‘ಸಿದ್ಧಗಂಗಾ ಮಠಕ್ಕೂ ನನಗೂ ನಾಲ್ಕೈದು ದಶಕಗಳ ಅವಿನಾಭಾವ ಸಂಬಂಧವಿದೆ. ಹಿಂದಿನ ಸ್ವಾಮೀಜಿ ಅವರ ಅಣತಿ ಮೇರೆಗೆ ಅಲ್ಲಿ ಸಣ್ಣ ಕಟ್ಟಡ ಕಟ್ಟಿದ್ದು, ಅದನ್ನು ಮಠಕ್ಕೆ ಹಸ್ತಾಂತರಿಸುತ್ತಿದ್ದೇನೆ. ಎರಡು ತಿಂಗಳ ಹಿಂದೆಯೇ ಈ ಕಾರ್ಯಕ್ರಮ ನಿರ್ಧಾರವಾಗಿತ್ತು. ಸಿದ್ಧಗಂಗಾ ಕ್ಷೇತ್ರ ರಾಜಕಾರಣ, ಶಕ್ತಿ ಪ್ರದರ್ಶನಕ್ಕೆ ಅಲ್ಲ. ಹಿಂದಿನ ಶ್ರೀಗಳ ಸೂಚನೆಯನ್ನು ನಮ್ಮ ಕುಟುಂಬ ನೆರವೇರಿಸಿದೆ. ಅಧಿಕಾರದಲ್ಲಿ ಇರುವವರನ್ನು ಕಾರ್ಯಕ್ರಮಕ್ಕೆ ಕರೆಯುವುದು ಸಹಜ. ಸಚಿವರಾದ ಜಿ.ಪರಮೇಶ್ವರ, ಕೆ.ಎನ್. ರಾಜಣ್ಣ, ಸಂಸದ ಜಿ.ಎಸ್. ಬಸವರಾಜ, ಶಾಸಕ ಸುರೇಶ್ ಗೌಡ ಸೇರಿ ಎಲ್ಲ ಪಕ್ಷದವರನ್ನು ಕರೆದಿದ್ದೇನೆ. ಸಿದ್ಧಗಂಗಾ ಮಠ ಜಾತಿಯನ್ನು ಮೀರಿದ್ದು’ ಎಂದು ಸೋಮಣ್ಣ ಹೇಳಿದರು.