<p><strong>ಬೆಂಗಳೂರು</strong>: ‘ಕೋವಿಡ್ ಲಸಿಕೆ ಪಡೆಯಲು ಬಸವನಗುಡಿಯ ಬಿಜೆಪಿ ಶಾಸಕ ಎಲ್.ಎ.ರವಿಸುಬ್ರಹ್ಮಣ್ಯ ಅವರಿಗೆ ಲಂಚ ನೀಡಬೇಕು’ ಎಂಬ ವೈರಲ್ ಆಗಿದ್ದ ಆಡಿಯೊ ಸಂಭಾಷಣೆ ಆಧರಿಸಿ ಸುದ್ದಿ ಪ್ರಕಟಿಸಿದ್ದ ಆನ್ಲೈನ್ ಮಾಧ್ಯಮ, ʼದಿ ನ್ಯೂಸ್ ಮಿನಿಟ್ʼ ವಿರುದ್ಧದ ಮಾನಹಾನಿ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ತಡೆ ನೀಡಿದೆ.</p><p>ಈ ಸಂಬಂಧ, ‘ದಿ ನ್ಯೂಸ್ ಮಿನಿಟ್‘ ಮಾತೃ ಸಂಸ್ಥೆ, ‘ಸ್ಪುಂಕ್ಲೇನ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿ‘ ಸಲ್ಲಿಸಿರುವ ಸಿವಿಲ್ ರಿವಿಷನ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.</p><p><strong>ಪ್ರಕರಣವೇನು? </strong></p><p><strong>‘</strong>ಸಾಮಾಜಿಕ ಕಾರ್ಯಕರ್ತ ಎಚ್.ಎಂ.ವೆಂಕಟೇಶ್ ಅವರು ಬಸವನಗುಡಿಯ ಅನುಗ್ರಹ ವಿಠ್ಠಲ ಆಸ್ಪತ್ರೆ ಸಿಬ್ಬಂದಿ ಜೊತೆ ಮಾತನಾಡುತ್ತಿದ್ದಾರೆ’ ಎನ್ನಲಾದ ಆಡಿಯೊದಲ್ಲಿ, ಸಿಬ್ಬಂದಿಯು, ‘ಕೋವಿಡ್ ಲಸಿಕೆಯೊಂದಕ್ಕೆ ₹900 ವೆಚ್ಚವಾಗುತ್ತದೆ. ಇದರಲ್ಲಿ ₹700 ಅನ್ನು ಶಾಸಕ ರವಿಸುಬ್ರಹ್ಮಣ್ಯ ಅವರಿಗೆ ನೀಡಬೇಕು. ಆಸ್ಪತ್ರೆಗೆ ₹200 ಮಾತ್ರ ಉಳಿಯಲಿದೆ’ ಎಂಬ ಸಂಭಾಷಣೆ ವೈರಲ್ ಆಗಿತ್ತು.</p><p>ತದನಂತರ ವೆಂಕಟೇಶ್, ‘ಕೋವಿಡ್ ಲಸಿಕೆಯನ್ನು ಲಾಭ ಮಾಡಿಕೊಳ್ಳುವ ದಂಧೆಯನ್ನಾಗಿ ಮಾಡಿಕೊಳ್ಳಲಾಗಿದೆ’ ಎಂದು ಆರೋಪಿಸಿದ್ದರು. ಇದನ್ನು ಆಧರಿಸಿ ‘ದಿ ನ್ಯೂಸ್ ಮಿನಿಟ್’, ‘ದಿ ಇಂಡಿಯನ್ ಎಕ್ಸ್ಪ್ರೆಸ್’, ‘ದಿ ಕಾಗ್ನೇಟ್’ ಸೇರಿದಂತೆ ಇತರೆ ಮಾಧ್ಯಮಗಳು ಈ ಸಂಭಾಷಣೆಯನ್ನು ಬಿತ್ತರಿಸಿದ್ದವು.</p><p>ಈ ಹಿನ್ನೆಲೆಯಲ್ಲಿ ಶಾಸಕ ರವಿ ಸುಬ್ರಹ್ಮಣ್ಯ ಅವರು, ಎಚ್.ಎಂ.ವೆಂಕಟೇಶ್, ಅನುಗ್ರಹ ವಿಠ್ಠಲ ಆಸ್ಪತ್ರೆ, ಆಪ್ನಾ ದೆಹಲಿ ಘಟಕ ಮತ್ತು ಆಪ್ ನಾಯಕಿ ಆತಿಷಿ ಮರ್ಲೇನಾ ವಿರುದ್ಧ ₹3 ಕೋಟಿ ಪರಿಹಾರ ಕೋರಿ ಮಾನಹಾನಿ ಪ್ರಕರಣ ಹೂಡಿದ್ದರು. ಪ್ರಕರಣಕ್ಕೆ ತಡೆ ನೀಡುವಂತೆ ಕೋರಿ, ‘ದಿ ನ್ಯೂಸ್ ಮಿನಿಟ್’ 2023ರ ನವೆಂಬರ್ 23ರಂದು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಕೋವಿಡ್ ಲಸಿಕೆ ಪಡೆಯಲು ಬಸವನಗುಡಿಯ ಬಿಜೆಪಿ ಶಾಸಕ ಎಲ್.ಎ.ರವಿಸುಬ್ರಹ್ಮಣ್ಯ ಅವರಿಗೆ ಲಂಚ ನೀಡಬೇಕು’ ಎಂಬ ವೈರಲ್ ಆಗಿದ್ದ ಆಡಿಯೊ ಸಂಭಾಷಣೆ ಆಧರಿಸಿ ಸುದ್ದಿ ಪ್ರಕಟಿಸಿದ್ದ ಆನ್ಲೈನ್ ಮಾಧ್ಯಮ, ʼದಿ ನ್ಯೂಸ್ ಮಿನಿಟ್ʼ ವಿರುದ್ಧದ ಮಾನಹಾನಿ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ತಡೆ ನೀಡಿದೆ.</p><p>ಈ ಸಂಬಂಧ, ‘ದಿ ನ್ಯೂಸ್ ಮಿನಿಟ್‘ ಮಾತೃ ಸಂಸ್ಥೆ, ‘ಸ್ಪುಂಕ್ಲೇನ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿ‘ ಸಲ್ಲಿಸಿರುವ ಸಿವಿಲ್ ರಿವಿಷನ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.</p><p><strong>ಪ್ರಕರಣವೇನು? </strong></p><p><strong>‘</strong>ಸಾಮಾಜಿಕ ಕಾರ್ಯಕರ್ತ ಎಚ್.ಎಂ.ವೆಂಕಟೇಶ್ ಅವರು ಬಸವನಗುಡಿಯ ಅನುಗ್ರಹ ವಿಠ್ಠಲ ಆಸ್ಪತ್ರೆ ಸಿಬ್ಬಂದಿ ಜೊತೆ ಮಾತನಾಡುತ್ತಿದ್ದಾರೆ’ ಎನ್ನಲಾದ ಆಡಿಯೊದಲ್ಲಿ, ಸಿಬ್ಬಂದಿಯು, ‘ಕೋವಿಡ್ ಲಸಿಕೆಯೊಂದಕ್ಕೆ ₹900 ವೆಚ್ಚವಾಗುತ್ತದೆ. ಇದರಲ್ಲಿ ₹700 ಅನ್ನು ಶಾಸಕ ರವಿಸುಬ್ರಹ್ಮಣ್ಯ ಅವರಿಗೆ ನೀಡಬೇಕು. ಆಸ್ಪತ್ರೆಗೆ ₹200 ಮಾತ್ರ ಉಳಿಯಲಿದೆ’ ಎಂಬ ಸಂಭಾಷಣೆ ವೈರಲ್ ಆಗಿತ್ತು.</p><p>ತದನಂತರ ವೆಂಕಟೇಶ್, ‘ಕೋವಿಡ್ ಲಸಿಕೆಯನ್ನು ಲಾಭ ಮಾಡಿಕೊಳ್ಳುವ ದಂಧೆಯನ್ನಾಗಿ ಮಾಡಿಕೊಳ್ಳಲಾಗಿದೆ’ ಎಂದು ಆರೋಪಿಸಿದ್ದರು. ಇದನ್ನು ಆಧರಿಸಿ ‘ದಿ ನ್ಯೂಸ್ ಮಿನಿಟ್’, ‘ದಿ ಇಂಡಿಯನ್ ಎಕ್ಸ್ಪ್ರೆಸ್’, ‘ದಿ ಕಾಗ್ನೇಟ್’ ಸೇರಿದಂತೆ ಇತರೆ ಮಾಧ್ಯಮಗಳು ಈ ಸಂಭಾಷಣೆಯನ್ನು ಬಿತ್ತರಿಸಿದ್ದವು.</p><p>ಈ ಹಿನ್ನೆಲೆಯಲ್ಲಿ ಶಾಸಕ ರವಿ ಸುಬ್ರಹ್ಮಣ್ಯ ಅವರು, ಎಚ್.ಎಂ.ವೆಂಕಟೇಶ್, ಅನುಗ್ರಹ ವಿಠ್ಠಲ ಆಸ್ಪತ್ರೆ, ಆಪ್ನಾ ದೆಹಲಿ ಘಟಕ ಮತ್ತು ಆಪ್ ನಾಯಕಿ ಆತಿಷಿ ಮರ್ಲೇನಾ ವಿರುದ್ಧ ₹3 ಕೋಟಿ ಪರಿಹಾರ ಕೋರಿ ಮಾನಹಾನಿ ಪ್ರಕರಣ ಹೂಡಿದ್ದರು. ಪ್ರಕರಣಕ್ಕೆ ತಡೆ ನೀಡುವಂತೆ ಕೋರಿ, ‘ದಿ ನ್ಯೂಸ್ ಮಿನಿಟ್’ 2023ರ ನವೆಂಬರ್ 23ರಂದು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>