<p><strong>ಬೆಂಗಳೂರು:</strong> ಕ್ಷಯ ರೋಗಿಗಳಿಗೆ ಚಿಕಿತ್ಸೆ ಆರಂಭದ ಎರಡು ತಿಂಗಳು ಪೌಷ್ಟಿಕ ಆಹಾರವಾಗಿ ‘ಪುಷ್ಟಿ ಪೌಡರ್’ ಒದಗಿಸುವಂತೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. </p>.<p>ಈ ಕಾರ್ಯಕ್ರಮದ ಅನುಷ್ಠಾನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಇಲಾಖೆಯ ಜಂಟಿ ನಿರ್ದೇಶಕರು (ಕ್ಷಯ) ಸೂಚಿಸಿದ್ದಾರೆ. </p>.<p>ರೋಗಿಯ ದೇಹದ ‘ಬಾಡಿ ಮಾಸ್ ಇಂಡೆಕ್ಸ್ (ದೇಹದ ಸೂಚ್ಯಾಂಕ–ಬಿಎಂಐ) 18ಕ್ಕಿಂತ ಕಡಿಮೆ ಇದ್ದರೆ, ಚಿಕಿತ್ಸೆಯ ಆರಂಭದ ಎರಡು ತಿಂಗಳು ಹೆಚ್ಚುವರಿ ಪೌಷ್ಟಿಕ ಆಹಾರವಾಗಿ ಪುಷ್ಟಿ ಪೌಡರ್ ನೀಡಲು ಸರ್ಕಾರದ ಅನುಮೋದನೆ ದೊರೆತಿದೆ. ಫಲಾನುಭವಿಗೆ ಪ್ರತಿ ತಿಂಗಳು 6 ಕೆ.ಜಿ. ಪುಷ್ಟಿ ಪೌಡರ್ ನೀಡಲು ಅವಕಾಶವಿದೆ ಎಂದು ತಿಳಿಸಲಾಗಿದೆ. </p>.<p>ಗಣಿಬಾಧಿತ ಜಿಲ್ಲೆಗಳಾದ ಚಿತ್ರದುರ್ಗ, ಬಳ್ಳಾರಿ, ತುಮಕೂರು ಹೊರತುಪಡಿಸಿ, ರಾಜ್ಯದ ಉಳಿದ ಎಲ್ಲ ಜಿಲ್ಲೆಗಳ ಅರ್ಹ ಫಲಾನುಭವಿಗಳಿಗೆ ಆಯಾ ಅಂಗನವಾಡಿ ಕೇಂದ್ರದ ಮೂಲಕ ಪುಷ್ಟಿ ಪೌಡರ್ ವಿತರಣೆ ಮಾಡಬೇಕು ಎಂದು ಸೂಚಿಸಲಾಗಿದೆ.</p>.<p>ಸರಬರಾಜು ಮಾಡಲಾದ ಪುಷ್ಟಿ ಪೌಡರ್ನ ಗುಣಮಟ್ಟ ಕೆಡದಂತೆ ದಾಸ್ತಾನು ಮಾಡಬೇಕು. 2025ರ ಆ.1 ರಿಂದ ಹೊಸ ಕ್ಷಯ ರೋಗಿಗಳ ದೇಹದ ತೂಕವನ್ನು ಪರೀಕ್ಷೆ ಮಾಡಿಸಿ, ಅಗತ್ಯ ಅನುಸಾರ ಪುಷ್ಟಿ ಪೌಡರ್ ಒದಗಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕ್ಷಯ ರೋಗಿಗಳಿಗೆ ಚಿಕಿತ್ಸೆ ಆರಂಭದ ಎರಡು ತಿಂಗಳು ಪೌಷ್ಟಿಕ ಆಹಾರವಾಗಿ ‘ಪುಷ್ಟಿ ಪೌಡರ್’ ಒದಗಿಸುವಂತೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. </p>.<p>ಈ ಕಾರ್ಯಕ್ರಮದ ಅನುಷ್ಠಾನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಇಲಾಖೆಯ ಜಂಟಿ ನಿರ್ದೇಶಕರು (ಕ್ಷಯ) ಸೂಚಿಸಿದ್ದಾರೆ. </p>.<p>ರೋಗಿಯ ದೇಹದ ‘ಬಾಡಿ ಮಾಸ್ ಇಂಡೆಕ್ಸ್ (ದೇಹದ ಸೂಚ್ಯಾಂಕ–ಬಿಎಂಐ) 18ಕ್ಕಿಂತ ಕಡಿಮೆ ಇದ್ದರೆ, ಚಿಕಿತ್ಸೆಯ ಆರಂಭದ ಎರಡು ತಿಂಗಳು ಹೆಚ್ಚುವರಿ ಪೌಷ್ಟಿಕ ಆಹಾರವಾಗಿ ಪುಷ್ಟಿ ಪೌಡರ್ ನೀಡಲು ಸರ್ಕಾರದ ಅನುಮೋದನೆ ದೊರೆತಿದೆ. ಫಲಾನುಭವಿಗೆ ಪ್ರತಿ ತಿಂಗಳು 6 ಕೆ.ಜಿ. ಪುಷ್ಟಿ ಪೌಡರ್ ನೀಡಲು ಅವಕಾಶವಿದೆ ಎಂದು ತಿಳಿಸಲಾಗಿದೆ. </p>.<p>ಗಣಿಬಾಧಿತ ಜಿಲ್ಲೆಗಳಾದ ಚಿತ್ರದುರ್ಗ, ಬಳ್ಳಾರಿ, ತುಮಕೂರು ಹೊರತುಪಡಿಸಿ, ರಾಜ್ಯದ ಉಳಿದ ಎಲ್ಲ ಜಿಲ್ಲೆಗಳ ಅರ್ಹ ಫಲಾನುಭವಿಗಳಿಗೆ ಆಯಾ ಅಂಗನವಾಡಿ ಕೇಂದ್ರದ ಮೂಲಕ ಪುಷ್ಟಿ ಪೌಡರ್ ವಿತರಣೆ ಮಾಡಬೇಕು ಎಂದು ಸೂಚಿಸಲಾಗಿದೆ.</p>.<p>ಸರಬರಾಜು ಮಾಡಲಾದ ಪುಷ್ಟಿ ಪೌಡರ್ನ ಗುಣಮಟ್ಟ ಕೆಡದಂತೆ ದಾಸ್ತಾನು ಮಾಡಬೇಕು. 2025ರ ಆ.1 ರಿಂದ ಹೊಸ ಕ್ಷಯ ರೋಗಿಗಳ ದೇಹದ ತೂಕವನ್ನು ಪರೀಕ್ಷೆ ಮಾಡಿಸಿ, ಅಗತ್ಯ ಅನುಸಾರ ಪುಷ್ಟಿ ಪೌಡರ್ ಒದಗಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>