<p><strong>ಬೆಂಗಳೂರು:</strong> ಶಿಕ್ಷಕರ ವರ್ಗಾವಣೆಯನ್ನು ಸರಳಗೊಳಿಸುವ ನಿಟ್ಟಿನಲ್ಲಿ ರೂಪಿಸಿರುವ ಶಿಕ್ಷಕರ ವರ್ಗಾವಣೆ ಕಾಯ್ದೆಗೆ ವಿಧಾನ ಪರಿಷತ್ ಬುಧವಾರ ಅಂಗೀಕಾರ ನೀಡಿತು.</p>.<p>ವಿವಿಧ ಪಕ್ಷಗಳ17 ಸದಸ್ಯರು ನಿಯಮ ರೂಪಿಸುವಾಗ ಕೆಲವೊಂದು ತಿದ್ದುಪಡಿಗಳನ್ನು ಮಾಡಬೇಕು ಎಂದು ಸಲಹೆ ನೀಡಿ, ಮಸೂದೆಯನ್ನು ಸ್ವಾಗತಿಸಿದರು.</p>.<p>‘ಮುಖ್ಯಮಂತ್ರಿ ಮತ್ತು ಶಾಸಕರ ಒತ್ತಾಯಕ್ಕೆ ಮಣಿದು ವೈಯಕ್ತಿಕ ನೆಲೆಯಲ್ಲಿವರ್ಗಾವಣೆ ಮಾಡುವುದಿಲ್ಲ, ಜನಗಣತಿ ಸಹಿತ ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ವರ್ಗಾವಣೆ ಸಾಧ್ಯವಾಗದ ಸಂದರ್ಭದಲ್ಲಿ ಮಾತ್ರ ಸಾಮೂಹಿಕ ವರ್ಗಾವಣೆಗೆ ಅವಕಾಶ ನೀಡಲಾಗುತ್ತದೆ. ಹೀಗಾಗಿ ಈ ವಿಷಯದಲ್ಲಿ ಯಾವುದೇ ಸಂಶಯ ಬೇಡ’ ಎಂದು ಸಚಿವ ಸುರೇಶ್ಕುಮಾರ್ ಭರವಸೆ ನೀಡಿದರು.</p>.<p>ಸದಸ್ಯರ ಸಲಹೆಗಳನ್ನು ನಿಯಮ ರೂಪಿಸುವಾಗ ಸೇರಿಸಿಕೊಳ್ಳಲಾಗುವುದು ಎಂದೂ ಅವರು ಹೇಳಿದರು. ಸದನ ಧ್ವನಿಮತದಿಂದ ಮಸೂದೆ ಅಂಗೀಕರಿಸಿತು.</p>.<p><strong>ಹೊರಟ್ಟಿ ಕೊಡುಗೆಗೆ ಮೆಚ್ಚುಗೆ:</strong> ಸರ್ಕಾರ ರೂಪಿಸಿರುವ ವರ್ಗಾವಣೆ ಮಸೂದೆಗೆ ಬೀಜ ಬಿತ್ತಿದವರು ಬಸವರಾಜ ಹೊರಟ್ಟಿ. ಭಾರಿ ಭ್ರಷ್ಟಾಚಾರ ತಪ್ಪಿಸಲು ಅವರು ರೂಪಿಸಿದ ಕಾಯ್ದೆ ರಾಜ್ಯದ ಇತಿಹಾಸದಲ್ಲಿ ಒಂದು ದಿಟ್ಟ ಹೆಜ್ಜೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಶಿಕ್ಷಕರ ವರ್ಗಾವಣೆಯನ್ನು ಸರಳಗೊಳಿಸುವ ನಿಟ್ಟಿನಲ್ಲಿ ರೂಪಿಸಿರುವ ಶಿಕ್ಷಕರ ವರ್ಗಾವಣೆ ಕಾಯ್ದೆಗೆ ವಿಧಾನ ಪರಿಷತ್ ಬುಧವಾರ ಅಂಗೀಕಾರ ನೀಡಿತು.</p>.<p>ವಿವಿಧ ಪಕ್ಷಗಳ17 ಸದಸ್ಯರು ನಿಯಮ ರೂಪಿಸುವಾಗ ಕೆಲವೊಂದು ತಿದ್ದುಪಡಿಗಳನ್ನು ಮಾಡಬೇಕು ಎಂದು ಸಲಹೆ ನೀಡಿ, ಮಸೂದೆಯನ್ನು ಸ್ವಾಗತಿಸಿದರು.</p>.<p>‘ಮುಖ್ಯಮಂತ್ರಿ ಮತ್ತು ಶಾಸಕರ ಒತ್ತಾಯಕ್ಕೆ ಮಣಿದು ವೈಯಕ್ತಿಕ ನೆಲೆಯಲ್ಲಿವರ್ಗಾವಣೆ ಮಾಡುವುದಿಲ್ಲ, ಜನಗಣತಿ ಸಹಿತ ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ವರ್ಗಾವಣೆ ಸಾಧ್ಯವಾಗದ ಸಂದರ್ಭದಲ್ಲಿ ಮಾತ್ರ ಸಾಮೂಹಿಕ ವರ್ಗಾವಣೆಗೆ ಅವಕಾಶ ನೀಡಲಾಗುತ್ತದೆ. ಹೀಗಾಗಿ ಈ ವಿಷಯದಲ್ಲಿ ಯಾವುದೇ ಸಂಶಯ ಬೇಡ’ ಎಂದು ಸಚಿವ ಸುರೇಶ್ಕುಮಾರ್ ಭರವಸೆ ನೀಡಿದರು.</p>.<p>ಸದಸ್ಯರ ಸಲಹೆಗಳನ್ನು ನಿಯಮ ರೂಪಿಸುವಾಗ ಸೇರಿಸಿಕೊಳ್ಳಲಾಗುವುದು ಎಂದೂ ಅವರು ಹೇಳಿದರು. ಸದನ ಧ್ವನಿಮತದಿಂದ ಮಸೂದೆ ಅಂಗೀಕರಿಸಿತು.</p>.<p><strong>ಹೊರಟ್ಟಿ ಕೊಡುಗೆಗೆ ಮೆಚ್ಚುಗೆ:</strong> ಸರ್ಕಾರ ರೂಪಿಸಿರುವ ವರ್ಗಾವಣೆ ಮಸೂದೆಗೆ ಬೀಜ ಬಿತ್ತಿದವರು ಬಸವರಾಜ ಹೊರಟ್ಟಿ. ಭಾರಿ ಭ್ರಷ್ಟಾಚಾರ ತಪ್ಪಿಸಲು ಅವರು ರೂಪಿಸಿದ ಕಾಯ್ದೆ ರಾಜ್ಯದ ಇತಿಹಾಸದಲ್ಲಿ ಒಂದು ದಿಟ್ಟ ಹೆಜ್ಜೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>