<p><strong>ಚಿಕ್ಕಮಗಳೂರು</strong>: ಪ್ರತಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದೇ ಕೋವಿಡ್–19 ಸೋಂಕಿನಿಂದ ಗುಣಮುಖರಾಗಲು ಇರುವ ಪರಿಹಾರ. ವೈದ್ಯರ ಸಲಹೆ, ಚಿಕಿತ್ಸೆ ಪಾಲನೆ, ಧೈರ್ಯ, ಸ್ವಯಂಶಿಸ್ತು, ಜಾಗರೂಕತೆಯಿಂದ ಇದ್ದರೆ ಈ ಕಾಯಿಲೆಯಿಂದ ಗುಣಮುಖರಾಗಬಹುದು...</p>.<p>–ಕೋವಿಡ್ನಿಂದ ಗುಣಮುಖರಾಗಿರುವ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಅವರ ನುಡಿಗಳಿವು.</p>.<p>ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಎಂಟು ದಿನ ಚಿಕಿತ್ಸೆ ಪಡೆದಿದ್ದ ಅವರು ಪ್ರಸ್ತುತ ತೋಟದ ಮನೆಯಲ್ಲಿ ಇದ್ದಾರೆ. ಬುಧವಾರ ‘ಪ್ರಜಾವಾಣಿ’ಯೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಕಾಯಿಲೆ ವಾಸಿಯಾದ ಬಗೆ ಹಂಚಿಕೊಂಡರು.</p>.<p>‘ಮಾಮೂಲಿ ಜ್ವರ, ಕೆಮ್ಮು, ನೆಗಡಿಗೆ ಕೊಡುವ ಔಷಧ, ಚಿಕಿತ್ಸೆ ಕೊಟ್ಟರು. ಬಿಸಿನೀರು ಕುಡಿಯುತ್ತಿದ್ದೆ. ಉಪ್ಪುನೀರಿನಿಂದ ಬಾಯಿ ಮುಕ್ಕಳಿಸುತ್ತಿದ್ದೆ. ಕಾಳುಮೆಣಸು, ತುಳಸಿ, ಶುಂಠಿ ಕಷಾಯ ತಯಾರಿಸಿ ಕೊಟ್ಟಿದ್ದರು. ವೈದ್ಯರು ಸೂಚಿಸಿದ ಸಲಹೆಗಳನ್ನು ಚಾಚೂ ತಪ್ಪದೆ ಪಾಲಿಸಿದೆ; ಕಾಯಿಲೆ ಹುಷಾರಾಯಿತು.</p>.<p>ಯಾವುದೇ ಬೇನೆ (ಕೈಕಾಲು ನೋವು, ತಲೆ ಸಿಡಿತ...) ಕಾಡಲಿಲ್ಲ. ಆರಾಮಾಗಿಯೇ ಇದ್ದೆ. ಯೋಗಾಭ್ಯಾಸ ರೂಢಿಸಿಕೊಂಡಿದ್ದೇನೆ. ಕಾಯಿಲೆ ಬೇಗನೆ ಗುಣವಾಯಿತು. ಈ ಕಾಯಿಲೆ ಚಿಕಿತ್ಸೆಗೆ ಆಪರೇಷನ್ ಗಿಪರೇಷನ್ ಏನು ಮಾಡಲ್ಲ. ಪ್ರತಿರೋಧಕ ಶಕ್ತಿ ಹೆಚ್ಚಿಸಿಕೊಂಡರೆ ಮಾತ್ರ ಹುಷಾರಾಗಲು ಸಾಧ್ಯ.</p>.<p>ಸೋಂಕು ದೃಢಪಟ್ಟಾಗ ನನಗೂ ಸ್ವಲ್ಪ ಭಯವಾಗಿತ್ತು. ಆದರೆ, ಧೈರ್ಯಗೆಡಲಿಲ್ಲ. ಇಲ್ಲಿನ ಜಿಲ್ಲಾ ಸರ್ಜನ್, ವೈದ್ಯರು ಧೈರ್ಯ ಹೇಳಿದ್ದರು. ಬೆಂಗಳೂರಿನಲ್ಲಿ ಚಿಕಿತ್ಸೆಗೆ ದಾಖಲಾಗಿ, ಹುಷಾರಾದೆ’ ಎಂದರು.</p>.<p>‘ಕೋವಿಡ್ ಹಾವಳಿ ದಿನೇದಿನೇ ಹೆಚ್ಚುತ್ತಿದೆ. ಹೇಗೆ ಅಂಟುತ್ತದೆ ಎಂಬುದೂ ತಿಳಿಯುವುದಿಲ್ಲ. ತಾಲ್ಲೂಕು, ಜಿಲ್ಲಾ ಕೇಂದ್ರಗಳ ಕೋವಿಡ್ ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆ ಇದೆ. ಜನ ಜಾಗರೂಕರಾಗಬೇಕು. ರೋಗ ಬಾರದಂತೆ ಮುಂಜಾಗ್ರತೆ ವಹಿಸಬೇಕು. ಈ ನಿಟ್ಟಿನಲ್ಲಿ ಎಲ್ಲ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂಬುದು ಅವರ ಕಿವಿಮಾತು.</p>.<p>‘ಶ್ವಾಸಕೋಶ ಸಂಬಂಧಿ ಸಮಸ್ಯೆಗಳು, ಕಿಡ್ನಿ ತೊಂದರೆ, ಅಧಿಕ/ಕಡಿಮೆ ರಕ್ತದೊತ್ತಡ, ಮಧುಮೇಹ ಮೊದಲಾದ ರೋಗಗಳು ಇರುವವರಿಗೆ ಕೋವಿಡ್ ಬಾಧಿಸುವುದು ಹೆಚ್ಚು ಎಂದು ವೈದ್ಯರು ಹೇಳುತ್ತಾರೆ. ಇಂತಹ ಸಮಸ್ಯೆ ಇರುವವರು ಅತೀವ ಎಚ್ಚರಿಕೆ ವಹಿಸುವುದು ಒಳಿತು’ ಎಂಬುದು ಅವರು ನೀಡುವ ಸಲಹೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು</strong>: ಪ್ರತಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದೇ ಕೋವಿಡ್–19 ಸೋಂಕಿನಿಂದ ಗುಣಮುಖರಾಗಲು ಇರುವ ಪರಿಹಾರ. ವೈದ್ಯರ ಸಲಹೆ, ಚಿಕಿತ್ಸೆ ಪಾಲನೆ, ಧೈರ್ಯ, ಸ್ವಯಂಶಿಸ್ತು, ಜಾಗರೂಕತೆಯಿಂದ ಇದ್ದರೆ ಈ ಕಾಯಿಲೆಯಿಂದ ಗುಣಮುಖರಾಗಬಹುದು...</p>.<p>–ಕೋವಿಡ್ನಿಂದ ಗುಣಮುಖರಾಗಿರುವ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಅವರ ನುಡಿಗಳಿವು.</p>.<p>ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಎಂಟು ದಿನ ಚಿಕಿತ್ಸೆ ಪಡೆದಿದ್ದ ಅವರು ಪ್ರಸ್ತುತ ತೋಟದ ಮನೆಯಲ್ಲಿ ಇದ್ದಾರೆ. ಬುಧವಾರ ‘ಪ್ರಜಾವಾಣಿ’ಯೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಕಾಯಿಲೆ ವಾಸಿಯಾದ ಬಗೆ ಹಂಚಿಕೊಂಡರು.</p>.<p>‘ಮಾಮೂಲಿ ಜ್ವರ, ಕೆಮ್ಮು, ನೆಗಡಿಗೆ ಕೊಡುವ ಔಷಧ, ಚಿಕಿತ್ಸೆ ಕೊಟ್ಟರು. ಬಿಸಿನೀರು ಕುಡಿಯುತ್ತಿದ್ದೆ. ಉಪ್ಪುನೀರಿನಿಂದ ಬಾಯಿ ಮುಕ್ಕಳಿಸುತ್ತಿದ್ದೆ. ಕಾಳುಮೆಣಸು, ತುಳಸಿ, ಶುಂಠಿ ಕಷಾಯ ತಯಾರಿಸಿ ಕೊಟ್ಟಿದ್ದರು. ವೈದ್ಯರು ಸೂಚಿಸಿದ ಸಲಹೆಗಳನ್ನು ಚಾಚೂ ತಪ್ಪದೆ ಪಾಲಿಸಿದೆ; ಕಾಯಿಲೆ ಹುಷಾರಾಯಿತು.</p>.<p>ಯಾವುದೇ ಬೇನೆ (ಕೈಕಾಲು ನೋವು, ತಲೆ ಸಿಡಿತ...) ಕಾಡಲಿಲ್ಲ. ಆರಾಮಾಗಿಯೇ ಇದ್ದೆ. ಯೋಗಾಭ್ಯಾಸ ರೂಢಿಸಿಕೊಂಡಿದ್ದೇನೆ. ಕಾಯಿಲೆ ಬೇಗನೆ ಗುಣವಾಯಿತು. ಈ ಕಾಯಿಲೆ ಚಿಕಿತ್ಸೆಗೆ ಆಪರೇಷನ್ ಗಿಪರೇಷನ್ ಏನು ಮಾಡಲ್ಲ. ಪ್ರತಿರೋಧಕ ಶಕ್ತಿ ಹೆಚ್ಚಿಸಿಕೊಂಡರೆ ಮಾತ್ರ ಹುಷಾರಾಗಲು ಸಾಧ್ಯ.</p>.<p>ಸೋಂಕು ದೃಢಪಟ್ಟಾಗ ನನಗೂ ಸ್ವಲ್ಪ ಭಯವಾಗಿತ್ತು. ಆದರೆ, ಧೈರ್ಯಗೆಡಲಿಲ್ಲ. ಇಲ್ಲಿನ ಜಿಲ್ಲಾ ಸರ್ಜನ್, ವೈದ್ಯರು ಧೈರ್ಯ ಹೇಳಿದ್ದರು. ಬೆಂಗಳೂರಿನಲ್ಲಿ ಚಿಕಿತ್ಸೆಗೆ ದಾಖಲಾಗಿ, ಹುಷಾರಾದೆ’ ಎಂದರು.</p>.<p>‘ಕೋವಿಡ್ ಹಾವಳಿ ದಿನೇದಿನೇ ಹೆಚ್ಚುತ್ತಿದೆ. ಹೇಗೆ ಅಂಟುತ್ತದೆ ಎಂಬುದೂ ತಿಳಿಯುವುದಿಲ್ಲ. ತಾಲ್ಲೂಕು, ಜಿಲ್ಲಾ ಕೇಂದ್ರಗಳ ಕೋವಿಡ್ ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆ ಇದೆ. ಜನ ಜಾಗರೂಕರಾಗಬೇಕು. ರೋಗ ಬಾರದಂತೆ ಮುಂಜಾಗ್ರತೆ ವಹಿಸಬೇಕು. ಈ ನಿಟ್ಟಿನಲ್ಲಿ ಎಲ್ಲ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂಬುದು ಅವರ ಕಿವಿಮಾತು.</p>.<p>‘ಶ್ವಾಸಕೋಶ ಸಂಬಂಧಿ ಸಮಸ್ಯೆಗಳು, ಕಿಡ್ನಿ ತೊಂದರೆ, ಅಧಿಕ/ಕಡಿಮೆ ರಕ್ತದೊತ್ತಡ, ಮಧುಮೇಹ ಮೊದಲಾದ ರೋಗಗಳು ಇರುವವರಿಗೆ ಕೋವಿಡ್ ಬಾಧಿಸುವುದು ಹೆಚ್ಚು ಎಂದು ವೈದ್ಯರು ಹೇಳುತ್ತಾರೆ. ಇಂತಹ ಸಮಸ್ಯೆ ಇರುವವರು ಅತೀವ ಎಚ್ಚರಿಕೆ ವಹಿಸುವುದು ಒಳಿತು’ ಎಂಬುದು ಅವರು ನೀಡುವ ಸಲಹೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>