ಕೆಲವು ವರ್ಷಗಳಿಂದ ಟಿ.ವಿ, ಸಾಮಾಜಿಕ ಜಾಲತಾಣಗಳಲ್ಲಿ ಅಲ್ಪಸಂಖ್ಯಾತರ ವಿರುದ್ಧ ದ್ವೇಷಮಯ ಭಾಷಣಗಳು, ಸುದ್ದಿಗಳು ಬಿತ್ತರವಾಗುತ್ತಿವೆ. ಭಾಷೆಯ ಬಳಕೆ ಪ್ರಚೋದನಕಾರಿಯಾಗಿರುತ್ತವೆ. ಹಿಂಸಾತ್ಮಕ, ಅಪರಾಧ ಕೃತ್ಯಗಳನ್ನು ವೈಭವೀಕರಿಸಲಾಗುತ್ತಿದೆ ಎಂದು ಹೇಮಾ ಸ್ವಾಮಿನಾಥನ್, ಅನುಭಾ ಧಸ್ಮನಾ, ಅರ್ಪಿತಾ ಚಟರ್ಜಿ, ಬಿ.ಕೆ.ಚಂದ್ರಶೇಖರ್, ದೀಪಕ್ ಮಲ್ಘನ್, ಕೃಷ್ಣ ಟಿ. ಕುಮಾರ್, ಮಲಯ್ ಭಟ್ಟಾಚಾರ್ಯ ಸೇರಿದಂತೆ 17 ಪ್ರಾಧ್ಯಾಪಕರು ಆತಂಕ ವ್ಯಕ್ತಪಡಿಸಿದ್ದಾರೆ.