<p>ವಿಜಾಪುರ: ಇಲ್ಲಿ ಕುಡಿಯಲು ನೀರಿಲ್ಲ. ಶಾಲಾ ಕಟ್ಟಡ, ಆಸ್ಪತ್ರೆ, ಸಾರ್ವಜನಿಕ ಶೌಚಾಲಯಗಳೂ ಇಲ್ಲ. ಸ್ಮಶಾನ ಜಾಗೆಯಂತೂ ಇಲ್ಲವೇ ಇಲ್ಲ. ಆದರೂ ಇದು ನವಗ್ರಾಮ!<br /> <br /> `ಹುಚ್ಚು ಹೊಳೆ~ ಡೋಣಿ ನದಿಯ ಪ್ರವಾಹ ಪೀಡಿತ ತಾಲ್ಲೂಕಿನ ಕೋಟ್ಯಾಳ ಗ್ರಾಮದಲ್ಲಿ ದಾನಿಗಳ ನೆರವಿನಿಂದ ನಿರ್ಮಿಸಿರುವ ಮನೆಗಳು ಸರ್ಕಾರದ ನಿರ್ಲಕ್ಷ್ಯದಿಂದಾಗಿ ಸಂತ್ರಸ್ತರಿಗೆ ಇನ್ನೂ `ಆಸರೆ~ ಯಾಗಿಲ್ಲ.<br /> <br /> ಮೈಸೂರಿನ ನಾಗರಿಕ ವೇದಿಕೆಯವರು ಇಲ್ಲಿ 477 ಮನೆಗಳನ್ನು ನಿರ್ಮಿಸಿದ್ದಾರೆ. ಪ್ರತಿ ಮನೆಗೆ 1.20 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಡಿಸೆಂಬರ್ 19ರಂದು ಈ ಮನೆಗಳನ್ನು ಮುಖ್ಯಮಂತ್ರಿಗಳು ಉದ್ಘಾಟಿಸಿದ್ದಾರೆ. ಎರಡು ತಿಂಗಳು ಗತಿಸಿದ್ದರೂ ನಿರಾಶ್ರಿತರು ಇಲ್ಲಿ ವಾಸವಾಗಿಲ್ಲ.<br /> <br /> `ಜನ ವಾಸಿಸಲು ಇಲ್ಲಿ ಅಗತ್ಯ ಮೂಲ ಸೌಲಭ್ಯಗಳೇ ಇಲ್ಲ. ಫಲಾನುಭವಿಗಳ ಪಟ್ಟಿಯೂ ದೋಷಪೂರಿತವಾಗಿದೆ. ದೋಷಪೂರಿತ ಪಟ್ಟಿ ಸರಿಪಡಿಸಿ ಅಗತ್ಯ ಸೌಲಭ್ಯ ಕಲ್ಪಿಸುವವರೆಗೂ ನವಗ್ರಾಮಕ್ಕೆ ತೆರಳದಿರಲು ಗ್ರಾಮಸ್ಥರು ನಿರ್ಧರಿಸಿದ್ದೇವೆ~ ಎಂಬುದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕಾಶಿನಾಥ ಕಾಖಂಡಕಿ ಹೇಳಿಕೆ.<br /> <br /> `ಇಲ್ಲಿ ಚರಂಡಿ ಕಾಮಗಾರಿ ಕಳಪೆಯಾಗಿದೆ. ಕಾಲಿಟ್ಟರೆ ಒಡೆದು ಪುಡಿ ಪುಡಿಯಾಗುತ್ತದೆ. ಕುಡಿಯುವ ನೀರಿಗಾಗಿ ತೋಡಿದ ಮೂರು ಕೊಳವೆ ಬಾವಿಗಳು ಕೈಕೊಟ್ಟಿವೆ. 8 ಕಿ.ಮೀ. ದೂರದ ನಿಡೋಣಿ ಗ್ರಾಮದಿಂದ ಪೈಪ್ಲೈನ್ ಜೋಡಣೆ ಮಾಡಲಾಗಿದೆ. ಆದರೆ, ನೀರು ಬರುತ್ತಿಲ್ಲ. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ~ ಎಂದು ಗ್ರಾಮಕ್ಕೆ ಭೇಟಿ ನೀಡಿದ್ದ ಪತ್ರಕರ್ತರಿಗೆ ವಿವರ ನೀಡಿದರು.<br /> <br /> `ನಿಜವಾದ ನಿರಾಶ್ರಿತರಿಗೆ ಮನೆ ಸಿಕ್ಕಿಲ್ಲ. ಮನೆ ಹಂಚಿಕೆ ಪ್ರಕ್ರಿಯೆಯಲ್ಲಿ ದೋಷವಿದೆ. ಪ್ರಥಮ ಹಂಚಿಕೆ ಪಟ್ಟಿ ಪ್ರಕಾರ ಮನೆಗಳು ಹಂಚಿಕೆಯಾಗಿಲ್ಲ. ಹೊಲ-ಮನೆ ಮಾರಿ ಬೇರೆ ಊರಲ್ಲಿ ವಾಸವಿದ್ದವರಿಗೂ ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಈ ಪಟ್ಟಿಯನ್ನು ರದ್ದುಪಡಿಸಿ ನಿಜ ಫಲಾನುಭವಿಗಳಿಗಷ್ಟೇ ಮನೆಗಳನ್ನು ನೀಡಬೇಕು~ ಎಂದು ಗ್ರಾಮಸ್ಥ ರಾಚನಗೌಡ ಪಾಟೀಲ ಆಗ್ರಹಿಸಿದರು.<br /> <br /> `ಕೂಲಿಯನ್ನು ಅವಲಂಬಿಸಿ ಬದುಕುತ್ತಿದ್ದೇವೆ. ನಮಗೆ ಹೊಲ-ಮನೆ ಇಲ್ಲ. ಆಸರೆ ಬಡಾವಣೆಯಲ್ಲಿಯೂ ಮನೆ ದೊರೆತಿಲ್ಲ. ಇನ್ನು ನಾವು ವಾಸಿಸುವುದಾದರೂ ಎಲ್ಲಿ~ ಎಂಬ ಪ್ರಶ್ನೆ ಶರಣಪ್ಪ ಶಿವಪ್ಪ ಹೊಸಟ್ಟಿ, ಶರಣಪ್ಪ ತುಳಜಪ್ಪ ಜತ್ತಿ, ಸುರೇಶ ಸಂಜೀವ ಶಿಡ್ಲೆ, ಸೈಯದ್ ಲಾಲ್ಸಾಬ್ ದಳವಾಯಿ ಪ್ರಶ್ನೆ.<br /> <br /> `ಟೆಕ್ ಮಹೇಂದ್ರ ಪ್ರತಿಷ್ಠಾನ ಹಾಗೂ ಸ್ವಾಮಿ ವಿವೇಕಾನಂದ ಯೂಥ್ ಮೂವ್ಮೆಂಟ್ ಸಂಸ್ಥೆಯ ಸಹಯೋಗದಲ್ಲಿ ಇದನ್ನು ಮಾದರಿ ಗ್ರಾಮವನ್ನಾಗಿ ಮಾಡುವ ನಿಟ್ಟಿನಲ್ಲಿ ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದೇವೆ~ ಎನ್ನುತ್ತಾರೆ ಸ್ವಾಮಿ ವಿವೇಕಾನಂದ ಯೂಥ್ ಮೂವ್ಮೆಂಟ್ನ ಉತ್ತರ ಕರ್ನಾಟಕ ಸಂಚಾಲಕ ನರಸಿಂಹ ರಾಯಚೂರು.<br /> <br /> `ಅರಣ್ಯ ಇಲಾಖೆಯ ಸಹಯೋಗದಲ್ಲಿ ನವ ಗ್ರಾಮದ ಪ್ರತಿ ರಸ್ತೆಯಲ್ಲಿಯೂ ಸಸಿ ನೆಟ್ಟು ಬೆಳೆಸುವುದು, ಪ್ರತಿಯೊಂದು ಮನೆಯ ಆವರಣದಲ್ಲಿ ಪುಟ್ಟ ಕೈತೋಟ ನಿರ್ಮಿಸಲು ಬಯಸಿದ್ದೇವೆ. ಮೂಲಸೌಲಭ್ಯದ ಕೊರತೆಯಿಂದ ನಿರಾಶ್ರಿತರು ಇಲ್ಲಿ ವಾಸಿಸಲು ಹಿಂದೇಟು ಹಾಕುತ್ತಿರುವುದು ಹಾಗೂ ನೀರಿನ ಅಭಾವದಿಂದ ಸಸಿಗಳನ್ನು ನೆಡಲು ಆಗುತ್ತಿಲ್ಲ~ ಎಂಬುದು ಅವರ ಅಸಹಾಯಕತೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಿಜಾಪುರ: ಇಲ್ಲಿ ಕುಡಿಯಲು ನೀರಿಲ್ಲ. ಶಾಲಾ ಕಟ್ಟಡ, ಆಸ್ಪತ್ರೆ, ಸಾರ್ವಜನಿಕ ಶೌಚಾಲಯಗಳೂ ಇಲ್ಲ. ಸ್ಮಶಾನ ಜಾಗೆಯಂತೂ ಇಲ್ಲವೇ ಇಲ್ಲ. ಆದರೂ ಇದು ನವಗ್ರಾಮ!<br /> <br /> `ಹುಚ್ಚು ಹೊಳೆ~ ಡೋಣಿ ನದಿಯ ಪ್ರವಾಹ ಪೀಡಿತ ತಾಲ್ಲೂಕಿನ ಕೋಟ್ಯಾಳ ಗ್ರಾಮದಲ್ಲಿ ದಾನಿಗಳ ನೆರವಿನಿಂದ ನಿರ್ಮಿಸಿರುವ ಮನೆಗಳು ಸರ್ಕಾರದ ನಿರ್ಲಕ್ಷ್ಯದಿಂದಾಗಿ ಸಂತ್ರಸ್ತರಿಗೆ ಇನ್ನೂ `ಆಸರೆ~ ಯಾಗಿಲ್ಲ.<br /> <br /> ಮೈಸೂರಿನ ನಾಗರಿಕ ವೇದಿಕೆಯವರು ಇಲ್ಲಿ 477 ಮನೆಗಳನ್ನು ನಿರ್ಮಿಸಿದ್ದಾರೆ. ಪ್ರತಿ ಮನೆಗೆ 1.20 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಡಿಸೆಂಬರ್ 19ರಂದು ಈ ಮನೆಗಳನ್ನು ಮುಖ್ಯಮಂತ್ರಿಗಳು ಉದ್ಘಾಟಿಸಿದ್ದಾರೆ. ಎರಡು ತಿಂಗಳು ಗತಿಸಿದ್ದರೂ ನಿರಾಶ್ರಿತರು ಇಲ್ಲಿ ವಾಸವಾಗಿಲ್ಲ.<br /> <br /> `ಜನ ವಾಸಿಸಲು ಇಲ್ಲಿ ಅಗತ್ಯ ಮೂಲ ಸೌಲಭ್ಯಗಳೇ ಇಲ್ಲ. ಫಲಾನುಭವಿಗಳ ಪಟ್ಟಿಯೂ ದೋಷಪೂರಿತವಾಗಿದೆ. ದೋಷಪೂರಿತ ಪಟ್ಟಿ ಸರಿಪಡಿಸಿ ಅಗತ್ಯ ಸೌಲಭ್ಯ ಕಲ್ಪಿಸುವವರೆಗೂ ನವಗ್ರಾಮಕ್ಕೆ ತೆರಳದಿರಲು ಗ್ರಾಮಸ್ಥರು ನಿರ್ಧರಿಸಿದ್ದೇವೆ~ ಎಂಬುದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕಾಶಿನಾಥ ಕಾಖಂಡಕಿ ಹೇಳಿಕೆ.<br /> <br /> `ಇಲ್ಲಿ ಚರಂಡಿ ಕಾಮಗಾರಿ ಕಳಪೆಯಾಗಿದೆ. ಕಾಲಿಟ್ಟರೆ ಒಡೆದು ಪುಡಿ ಪುಡಿಯಾಗುತ್ತದೆ. ಕುಡಿಯುವ ನೀರಿಗಾಗಿ ತೋಡಿದ ಮೂರು ಕೊಳವೆ ಬಾವಿಗಳು ಕೈಕೊಟ್ಟಿವೆ. 8 ಕಿ.ಮೀ. ದೂರದ ನಿಡೋಣಿ ಗ್ರಾಮದಿಂದ ಪೈಪ್ಲೈನ್ ಜೋಡಣೆ ಮಾಡಲಾಗಿದೆ. ಆದರೆ, ನೀರು ಬರುತ್ತಿಲ್ಲ. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ~ ಎಂದು ಗ್ರಾಮಕ್ಕೆ ಭೇಟಿ ನೀಡಿದ್ದ ಪತ್ರಕರ್ತರಿಗೆ ವಿವರ ನೀಡಿದರು.<br /> <br /> `ನಿಜವಾದ ನಿರಾಶ್ರಿತರಿಗೆ ಮನೆ ಸಿಕ್ಕಿಲ್ಲ. ಮನೆ ಹಂಚಿಕೆ ಪ್ರಕ್ರಿಯೆಯಲ್ಲಿ ದೋಷವಿದೆ. ಪ್ರಥಮ ಹಂಚಿಕೆ ಪಟ್ಟಿ ಪ್ರಕಾರ ಮನೆಗಳು ಹಂಚಿಕೆಯಾಗಿಲ್ಲ. ಹೊಲ-ಮನೆ ಮಾರಿ ಬೇರೆ ಊರಲ್ಲಿ ವಾಸವಿದ್ದವರಿಗೂ ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಈ ಪಟ್ಟಿಯನ್ನು ರದ್ದುಪಡಿಸಿ ನಿಜ ಫಲಾನುಭವಿಗಳಿಗಷ್ಟೇ ಮನೆಗಳನ್ನು ನೀಡಬೇಕು~ ಎಂದು ಗ್ರಾಮಸ್ಥ ರಾಚನಗೌಡ ಪಾಟೀಲ ಆಗ್ರಹಿಸಿದರು.<br /> <br /> `ಕೂಲಿಯನ್ನು ಅವಲಂಬಿಸಿ ಬದುಕುತ್ತಿದ್ದೇವೆ. ನಮಗೆ ಹೊಲ-ಮನೆ ಇಲ್ಲ. ಆಸರೆ ಬಡಾವಣೆಯಲ್ಲಿಯೂ ಮನೆ ದೊರೆತಿಲ್ಲ. ಇನ್ನು ನಾವು ವಾಸಿಸುವುದಾದರೂ ಎಲ್ಲಿ~ ಎಂಬ ಪ್ರಶ್ನೆ ಶರಣಪ್ಪ ಶಿವಪ್ಪ ಹೊಸಟ್ಟಿ, ಶರಣಪ್ಪ ತುಳಜಪ್ಪ ಜತ್ತಿ, ಸುರೇಶ ಸಂಜೀವ ಶಿಡ್ಲೆ, ಸೈಯದ್ ಲಾಲ್ಸಾಬ್ ದಳವಾಯಿ ಪ್ರಶ್ನೆ.<br /> <br /> `ಟೆಕ್ ಮಹೇಂದ್ರ ಪ್ರತಿಷ್ಠಾನ ಹಾಗೂ ಸ್ವಾಮಿ ವಿವೇಕಾನಂದ ಯೂಥ್ ಮೂವ್ಮೆಂಟ್ ಸಂಸ್ಥೆಯ ಸಹಯೋಗದಲ್ಲಿ ಇದನ್ನು ಮಾದರಿ ಗ್ರಾಮವನ್ನಾಗಿ ಮಾಡುವ ನಿಟ್ಟಿನಲ್ಲಿ ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದೇವೆ~ ಎನ್ನುತ್ತಾರೆ ಸ್ವಾಮಿ ವಿವೇಕಾನಂದ ಯೂಥ್ ಮೂವ್ಮೆಂಟ್ನ ಉತ್ತರ ಕರ್ನಾಟಕ ಸಂಚಾಲಕ ನರಸಿಂಹ ರಾಯಚೂರು.<br /> <br /> `ಅರಣ್ಯ ಇಲಾಖೆಯ ಸಹಯೋಗದಲ್ಲಿ ನವ ಗ್ರಾಮದ ಪ್ರತಿ ರಸ್ತೆಯಲ್ಲಿಯೂ ಸಸಿ ನೆಟ್ಟು ಬೆಳೆಸುವುದು, ಪ್ರತಿಯೊಂದು ಮನೆಯ ಆವರಣದಲ್ಲಿ ಪುಟ್ಟ ಕೈತೋಟ ನಿರ್ಮಿಸಲು ಬಯಸಿದ್ದೇವೆ. ಮೂಲಸೌಲಭ್ಯದ ಕೊರತೆಯಿಂದ ನಿರಾಶ್ರಿತರು ಇಲ್ಲಿ ವಾಸಿಸಲು ಹಿಂದೇಟು ಹಾಕುತ್ತಿರುವುದು ಹಾಗೂ ನೀರಿನ ಅಭಾವದಿಂದ ಸಸಿಗಳನ್ನು ನೆಡಲು ಆಗುತ್ತಿಲ್ಲ~ ಎಂಬುದು ಅವರ ಅಸಹಾಯಕತೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>