<p><strong>ಬೆಳಗಾವಿ/ಗದಗ:</strong> ಶನಿವಾರ ನಡೆದ ಪ್ರತ್ಯೇಕ ಅವಘಡಗಳಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ಗದಗ ಜಿಲ್ಲೆಯಲ್ಲಿ ರಥದ ಚಕ್ರಕ್ಕೆ ಸಿಲುಕಿ ಇಬ್ಬರು ಮೃತಪಟ್ಟಿದ್ದರೆ, ಕೊಲ್ಲಾಪುರ ಜಿಲ್ಲೆಯ ಬಸ್ತವಾಡೆ ಬಳಿ ನದಿಯಲ್ಲಿ ಮುಳುಗಿ ಬೆಳಗಾವಿ ಜಿಲ್ಲೆಯ ಇಬ್ಬರು ಸೇರಿ ನಾಲ್ವರು ಸತ್ತಿದ್ದಾರೆ.</p>.<p><strong>ರೋಣ ವರದಿ (ಗದಗ ಜಿಲ್ಲೆ):</strong> ಇಲ್ಲಿನ ವೀರಭದ್ರೇಶ್ವರ ಜಾತ್ರಾ ಮಹೋತ್ಸವದಲ್ಲಿ ಶನಿವಾರ ರಥದ ಚಕ್ರಕ್ಕೆ ಸಿಲುಕಿ ಇಬ್ಬರು ಮೃತಪಟ್ಟಿದ್ದಾರೆ. ರೋಣ ನಿವಾಸಿ ಮಲ್ಲನಗೌಡ ಬಸವಂತಗೌಡ ಲಿಂಗನಗೌಡ್ರ (51) ಎಂಬುವರು ಮೃತಪಟ್ಟಿದ್ದು, ಇನ್ನೊಬ್ಬರ ಗುರುತು ಪತ್ತೆಯಾಗಿಲ್ಲ.</p>.<p>‘ಜಾತ್ರೆಗೆ ನಿರೀಕ್ಷೆಗೂ ಮೀರಿ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರು. ರಥ ಸಾಗುವಾಗ ಅದರ ಚಕ್ರಕ್ಕೆ ಸಿಲುಕಿ ಇಬ್ಬರೂ ಮೃತಪಟ್ಟರು. ಅವರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ’ ಎಂದು ರೋಣ ಠಾಣೆ ಪೊಲೀಸರು ತಿಳಿಸಿದ್ದಾರೆ.</p>.<p><strong>ನಾಲ್ವರ ಸಾವು</strong></p><p><strong>ಬೆಳಗಾವಿ ವರದಿ:</strong> ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕಾಗಲ್ ತಾಲ್ಲೂಕಿನ ಬಸ್ತವಾಡೆ ಬಳಿ ಶುಕ್ರವಾರ ವೇದಗಂಗಾ ನದಿಯಲ್ಲಿ ಮುಳುಗಿ ನಾಲ್ವರು ಮೃತಪಟ್ಟಿದ್ದಾರೆ.</p>.<p>‘ಕೊಲ್ಹಾಪುರದ ಜಿತೇಂದ್ರ ವಿಲಾಸ ಲೋಕರೆ (36), ಸವಿತಾ ಅಮರ ಕಾಂಬಳೆ (27), ಅಥಣಿಯ ರೇಷ್ಮಾ ದಿಲೀಪ ಯಳಮಲ್ಲೆ (34) ಮತ್ತು ಹರ್ಷ ದಿಲೀಪ ಯಳಮಲ್ಲೆ (17) ಮೃತರು.</p>.<p>ಜಾತ್ರೆಗೆ ಬಂದಿದ್ದ ನಾಲ್ವರು ಈಜಲೆಂದು ವೇದಗಂಗಾ ನದಿಯಲ್ಲಿ ಇಳಿದಿದ್ದರು. ಮುಳುಗುತ್ತಿದ್ದ ಹರ್ಷ ದಿಲೀಪ ರಕ್ಷಣೆಗೆ ಮೂವರು ಮುಂದಾದಾಗ, ದುರ್ಘಟನೆ ನಡೆದಿದೆ. ಶುಕ್ರವಾರ ಮೂವರು, ಶನಿವಾರ ಇನ್ನೊಬ್ಬರ ಮೃತದೇಹ ಪತ್ತೆಯಾಗಿದೆ’ ಎಂದು ಸ್ಥಳೀಯರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ/ಗದಗ:</strong> ಶನಿವಾರ ನಡೆದ ಪ್ರತ್ಯೇಕ ಅವಘಡಗಳಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ಗದಗ ಜಿಲ್ಲೆಯಲ್ಲಿ ರಥದ ಚಕ್ರಕ್ಕೆ ಸಿಲುಕಿ ಇಬ್ಬರು ಮೃತಪಟ್ಟಿದ್ದರೆ, ಕೊಲ್ಲಾಪುರ ಜಿಲ್ಲೆಯ ಬಸ್ತವಾಡೆ ಬಳಿ ನದಿಯಲ್ಲಿ ಮುಳುಗಿ ಬೆಳಗಾವಿ ಜಿಲ್ಲೆಯ ಇಬ್ಬರು ಸೇರಿ ನಾಲ್ವರು ಸತ್ತಿದ್ದಾರೆ.</p>.<p><strong>ರೋಣ ವರದಿ (ಗದಗ ಜಿಲ್ಲೆ):</strong> ಇಲ್ಲಿನ ವೀರಭದ್ರೇಶ್ವರ ಜಾತ್ರಾ ಮಹೋತ್ಸವದಲ್ಲಿ ಶನಿವಾರ ರಥದ ಚಕ್ರಕ್ಕೆ ಸಿಲುಕಿ ಇಬ್ಬರು ಮೃತಪಟ್ಟಿದ್ದಾರೆ. ರೋಣ ನಿವಾಸಿ ಮಲ್ಲನಗೌಡ ಬಸವಂತಗೌಡ ಲಿಂಗನಗೌಡ್ರ (51) ಎಂಬುವರು ಮೃತಪಟ್ಟಿದ್ದು, ಇನ್ನೊಬ್ಬರ ಗುರುತು ಪತ್ತೆಯಾಗಿಲ್ಲ.</p>.<p>‘ಜಾತ್ರೆಗೆ ನಿರೀಕ್ಷೆಗೂ ಮೀರಿ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರು. ರಥ ಸಾಗುವಾಗ ಅದರ ಚಕ್ರಕ್ಕೆ ಸಿಲುಕಿ ಇಬ್ಬರೂ ಮೃತಪಟ್ಟರು. ಅವರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ’ ಎಂದು ರೋಣ ಠಾಣೆ ಪೊಲೀಸರು ತಿಳಿಸಿದ್ದಾರೆ.</p>.<p><strong>ನಾಲ್ವರ ಸಾವು</strong></p><p><strong>ಬೆಳಗಾವಿ ವರದಿ:</strong> ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕಾಗಲ್ ತಾಲ್ಲೂಕಿನ ಬಸ್ತವಾಡೆ ಬಳಿ ಶುಕ್ರವಾರ ವೇದಗಂಗಾ ನದಿಯಲ್ಲಿ ಮುಳುಗಿ ನಾಲ್ವರು ಮೃತಪಟ್ಟಿದ್ದಾರೆ.</p>.<p>‘ಕೊಲ್ಹಾಪುರದ ಜಿತೇಂದ್ರ ವಿಲಾಸ ಲೋಕರೆ (36), ಸವಿತಾ ಅಮರ ಕಾಂಬಳೆ (27), ಅಥಣಿಯ ರೇಷ್ಮಾ ದಿಲೀಪ ಯಳಮಲ್ಲೆ (34) ಮತ್ತು ಹರ್ಷ ದಿಲೀಪ ಯಳಮಲ್ಲೆ (17) ಮೃತರು.</p>.<p>ಜಾತ್ರೆಗೆ ಬಂದಿದ್ದ ನಾಲ್ವರು ಈಜಲೆಂದು ವೇದಗಂಗಾ ನದಿಯಲ್ಲಿ ಇಳಿದಿದ್ದರು. ಮುಳುಗುತ್ತಿದ್ದ ಹರ್ಷ ದಿಲೀಪ ರಕ್ಷಣೆಗೆ ಮೂವರು ಮುಂದಾದಾಗ, ದುರ್ಘಟನೆ ನಡೆದಿದೆ. ಶುಕ್ರವಾರ ಮೂವರು, ಶನಿವಾರ ಇನ್ನೊಬ್ಬರ ಮೃತದೇಹ ಪತ್ತೆಯಾಗಿದೆ’ ಎಂದು ಸ್ಥಳೀಯರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>