ಸೋಮವಾರ, 7 ಜುಲೈ 2025
×
ADVERTISEMENT
ADVERTISEMENT

ಮನಮೋಹನ ಸಿಂಗ್ ಹೆಸರಿಟ್ಟರೆ ಸಮಸ್ಯೆ ಏನು?: ವಿಪಕ್ಷಗಳ ಟೀಕೆಗೆ ಡಿಕೆಶಿ ಪ್ರಶ್ನೆ

Published : 8 ಮಾರ್ಚ್ 2025, 15:51 IST
Last Updated : 8 ಮಾರ್ಚ್ 2025, 15:51 IST
ಫಾಲೋ ಮಾಡಿ
Comments
ಸೌಮ್ಯಾ ರೆಡ್ಡಿ
ಸೌಮ್ಯಾ ರೆಡ್ಡಿ
ನಿಖಿಲ್ ಕುಮಾರಸ್ವಾಮಿ
ನಿಖಿಲ್ ಕುಮಾರಸ್ವಾಮಿ
‘ಬ್ರ್ಯಾಂಡ್‌ ಬೆಂಗಳೂರು’ ಯೋಜನೆಯನ್ನು ಜಾರಿಗೆ ತಂದೇ ತರುತ್ತೇವೆ. ಅದಕ್ಕಾಗಿ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸಾಧ್ಯವಿದ್ದುದನ್ನು ಸಿದ್ದರಾಮಯ್ಯನವರು ನಗರಕ್ಕೆ ನೀಡಿದ್ದಾರೆ
ಡಿ.ಕೆ.ಶಿವಕುಮಾರ್‌ ಉಪ ಮುಖ್ಯಮಂತ್ರಿ
‘ಜೆಲಾಸಿಲ್‌ ಇನೊ ಕಳಿಸುತ್ತೇವೆ’ ಸಿದ್ದರಾಮಯ್ಯ ಅವರು ಮಾದರಿ ಬಜೆಟ್‌ ಮಂಡಿಸಿದ್ದಾರೆ. ಮಹಿಳೆಯರಿಗೆ ಒಟ್ಟು ₹92000 ಕೋಟಿ ಅನುದಾನ ಒದಗಿಸಿದ್ದಾರೆ. ಇಷ್ಟು ಒಳ್ಳೆಯ ಬಜೆಟ್‌ ನೀಡಿರುವುದನ್ನು ನೋಡಿ ವಿರೋಧ ಪಕ್ಷಗಳ ನಾಯಕರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಅವರು ಹೊಟ್ಟೆ ಉರಿದುಕೊಳ್ಳುತ್ತಿದ್ದಾರೆ. ಅವರ ಈ ಸಮಸ್ಯೆ ಕಡಿಮೆ ಮಾಡಲು ಜೆಲಾಸಿಲ್ ಸಿರ‍ಪ್‌ ಮಾತ್ರೆ ಇನ್ನೂ ಎಲ್ಲವನ್ನೂ ಸಂಗ್ರಹಿಸಿದ್ದೇವೆ. ಇದನ್ನು ಅವರಿಗೆ ಕಳುಹಿಸಿ ಕೊಡುತ್ತೇವೆ. ಅವರ ಹೊಟ್ಟೆಯುರಿ ಶಮನವಾಗಲಿ. ಈ ಔಷಧಗಳು ಸಾಲದಿದ್ದರೆ ಹೇಳಲಿ ಇನ್ನಷ್ಟು ಕಳುಹಿಸುತ್ತೇವೆ.
ಸೌಮ್ಯಾ ರೆಡ್ಡಿ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ
‘ಮುಸ್ಲಿಮರಿಗೆ ಈದ್‌ ಕಾ ಬಿರಿಯಾನಿ’ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಮುಸ್ಲಿಮರಿಗೆ ‘ಈದ್ ಕಾ ಬಿರಿಯಾನಿ’ ನೀಡಿದ್ದಾರೆ. ಸಿಖ್ಖರು ಜೈನರು ಬೌದ್ಧ ಮತ್ತು ಕ್ರೈಸ್ತ ಧರ್ಮೀಯರಿಗೆ ನೆಕ್ಕಲು ಉಪ್ಪಿನಕಾಯಿ ನೀಡಿದ್ದಾರೆ. ಬಿರಿಯಾನಿ ತಿನ್ನುತ್ತಿರುವವರು ಮುಸಲ್ಮಾನರು ಮಾತ್ರ. 16ನೇ ಬಜೆಟ್‌ ಮಂಡಿಸಿದ್ದೇನೆ ಎಂದು ಎದೆ ತಟ್ಟಿಕೊಳ್ಳುತ್ತಾರೆ. ಮುಸ್ಲಿಮರಿಗೆ 16 ಹೊಸ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಉರ್ದು ಶಾಲೆಗಳನ್ನು ನಿರ್ಮಿಸಲು ವಕ್ಫ್‌ ಆಸ್ತಿಗಳಲ್ಲಿ ಕಟ್ಟಡ ನಿರ್ಮಿಸಲು ನೂರಾರು ಕೋಟಿ ನೀಡಿದ್ದಾರೆ. ದಲಿತರಿಗೆ ಹಿಂದುಳಿದವರಿಗೆ ಏನೂ ನೀಡಿಲ್ಲ. ಇದರಲ್ಲಿ ಸಾಮಾಜಿಕ ನ್ಯಾಯ ಎಲ್ಲಿದೆ?
ನಿಖಿಲ್‌ ಕುಮಾರಸ್ವಾಮಿ ಜೆಡಿಎಸ್‌ ಯುವ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT