‘ಮರದ ಬೊಡ್ಡೆ (ಬುಡಚಿ)ಯನ್ನು ಸಂಗ್ರಹಿಸಿ, ಅದರ ಒಳಗಿನ ಪೊಳ್ಳು ಭಾಗದಲ್ಲಿ, ಬೆಲ್ಲ, ಘಮದ ಚಕ್ಕೆ (ಅಡುಗೆಗೆ ಬಳಸುವ), ನಿರುಪಯುಕ್ತ ಜೇನುರಟ್ಟನ್ನು ಇಟ್ಟರೆ 10 ದಿನಗಳ ಒಳಗೆ ಇದರೊಳಗೆ ಜೇನು ಸೇರಿಕೊಳ್ಳುತ್ತದೆ. ರೈತರ ಜಮೀನಿನ ಗುಂಟ 100ರಿಂದ 200 ಮೀಟರ್ ಅಂತರದಲ್ಲಿ ಇಂತಹ ಬೊಡ್ಡೆಗಳನ್ನು ಕಟ್ಟಲಾಗಿದೆ. ಮರಗಳ ಹೆಣೆ ಅಥವಾ ಎರಡು ಕಂಬಗಳ ನಡುವೆ ಇಂತಹ ಹಲವಾರು ಬೊಡ್ಡೆಗಳು ಇವೆ. ಜೇನು ಪಡೆ ಸಂಚಾರ, ಅವುಗಳ ಸದ್ದಿಗೆ ಹೆದರುವ ಆನೆಗಳು ಈ ಮಾರ್ಗದಲ್ಲಿ ಓಡಾಡುವುದು ಕಡಿಮೆಯಾಗಿದೆ. ಕಳೆದ ವರ್ಷ ಬೆಳೆ ಹಾನಿ ಪ್ರಮಾಣ ಕೂಡ ಕಡಿಮೆಯಾಗಿದೆ’ ಎಂದು ಪ್ರಶಾಂತ್ ವಿವರಿಸಿದರು.