<p><strong>ಹೊಸಪೇಟೆ:</strong> ‘ಕನ್ನಡ ವಿಶ್ವವಿದ್ಯಾಲಯದ ಬಗ್ಗೆ ಅಧಿಕಾರಶಾಹಿಗೆ ತಪ್ಪು ಕಲ್ಪನೆ ಇದೆ. ಕನ್ನಡ ಕಲಿತವರಿಗೆ ಯಾವುದೇ ಭವಿಷ್ಯವಿಲ್ಲ ಎಂಬ ಮನಸ್ಥಿತಿಯನ್ನು ಅಧಿಕಾರಶಾಹಿ ಹೊಂದಿರುವುದರಿಂದ ವಿ.ವಿಯ ಅನೇಕ ಕೆಲಸಗಳು ನನೆಗುದಿಗೆ ಬಿದ್ದಿವೆ’ ಎಂದು ವಿ.ವಿ ಕುಲಪತಿ ಪ್ರೊ. ಮಲ್ಲಿಕಾ ಎಸ್. ಘಂಟಿ ಬೇಸರ ವ್ಯಕ್ತಪಡಿಸಿದರು.</p>.<p>ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿ ಹಬ್ಬದ ಅಂಗವಾಗಿ ಸೋಮವಾರ ಆಯೋಜಿಸಿದ್ದ ಮೂರನೇ ಹಂತದ ಚಿಂತನ–ಮಂಥನ ಕಾರ್ಯಕ್ರಮದಲ್ಲಿ ವಿಷಯ ಮಂಡಿಸಿ ಅವರು ಮಾತನಾಡಿದರು.</p>.<p>‘ವಿಶ್ವವಿದ್ಯಾಲಯವು ಸಂಶೋಧನೆ ಜತೆಗೆ ಭಾಷೆ ಮೂಲಕ ಜನರ ಬದುಕು ಕಟ್ಟಿಕೊಡುವ ಕೆಲಸ ಮಾಡುತ್ತಿದೆ ಎನ್ನುವುದು ಅಧಿಕಾರಶಾಹಿಗೆ ಗೊತ್ತಿಲ್ಲ. ಅರ್ಥಶಾಸ್ತ್ರ, ನೀರಿನ ನಿರ್ವಹಣೆ, ಬರ ನಿರ್ವಹಣೆ ಕುರಿತೂ ವಿ.ವಿ ಕೆಲಸ ಮಾಡುತ್ತಿದೆ. ಈ ವಿಷಯಗಳ ಬಗ್ಗೆ ಸರ್ಕಾರ ನೆರವು ಕೇಳಿದರೆ ಕೊಡಲು ವಿ.ವಿ ಸಿದ್ಧ ವಿದೆ’ ಎಂದರು.</p>.<p>‘ವಿಶ್ವವಿದ್ಯಾಲಯವನ್ನು ಭೌತಿಕವಾಗಿ ಮತ್ತು ಬೌದ್ಧಿಕವಾಗಿ ಕಟ್ಟುವ ಮಹತ್ವಾಕಾಂಕ್ಷೆ ಇದೆ. ಆದರೆ ಇದಕ್ಕೆ ಅನುದಾನದ ಕೊರತೆ ಇದೆ. ಸರ್ಕಾರ ಅನುದಾನ ಬಿಡುಗಡೆ ಮಾಡಲು ಒಪ್ಪಿದ್ದರೂ ಕೆಲಸ ಮಾಡಲು ಅಧಿಕಾರಶಾಹಿ ಹಿಂದೇಟು ಹಾಕುತ್ತಿದೆ’ ಎಂದು ಆರೋಪಿಸಿದರು.</p>.<p>‘ವಿ.ವಿ ಒಟ್ಟು 700 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಇದನ್ನು ರಕ್ಷಿಸುವ ಉದ್ದೇಶದಿಂದ ಇಡೀ ಆವರಣಕ್ಕೆ ಬೇಲಿ ಹಾಕಿಕೊಡಲು ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಮನವಿ ಕೊಟ್ಟರೆ ಅಧಿಕಾರಿಗಳು ಸ್ಪಂದಿಸಲಿಲ್ಲ. ಸ್ವತಃ ಮುಖ್ಯಮಂತ್ರಿ ಹೇಳಿದರೂ ಅಧಿಕಾರಿಗಳು ಅಸಡ್ಡೆ ತೋರಿಸುತ್ತಿದ್ದಾರೆ’ ಎಂದು ತಿಳಿಸಿದರು.</p>.<p>‘ಕಳೆದ 25 ವರ್ಷಗಳಲ್ಲಿ ಸರ್ಕಾರದಿಂದ ಕನ್ನಡ ವಿ.ವಿಗೆ ಕೇವಲ ₹ 58 ಕೋಟಿ ಅನುದಾನ ಬಿಡುಗಡೆಯಾಗಿದೆ. ಇದು ಸಣ್ಣ ಖಾಸಗಿ ಕಾಲೇಜೊಂದರ ಸ್ಥಾಪನೆಗೆ ಸಮನಾದ ಅನುದಾನ. ಆದರೆ, ಇದ್ದುದರಲ್ಲೇ ವಿಶ್ವವಿದ್ಯಾಲಯವು ಅನೇಕ ಗುರುತರ ಕೆಲಸಗಳನ್ನು ಮಾಡಿದೆ’ ಎಂದು ಕುಲಪತಿ ಹೇಳಿದರು.<br /> ‘ವಿ.ವಿಯಲ್ಲಿ ಸಿಬ್ಬಂದಿ ಕೊರತೆ ಇದೆ. ನಾವು ಸಾಗಬೇಕಿರುವ ದಾರಿ ಬಹಳ ದೂರ ಇದೆ. ಆ ದಾರಿಯನ್ನು ಹೇಗೆ ಕ್ರಮಿಸಬೇಕು ಎನ್ನುವುದರ ಕುರಿತು ವಿವಿಧ ವಲಯದ ಜನರಿಂದ ಮಾಹಿತಿ ಕಲೆ ಹಾಕಲಾಗುತ್ತಿದೆ. ಇದೇ 5 ಮತ್ತು 6 ರಂದು ರಾಜಕಾರಣಿಗಳನ್ನು ಆಹ್ವಾನಿಸಿ, ಅಭಿಪ್ರಾಯ ಪಡೆಯಲಾಗುವುದು. 88ಕ್ಕೂ ಹೆಚ್ಚು ಶಾಸಕರು ಕಾರ್ಯಕ್ರಮಕ್ಕೆ ಬರಲು ಒಪ್ಪಿದ್ದಾರೆ’ ಎಂದರು.</p>.<p><strong>‘ದೇವದುರ್ಗದಲ್ಲಿ ಬೌದ್ಧ ವಿಸ್ತರಣಾ ಕೇಂದ್ರ’</strong></p>.<p>‘ಮುಂದಿನ ಶೈಕ್ಷಣಿಕ ವರ್ಷದಿಂದ ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ಬೌದ್ಧ ವಿಸ್ತರಣಾ ಅಧ್ಯಯನ ಕೇಂದ್ರ ಆರಂಭಿಸುವ ಚಿಂತನೆ ಇದೆ. ಈಗಾಗಲೇ ಐದು ಎಕರೆ ಜಮೀನು ನೀಡಲು ಜಿಲ್ಲಾಡಳಿತ ಮುಂದೆ ಬಂದಿದೆ’ ಎಂದು ಕುಲಪತಿ ಪ್ರೊ. ಮಲ್ಲಿಕಾ ಎಸ್. ಘಂಟಿ ಹೇಳಿದರು.<br /> ‘ಬೆಂಗಳೂರಿನಲ್ಲಿ ಡಾ.ರಾಜಕುಮಾರ್ ಅಧ್ಯಯನ ಕೇಂದ್ರ ಆರಂಭಿಸಲಾಗುವುದು.<br /> ಸರ್ಕಾರ ಈಗಾಗಲೇ ಎರಡು ಎಕರೆ ಜಮೀನು ಮಂಜೂರು ಮಾಡಿದೆ. ಅಲ್ಲದೇ, ತಳಸಮುದಾಯಗಳ ಅಧ್ಯಯನ ಕೇಂದ್ರಕ್ಕೆ ಬೆಂಗಳೂರಿ ನಲ್ಲೇ ಐದು ಎಕರೆ ಜಮೀನು ಕಲ್ಪಿಸಿದೆ.<br /> ಈ ಭೌತಿಕ ಸ್ಥಳಗಳನ್ನು ಬೌದ್ಧಿಕವಾಗಿ ಕಟ್ಟುವ ಹೊಣೆಗಾರಿಕೆ ವಿ.ವಿ ಮೇಲಿದ್ದು, ಇದಕ್ಕೆ ಎಲ್ಲರೂ ಸಹಕರಿಸಬೇಕು’ ಎಂದು ಮನವಿ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ:</strong> ‘ಕನ್ನಡ ವಿಶ್ವವಿದ್ಯಾಲಯದ ಬಗ್ಗೆ ಅಧಿಕಾರಶಾಹಿಗೆ ತಪ್ಪು ಕಲ್ಪನೆ ಇದೆ. ಕನ್ನಡ ಕಲಿತವರಿಗೆ ಯಾವುದೇ ಭವಿಷ್ಯವಿಲ್ಲ ಎಂಬ ಮನಸ್ಥಿತಿಯನ್ನು ಅಧಿಕಾರಶಾಹಿ ಹೊಂದಿರುವುದರಿಂದ ವಿ.ವಿಯ ಅನೇಕ ಕೆಲಸಗಳು ನನೆಗುದಿಗೆ ಬಿದ್ದಿವೆ’ ಎಂದು ವಿ.ವಿ ಕುಲಪತಿ ಪ್ರೊ. ಮಲ್ಲಿಕಾ ಎಸ್. ಘಂಟಿ ಬೇಸರ ವ್ಯಕ್ತಪಡಿಸಿದರು.</p>.<p>ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿ ಹಬ್ಬದ ಅಂಗವಾಗಿ ಸೋಮವಾರ ಆಯೋಜಿಸಿದ್ದ ಮೂರನೇ ಹಂತದ ಚಿಂತನ–ಮಂಥನ ಕಾರ್ಯಕ್ರಮದಲ್ಲಿ ವಿಷಯ ಮಂಡಿಸಿ ಅವರು ಮಾತನಾಡಿದರು.</p>.<p>‘ವಿಶ್ವವಿದ್ಯಾಲಯವು ಸಂಶೋಧನೆ ಜತೆಗೆ ಭಾಷೆ ಮೂಲಕ ಜನರ ಬದುಕು ಕಟ್ಟಿಕೊಡುವ ಕೆಲಸ ಮಾಡುತ್ತಿದೆ ಎನ್ನುವುದು ಅಧಿಕಾರಶಾಹಿಗೆ ಗೊತ್ತಿಲ್ಲ. ಅರ್ಥಶಾಸ್ತ್ರ, ನೀರಿನ ನಿರ್ವಹಣೆ, ಬರ ನಿರ್ವಹಣೆ ಕುರಿತೂ ವಿ.ವಿ ಕೆಲಸ ಮಾಡುತ್ತಿದೆ. ಈ ವಿಷಯಗಳ ಬಗ್ಗೆ ಸರ್ಕಾರ ನೆರವು ಕೇಳಿದರೆ ಕೊಡಲು ವಿ.ವಿ ಸಿದ್ಧ ವಿದೆ’ ಎಂದರು.</p>.<p>‘ವಿಶ್ವವಿದ್ಯಾಲಯವನ್ನು ಭೌತಿಕವಾಗಿ ಮತ್ತು ಬೌದ್ಧಿಕವಾಗಿ ಕಟ್ಟುವ ಮಹತ್ವಾಕಾಂಕ್ಷೆ ಇದೆ. ಆದರೆ ಇದಕ್ಕೆ ಅನುದಾನದ ಕೊರತೆ ಇದೆ. ಸರ್ಕಾರ ಅನುದಾನ ಬಿಡುಗಡೆ ಮಾಡಲು ಒಪ್ಪಿದ್ದರೂ ಕೆಲಸ ಮಾಡಲು ಅಧಿಕಾರಶಾಹಿ ಹಿಂದೇಟು ಹಾಕುತ್ತಿದೆ’ ಎಂದು ಆರೋಪಿಸಿದರು.</p>.<p>‘ವಿ.ವಿ ಒಟ್ಟು 700 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಇದನ್ನು ರಕ್ಷಿಸುವ ಉದ್ದೇಶದಿಂದ ಇಡೀ ಆವರಣಕ್ಕೆ ಬೇಲಿ ಹಾಕಿಕೊಡಲು ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಮನವಿ ಕೊಟ್ಟರೆ ಅಧಿಕಾರಿಗಳು ಸ್ಪಂದಿಸಲಿಲ್ಲ. ಸ್ವತಃ ಮುಖ್ಯಮಂತ್ರಿ ಹೇಳಿದರೂ ಅಧಿಕಾರಿಗಳು ಅಸಡ್ಡೆ ತೋರಿಸುತ್ತಿದ್ದಾರೆ’ ಎಂದು ತಿಳಿಸಿದರು.</p>.<p>‘ಕಳೆದ 25 ವರ್ಷಗಳಲ್ಲಿ ಸರ್ಕಾರದಿಂದ ಕನ್ನಡ ವಿ.ವಿಗೆ ಕೇವಲ ₹ 58 ಕೋಟಿ ಅನುದಾನ ಬಿಡುಗಡೆಯಾಗಿದೆ. ಇದು ಸಣ್ಣ ಖಾಸಗಿ ಕಾಲೇಜೊಂದರ ಸ್ಥಾಪನೆಗೆ ಸಮನಾದ ಅನುದಾನ. ಆದರೆ, ಇದ್ದುದರಲ್ಲೇ ವಿಶ್ವವಿದ್ಯಾಲಯವು ಅನೇಕ ಗುರುತರ ಕೆಲಸಗಳನ್ನು ಮಾಡಿದೆ’ ಎಂದು ಕುಲಪತಿ ಹೇಳಿದರು.<br /> ‘ವಿ.ವಿಯಲ್ಲಿ ಸಿಬ್ಬಂದಿ ಕೊರತೆ ಇದೆ. ನಾವು ಸಾಗಬೇಕಿರುವ ದಾರಿ ಬಹಳ ದೂರ ಇದೆ. ಆ ದಾರಿಯನ್ನು ಹೇಗೆ ಕ್ರಮಿಸಬೇಕು ಎನ್ನುವುದರ ಕುರಿತು ವಿವಿಧ ವಲಯದ ಜನರಿಂದ ಮಾಹಿತಿ ಕಲೆ ಹಾಕಲಾಗುತ್ತಿದೆ. ಇದೇ 5 ಮತ್ತು 6 ರಂದು ರಾಜಕಾರಣಿಗಳನ್ನು ಆಹ್ವಾನಿಸಿ, ಅಭಿಪ್ರಾಯ ಪಡೆಯಲಾಗುವುದು. 88ಕ್ಕೂ ಹೆಚ್ಚು ಶಾಸಕರು ಕಾರ್ಯಕ್ರಮಕ್ಕೆ ಬರಲು ಒಪ್ಪಿದ್ದಾರೆ’ ಎಂದರು.</p>.<p><strong>‘ದೇವದುರ್ಗದಲ್ಲಿ ಬೌದ್ಧ ವಿಸ್ತರಣಾ ಕೇಂದ್ರ’</strong></p>.<p>‘ಮುಂದಿನ ಶೈಕ್ಷಣಿಕ ವರ್ಷದಿಂದ ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ಬೌದ್ಧ ವಿಸ್ತರಣಾ ಅಧ್ಯಯನ ಕೇಂದ್ರ ಆರಂಭಿಸುವ ಚಿಂತನೆ ಇದೆ. ಈಗಾಗಲೇ ಐದು ಎಕರೆ ಜಮೀನು ನೀಡಲು ಜಿಲ್ಲಾಡಳಿತ ಮುಂದೆ ಬಂದಿದೆ’ ಎಂದು ಕುಲಪತಿ ಪ್ರೊ. ಮಲ್ಲಿಕಾ ಎಸ್. ಘಂಟಿ ಹೇಳಿದರು.<br /> ‘ಬೆಂಗಳೂರಿನಲ್ಲಿ ಡಾ.ರಾಜಕುಮಾರ್ ಅಧ್ಯಯನ ಕೇಂದ್ರ ಆರಂಭಿಸಲಾಗುವುದು.<br /> ಸರ್ಕಾರ ಈಗಾಗಲೇ ಎರಡು ಎಕರೆ ಜಮೀನು ಮಂಜೂರು ಮಾಡಿದೆ. ಅಲ್ಲದೇ, ತಳಸಮುದಾಯಗಳ ಅಧ್ಯಯನ ಕೇಂದ್ರಕ್ಕೆ ಬೆಂಗಳೂರಿ ನಲ್ಲೇ ಐದು ಎಕರೆ ಜಮೀನು ಕಲ್ಪಿಸಿದೆ.<br /> ಈ ಭೌತಿಕ ಸ್ಥಳಗಳನ್ನು ಬೌದ್ಧಿಕವಾಗಿ ಕಟ್ಟುವ ಹೊಣೆಗಾರಿಕೆ ವಿ.ವಿ ಮೇಲಿದ್ದು, ಇದಕ್ಕೆ ಎಲ್ಲರೂ ಸಹಕರಿಸಬೇಕು’ ಎಂದು ಮನವಿ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>