ಸ್ವರಾಜ್ ಇಂಡಿಯಾ ಮುಖಂಡ, ರಾಜಕೀಯ ಕಾರ್ಯಕರ್ತ ಯೋಗೇಂದ್ರ ಯಾದವ್ ಅವರು ಭಾರತ್ ಜೋಡೊ ಯಾತ್ರೆಗೆ ಬೆಂಬಲ ನೀಡಿದ್ದು, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಜತೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹೆಜ್ಜೆ ಹಾಕುತ್ತಿದ್ದಾರೆ. ಈ ಯಾತ್ರೆಗೆ ಅವರು ಬೆಂಬಲ ನೀಡಿದ್ದರ ಹಿಂದಿನ ಕಾರಣ ಮತ್ತು ಕರ್ನಾಟಕದ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ಕೋಮು ದ್ವೇಷ ಹರಡುವುದು ಮತ್ತು ಭ್ರಷ್ಟಾಚಾರವೇ ನಿಜವಾದ ದೇಶದ್ರೋಹ ಎಂದು ಅಭಿಪ್ರಾಯಪಟ್ಟರು.