ಕಡಲೆ, ತೊಗರಿ ಬೆಳೆಯುತ್ತಿದ್ದ ಬಾಗಲಕೋಟೆ, ಹುನಗುಂದ ತಾಲ್ಲೂಕಿನ ರೈತರು ಈಗ ಗುಂಟೂರಿನ 334 ಅಥವಾ ಸೂಪರ್ 10 ತಳಿಯ ಒಣ ಮೆಣಸಿನಕಾಯಿ ತಳಿ ಬೆಳೆಯುತ್ತಿದ್ದಾರೆ. ತೋಟಗಾರಿಕೆ ಇಲಾಖೆ ನೆರವಿನಲ್ಲಿ ಹುನಗುಂದ ತೋಟಗಾರಿಕೆ ರೈತ ಉತ್ಪಾದಕ ಸಂಸ್ಥೆ ರಚಿಸಿಕೊಂಡಿದ್ದಾರೆ. ಆ ಮೂಲಕ ಮೆಣಸಿನಕಾಯಿ ಬೆಳೆದು ಒಳ್ಳೆಯ ಲಾಭ ಗಳಿಸುತ್ತಿದ್ದಾರೆ.