ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬರಸ್ಥಿತಿ ಭೀಕರವಾಗಿದೆ. ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆ ಇದೆ. ಇಂತಹ ಸಮಯದಲ್ಲಿ ರೈತರಿಗೆ ₹2 ಸಾವಿರ ನೀಡಿ ಸುಮ್ಮನಾಗಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗ ಕೃಷಿ ಸಮ್ಮಾನ ಯೋಜನೆ ಅಡಿ ಕೇಂದ್ರದ ₹6 ಸಾವಿರ ಜತೆಗೆ, ರಾಜ್ಯ ಸರ್ಕಾರವೂ ₹4 ಸಾವಿರ ನೀಡುತ್ತಿತ್ತು. ಅದನ್ನೂ ಸ್ಥಗಿತ ಮಾಡಲಾಗಿದೆ ಎಂದರು.