 270 ಕೋಟಿ ಲೀಟರ್ಗಳಷ್ಟಿದೆ. ಎಥೆನಾಲ್ ಮಿಶ್ರಣದ ಪ್ರಯೋಜನವನ್ನು ರೈತರಿಗೆ ಏಕೆ ವರ್ಗಾಯಿಸಿಲ್ಲ ಎಂಬ ಪ್ರಶ್ನೆಗೆ ಇನ್ನೂ ಉತ್ತರವಿಲ್ಲ’ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಕೃಷಿ ವೆಚ್ಚ ಮತ್ತು ಕಬ್ಬಿನ ಬೆಲೆಯ ನಡುವಿನ ಅಂತರ ಹೆಚ್ಚಲು ಕೇಂದ್ರ ಸರ್ಕಾರವೇ ಕಾರಣ. ಅದನ್ನು ತಪ್ಪಿಸಲು ಯಾವುದೇ ಕ್ರಮ ತೆಗೆದುಕೊಳ್ಳದಿರುವುದರಿಂದ ಲಕ್ಷಾಂತರ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.</p><p>ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಬರೆದ ಪತ್ರಕ್ಕೆ ಉತ್ತರಿಸಿರುವ ಅವರು, ‘ಕೇಂದ್ರ ಸರ್ಕಾರವು ಪ್ರತಿ ಕ್ವಿಂಟಲ್ಗೆ ಶೇ 10.25 ಇಳುವರಿ ಪ್ರಮಾಣಕ್ಕೆ ನಿಗದಿಪಡಿಸಿದ ₹ 3,550 ನ್ಯಾಯಯುತ ಮತ್ತು ಲಾಭದಾಯಕ ದರವನ್ನು (ಎಫ್ಆರ್ಪಿ) ಪ್ರಮುಖ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಎನ್ಡಿಎ ಆಡಳಿತಾವಧಿಯಲ್ಲಿ ಸತತ ಎರಡು ವರ್ಷಗಳ ಕಾಲ ಎಫ್ಆರ್ಪಿ ಹೆಚ್ಚಿಸಿಲ್ಲ. ಇದು ರೈತರಿಗೆ ಹೆಚ್ಚಿನ ನಷ್ಟ ಉಂಟು ಮಾಡಿದೆ’ ಎಂದಿದ್ದಾರೆ.</p><p>‘ಎಥೆನಾಲ್ ಮಿಶ್ರಣ ಮತ್ತು ಹೆಚ್ಚಿದ ಎಥೆನಾಲ್ ಸಂಗ್ರಹಣೆಯನ್ನು ಸಕ್ಕರೆ ವಲಯಕ್ಕೆ ವರದಾನವೆಂದು ಪತ್ರದಲ್ಲಿ ಉಲ್ಲೇಖಿಸಿದ್ದೀರಿ. ಆದರೆ, 2023ರ ವೇಳೆಗೆ ಎಥೆನಾಲ್ ಮಿಶ್ರಣವು ಶೇ 10ಕ್ಕೆ ತಲುಪಿದ್ದರೂ, ವಾಸ್ತವವಾಗಿ ಅದಕ್ಕಿಂತ ಹೆಚ್ಚಿದೆ. ಕರ್ನಾಟಕದ ಡಿಸ್ಟಿಲರಿಗಳಿಂದ ಎಥೆನಾಲ್ ಪೂರೈಕೆಯು 2022-23ರಲ್ಲಿ 38 ಕೋಟಿ ಲೀಟರ್ಗಳಿಂದ 2024-25ರಲ್ಲಿ ಕೇವಲ 47 ಕೋಟಿ ಲೀಟರ್ಗಳಿಷ್ಟೆ ಹೆಚ್ಚಾಗಿದೆ. ಆದರೆ, ಸ್ಥಾಪಿತ ಸಾಮರ್ಥ್ಯವು 270 ಕೋಟಿ ಲೀಟರ್ಗಳಷ್ಟಿದೆ. ಎಥೆನಾಲ್ ಮಿಶ್ರಣದ ಪ್ರಯೋಜನವನ್ನು ರೈತರಿಗೆ ಏಕೆ ವರ್ಗಾಯಿಸಿಲ್ಲ ಎಂಬ ಪ್ರಶ್ನೆಗೆ ಇನ್ನೂ ಉತ್ತರವಿಲ್ಲ’ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>