<p><strong>ಹುಬ್ಬಳ್ಳಿ:</strong><strong> </strong>‘ಹಸಿದವರಿಗೆ ಅನ್ನ ಕೊಡು ವುದು ತಪ್ಪಲ್ಲ’ ಎಂದು ಹೇಳಿದ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಅನ್ನಭಾಗ್ಯ ಮತ್ತು ಕ್ಷೀರ ಭಾಗ್ಯ ಯೋಜನೆಗಳನ್ನು<strong> </strong>ಬಲವಾಗಿ ಸಮರ್ಥಿಸಿಕೊಂಡರು.<br /> <br /> ಕುಂದಗೋಳ ತಾಲ್ಲೂಕಿನ ಹೊಸಳ್ಳಿಯಲ್ಲಿ ಕೃಷಿ ಭಾಗ್ಯ ಹಾಗೂ ಕೃಷಿ ಯಂತ್ರಧಾರೆ ಯೋಜನೆಗಳಿಗೆ ಚಾಲನೆ ನೀಡಿದ ನಂತರ ಸಂಶಿಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> <br /> ‘ಸರ್ಕಾರ ಜಾರಿಗೆ ತಂದಿರುವ ‘ಅನ್ನಭಾಗ್ಯ’ದಂತಹ ಯೋಜನೆಗಳು ಜನರ ಉದ್ಧಾರಕ್ಕೆ ಅಲ್ಲ’ ಎಂದು ಸಾಹಿತಿ ದೇ. ಜವರೇಗೌಡ ಅವರು ಸೋಮವಾರ ದಾವಣಗೆರೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಕ್ಕೆ ಮುಖ್ಯಮಂತ್ರಿ ಈ ಪ್ರತಿಕ್ರಿಯೆ ನೀಡಿದರು.<br /> <br /> ‘ಅನ್ನಭಾಗ್ಯ ಯೋಜನೆ ಸರಿ ಎನ್ನುವವರು ಕೈ ಎತ್ತಿ’ ಎಂದು ಅವರು ಜನರಿಗೆ ಹೇಳಿದಾಗ, ಸಭಾಂಗಣದಲ್ಲಿದ್ದ ಸುಮಾರು ಮೂರು ಸಾವಿರ ಮಂದಿ ಕೈ ಎತ್ತಿದರು. ಇದನ್ನು ಗಮನಿಸಿದ ಅವರು ‘ಜನರು ಒಪ್ಪಿಕೊಂಡ ಯೋಜನೆಗಳನ್ನು ಟೀಕಿಸುವುದು ಸರಿಯಲ್ಲ. ಜನರನ್ನು ಸೋಮಾರಿಗಳನ್ನಾಗಿಸುವುದಕ್ಕಾಗಿ ಅಲ್ಲ; ಅವರಿಗೆ ಎರಡು ಹೊತ್ತು ಅನ್ನ ಕೊಡು ವುದಕ್ಕಾಗಿ ಈ ಯೋಜನೆ ಜಾರಿಗೆ ತರಲಾಗಿದೆ’ ಎಂದರು.<br /> <br /> ‘ಅನ್ನಭಾಗ್ಯ ಯೋಜನೆಯಿಂದ ರೈತರಿಗೆ ಅನುಕೂಲವೂ ಆಗಿದೆ. ಅವರು ಬೆಳೆದ ಅಕ್ಕಿ, ಜೋಳ, ರಾಗಿ ಇತ್ಯಾದಿಗಳನ್ನು ಸರ್ಕಾರ ಖರೀದಿಸುತ್ತಿದೆ. ಕ್ಷೀರಭಾಗ್ಯ ಯೋಜನೆಯಿಂದ ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚುತ್ತದೆ. ಶಾಲೆಗಳಲ್ಲಿ ಹಾಜರಾತಿ ಹೆಚ್ಚುತ್ತಿದೆ’ ಎಂದರು.<br /> <br /> ಟೀಕೆ ಸರಿಯಲ್ಲ (ವಿಜಯಪುರ ವರದಿ): ಇಲ್ಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೇಜಾವರ ಶ್ರೀಗಳು, ‘ಅನ್ನ ಭಾಗ್ಯ ಯೋಜನೆ ಕುರಿತು ಟೀಕೆ ಮಾಡುವುದು ಸರಿಯಲ್ಲ’ ಎಂದು ಯೋಜನೆಯನ್ನು ಸಮರ್ಥಿಸಿಕೊಂಡರು. ‘ಬಡವರಿಗೆ ಸಹಾಯ ಮಾಡುವುದು ತಪ್ಪಾ? ಉಚಿತ ವಾಗಿ ಅಕ್ಕಿ ಕೊಟ್ಟರೆ ಯಾರೂ ಸೋಮಾರಿ ಗಳಾಗುವುದಿಲ್ಲ. ಉಳಿದ ಅವಶ್ಯಕತೆಗಳಿಗೆ ಎಲ್ಲರೂ ದುಡಿಯುತ್ತಾರೆ. ಈ ಕುರಿತು ಟೀಕೆ ಸರಿಯಲ್ಲ’ ಎಂದರು.<br /> <br /> ಕೇಂದ್ರದ ಓಲೈಕೆಗೆ ಟೀಕೆ (ಮಂಡ್ಯ ವರದಿ): ಕೇಂದ್ರ ಸರ್ಕಾರದ ಓಲೈಕೆಗಾಗಿ ಕೆಲ ಸಾಹಿತಿಗಳು ‘ಅನ್ನಭಾಗ್ಯ’ ಯೋಜನೆಯನ್ನು ಟೀಕಿಸುತ್ತಿದ್ದಾರೆ ಎಂದು ಕವಿ ನಾಗತಿಹಳ್ಳಿ ರಮೇಶ್ ಇಲ್ಲಿ ಟೀಕಿಸಿದರು.<br /> <br /> ‘ಶೂದ್ರರ ಮನೆಯಲ್ಲಿ ವಾರಾನ್ನ ತಿಂದು ಬೆಳೆದವರು. ಈಗ ‘ಅನ್ನಭಾಗ್ಯ’ದ ಬಗ್ಗೆ ಟೀಕೆ ಮಾತನಾಡುತ್ತಿದ್ದಾರೆ. ಇದು ಸರಿಯಲ. ಬಡವರ ಹಸಿವಿನ ಬಗ್ಗೆ ಬರೆದಿರುವ ಕುಂ. ವೀರಭದ್ರಪ್ಪ ಅವರು, ಜ್ಞಾನಪೀಠ ಪ್ರಶಸ್ತಿಗಾಗಿ ‘ಅನ್ನಭಾಗ್ಯ’ ಯೋಜನೆ ಟೀಕಿಸುತ್ತಿದ್ದಾರೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong><strong> </strong>‘ಹಸಿದವರಿಗೆ ಅನ್ನ ಕೊಡು ವುದು ತಪ್ಪಲ್ಲ’ ಎಂದು ಹೇಳಿದ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಅನ್ನಭಾಗ್ಯ ಮತ್ತು ಕ್ಷೀರ ಭಾಗ್ಯ ಯೋಜನೆಗಳನ್ನು<strong> </strong>ಬಲವಾಗಿ ಸಮರ್ಥಿಸಿಕೊಂಡರು.<br /> <br /> ಕುಂದಗೋಳ ತಾಲ್ಲೂಕಿನ ಹೊಸಳ್ಳಿಯಲ್ಲಿ ಕೃಷಿ ಭಾಗ್ಯ ಹಾಗೂ ಕೃಷಿ ಯಂತ್ರಧಾರೆ ಯೋಜನೆಗಳಿಗೆ ಚಾಲನೆ ನೀಡಿದ ನಂತರ ಸಂಶಿಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> <br /> ‘ಸರ್ಕಾರ ಜಾರಿಗೆ ತಂದಿರುವ ‘ಅನ್ನಭಾಗ್ಯ’ದಂತಹ ಯೋಜನೆಗಳು ಜನರ ಉದ್ಧಾರಕ್ಕೆ ಅಲ್ಲ’ ಎಂದು ಸಾಹಿತಿ ದೇ. ಜವರೇಗೌಡ ಅವರು ಸೋಮವಾರ ದಾವಣಗೆರೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಕ್ಕೆ ಮುಖ್ಯಮಂತ್ರಿ ಈ ಪ್ರತಿಕ್ರಿಯೆ ನೀಡಿದರು.<br /> <br /> ‘ಅನ್ನಭಾಗ್ಯ ಯೋಜನೆ ಸರಿ ಎನ್ನುವವರು ಕೈ ಎತ್ತಿ’ ಎಂದು ಅವರು ಜನರಿಗೆ ಹೇಳಿದಾಗ, ಸಭಾಂಗಣದಲ್ಲಿದ್ದ ಸುಮಾರು ಮೂರು ಸಾವಿರ ಮಂದಿ ಕೈ ಎತ್ತಿದರು. ಇದನ್ನು ಗಮನಿಸಿದ ಅವರು ‘ಜನರು ಒಪ್ಪಿಕೊಂಡ ಯೋಜನೆಗಳನ್ನು ಟೀಕಿಸುವುದು ಸರಿಯಲ್ಲ. ಜನರನ್ನು ಸೋಮಾರಿಗಳನ್ನಾಗಿಸುವುದಕ್ಕಾಗಿ ಅಲ್ಲ; ಅವರಿಗೆ ಎರಡು ಹೊತ್ತು ಅನ್ನ ಕೊಡು ವುದಕ್ಕಾಗಿ ಈ ಯೋಜನೆ ಜಾರಿಗೆ ತರಲಾಗಿದೆ’ ಎಂದರು.<br /> <br /> ‘ಅನ್ನಭಾಗ್ಯ ಯೋಜನೆಯಿಂದ ರೈತರಿಗೆ ಅನುಕೂಲವೂ ಆಗಿದೆ. ಅವರು ಬೆಳೆದ ಅಕ್ಕಿ, ಜೋಳ, ರಾಗಿ ಇತ್ಯಾದಿಗಳನ್ನು ಸರ್ಕಾರ ಖರೀದಿಸುತ್ತಿದೆ. ಕ್ಷೀರಭಾಗ್ಯ ಯೋಜನೆಯಿಂದ ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚುತ್ತದೆ. ಶಾಲೆಗಳಲ್ಲಿ ಹಾಜರಾತಿ ಹೆಚ್ಚುತ್ತಿದೆ’ ಎಂದರು.<br /> <br /> ಟೀಕೆ ಸರಿಯಲ್ಲ (ವಿಜಯಪುರ ವರದಿ): ಇಲ್ಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೇಜಾವರ ಶ್ರೀಗಳು, ‘ಅನ್ನ ಭಾಗ್ಯ ಯೋಜನೆ ಕುರಿತು ಟೀಕೆ ಮಾಡುವುದು ಸರಿಯಲ್ಲ’ ಎಂದು ಯೋಜನೆಯನ್ನು ಸಮರ್ಥಿಸಿಕೊಂಡರು. ‘ಬಡವರಿಗೆ ಸಹಾಯ ಮಾಡುವುದು ತಪ್ಪಾ? ಉಚಿತ ವಾಗಿ ಅಕ್ಕಿ ಕೊಟ್ಟರೆ ಯಾರೂ ಸೋಮಾರಿ ಗಳಾಗುವುದಿಲ್ಲ. ಉಳಿದ ಅವಶ್ಯಕತೆಗಳಿಗೆ ಎಲ್ಲರೂ ದುಡಿಯುತ್ತಾರೆ. ಈ ಕುರಿತು ಟೀಕೆ ಸರಿಯಲ್ಲ’ ಎಂದರು.<br /> <br /> ಕೇಂದ್ರದ ಓಲೈಕೆಗೆ ಟೀಕೆ (ಮಂಡ್ಯ ವರದಿ): ಕೇಂದ್ರ ಸರ್ಕಾರದ ಓಲೈಕೆಗಾಗಿ ಕೆಲ ಸಾಹಿತಿಗಳು ‘ಅನ್ನಭಾಗ್ಯ’ ಯೋಜನೆಯನ್ನು ಟೀಕಿಸುತ್ತಿದ್ದಾರೆ ಎಂದು ಕವಿ ನಾಗತಿಹಳ್ಳಿ ರಮೇಶ್ ಇಲ್ಲಿ ಟೀಕಿಸಿದರು.<br /> <br /> ‘ಶೂದ್ರರ ಮನೆಯಲ್ಲಿ ವಾರಾನ್ನ ತಿಂದು ಬೆಳೆದವರು. ಈಗ ‘ಅನ್ನಭಾಗ್ಯ’ದ ಬಗ್ಗೆ ಟೀಕೆ ಮಾತನಾಡುತ್ತಿದ್ದಾರೆ. ಇದು ಸರಿಯಲ. ಬಡವರ ಹಸಿವಿನ ಬಗ್ಗೆ ಬರೆದಿರುವ ಕುಂ. ವೀರಭದ್ರಪ್ಪ ಅವರು, ಜ್ಞಾನಪೀಠ ಪ್ರಶಸ್ತಿಗಾಗಿ ‘ಅನ್ನಭಾಗ್ಯ’ ಯೋಜನೆ ಟೀಕಿಸುತ್ತಿದ್ದಾರೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>