<p><strong>ಬೆಂಗಳೂರು: </strong>ಪೊಲೀಸರು ನಟ ದರ್ಶನ್ ಅವರನ್ನು ಕಾರಿನಲ್ಲಿ ರಾತ್ರಿ 8.30ಕ್ಕೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆತಂದರು.`ದರ್ಶನ್ ಅವರು ದೈಹಿಕವಾಗಿ ಸಾಕಷ್ಟು ಬಳಲಿದ್ದರಿಂದ ಅವರನ್ನು ಕಾರಾಗೃಹದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. <br /> <br /> ವೈದ್ಯರು ಅವರಿಗೆ ಗ್ಲೋಕೋಸ್ ಹಾಕಿದ್ದಾರೆ. ಅವರನ್ನು ಶನಿವಾರ ಬೆಳಿಗ್ಗೆ ಇತರೆ ಕೈದಿಗಳ ಕೊಠಡಿಗೆ ಸ್ಥಳಾಂತರಿಸಲಾಗುತ್ತದೆ. ಅವರಿಗೆ ವಿಚಾರಣಾಧೀನ ಕೈದಿ ಸಂಖ್ಯೆ- 9000 ನೀಡಲಾಗಿದೆ~ ಎಂದು ಕಾರಾಗೃಹದ ಹಿರಿಯ ಅಧಿಕಾರಿಗಳು `ಪ್ರಜಾವಾಣಿ~ಗೆ ತಿಳಿಸಿದರು.<br /> <br /> <strong>ಲಘು ಲಾಠಿ ಪ್ರಹಾರ:</strong> ದರ್ಶನ್ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆತರುವ ವಿಷಯ ತಿಳಿದ ನೂರಾರು ಅಭಿಮಾನಿಗಳು ಕಾರಾಗೃಹದ ಬಳಿ ಜಮಾಯಿಸಿ ಪೊಲೀಸ್ ಸಿಬ್ಬಂದಿಯ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದರು.<br /> <br /> ಕಾರಾಗೃಹದ ಪ್ರವೇಶ ದ್ವಾರದ ಬಳಿ ಗುಂಪುಗೂಡಿದ್ದ ಅಭಿಮಾನಿಗಳು ದರ್ಶನ್ ಪರ ಘೋಷಣೆಗಳನ್ನು ಕೂಗಿ ಪೊಲೀಸರು ಕಾರಾಗೃಹದ ಒಳಗೆ ಪ್ರವೇಶಿಸದಂತೆ ಅಡ್ಡಿಪಡಿಸಿದರು. ಈ ಹಂತದಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಅಭಿಮಾನಿಗಳ ಗುಂಪನ್ನು ಚದುರಿಸಿದರು.<br /> <br /> <strong>ಮುಖಕ್ಕೆ ಕಚ್ಚಿ, ಸಿಗರೇಟ್ನಿಂದ ಸುಟ್ಟ ನಟ<br /> </strong>ಪತ್ನಿಯನ್ನು ಕಾರಿನಲ್ಲಿ ಬಲವಂತವಾಗಿ ಎಳೆದೊಯ್ದ ದರ್ಶನ್ ಅವರು ಸತತ ಎರಡು ಗಂಟೆಗಳ ಕಾಲ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಅವರು ಹಲ್ಲೆ ನಡೆಸುತ್ತಿದ್ದ ವೇಳೆ ಕಾರು ನಗರದ ಹೊರವಲಯದಲ್ಲಿ ಚಲಿಸುತ್ತಲೇ ಇತ್ತು. ಇನ್ನೋವಾ ಕಾರಿನ ಸೀಟುಗಳನ್ನು ಆಲ್ಟರ್ ಮಾಡಿಕೊಳ್ಳಲಾಗಿತ್ತು. <br /> <br /> ಆದ್ದರಿಂದ ಚಾಲಕನಿಗೆ ಹಿಂದೆ ಏನು ನಡೆಯುತ್ತಿದೆ ಎಂದು ಗೊತ್ತಾಗಿಲ್ಲ. ಗಾಜುಗಳನ್ನು ಸಂಪೂರ್ಣವಾಗಿ ಬಂದ್ ಮಾಡಿಕೊಂಡಿದ್ದರಿಂದ ವಿಜಯಲಕ್ಷ್ಮಿ ಅವರ ಚೀರಾಟ ಯಾರಿಗೂ ಕೇಳಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.<br /> <br /> `ಕಾರಿನಲ್ಲಿ ಕೂರಿಸಿಕೊಂಡ ತಕ್ಷಣ ಕಿವಿ ಓಲೆಯನ್ನು ದರ್ಶನ್ ಎಳೆದರು. ಆದ್ದರಿಂದ ನನ್ನ ಕಿವಿ ಕಿತ್ತುಹೋಯಿತು. ಮುಖದ ಮೇಲೆ ಕಚ್ಚಿದ ಅವರು, ಸಿಗರೇಟ್ನಿಂದ ಕೈ-ಕಾಲುಗಳ ಮೇಲೆ ಸುಟ್ಟರು. ನನ್ನದೇ ಹೀಲ್ಡ್ ಚಪ್ಪಲಿ ಕಿತ್ತುಕೊಂಡು ತಲೆ, ಮೈ ಮೇಲೆ ಮನಬಂದಂತೆ ಹೊಡೆದರು.<br /> <br /> ರಿವಾಲ್ವರ್ ತೋರಿಸಿ ಕೊಲೆ ಮಾಡುವುದಾಗಿ ಬೆದರಿಸಿ, ಸತತವಾಗಿ ಹಲ್ಲೆ ನಡೆಸಿದರು. ನನ್ನ ಹೆಸರಿನಲ್ಲಿರುವ ಎಲ್ಲ ಆಸ್ತಿಯನ್ನು ಅವರ ಹೆಸರಿಗೆ ಬರೆದುಕೊಡುವಂತೆ ಬೆದರಿಕೆ ಹಾಕಿದರು~ ಎಂದು ವಿಜಯಲಕ್ಷ್ಮಿ ದೂರಿನಲ್ಲಿ ತಿಳಿಸಿದ್ದಾರೆ.<br /> <br /> <strong>10 ವರ್ಷ ಜೈಲು?<br /> </strong> ದರ್ಶನ್ ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 (ಕೊಲೆ ಯತ್ನ), 498ಎ (ಹಿಂಸೆ ನೀಡುವುದು), 323 (ಹಲ್ಲೆ ನಡೆಸಿ ಗಾಯಗೊಳಿಸುವುದು), 506ಬಿ (ಕ್ರಿಮಿನಲ್ ಉದ್ದೇಶದ ಕೃತ್ಯ) ಮತ್ತು ಶಸ್ತ್ರಾಸ್ತ್ರ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಈ ಎಲ್ಲ ಆರೋಪಗಳು ಸಾಬೀತಾದರೆ ಕನಿಷ್ಠ ಹತ್ತು ವರ್ಷ ಕಾಲ ಜೈಲು ಶಿಕ್ಷೆಯಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಪೊಲೀಸರು ನಟ ದರ್ಶನ್ ಅವರನ್ನು ಕಾರಿನಲ್ಲಿ ರಾತ್ರಿ 8.30ಕ್ಕೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆತಂದರು.`ದರ್ಶನ್ ಅವರು ದೈಹಿಕವಾಗಿ ಸಾಕಷ್ಟು ಬಳಲಿದ್ದರಿಂದ ಅವರನ್ನು ಕಾರಾಗೃಹದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. <br /> <br /> ವೈದ್ಯರು ಅವರಿಗೆ ಗ್ಲೋಕೋಸ್ ಹಾಕಿದ್ದಾರೆ. ಅವರನ್ನು ಶನಿವಾರ ಬೆಳಿಗ್ಗೆ ಇತರೆ ಕೈದಿಗಳ ಕೊಠಡಿಗೆ ಸ್ಥಳಾಂತರಿಸಲಾಗುತ್ತದೆ. ಅವರಿಗೆ ವಿಚಾರಣಾಧೀನ ಕೈದಿ ಸಂಖ್ಯೆ- 9000 ನೀಡಲಾಗಿದೆ~ ಎಂದು ಕಾರಾಗೃಹದ ಹಿರಿಯ ಅಧಿಕಾರಿಗಳು `ಪ್ರಜಾವಾಣಿ~ಗೆ ತಿಳಿಸಿದರು.<br /> <br /> <strong>ಲಘು ಲಾಠಿ ಪ್ರಹಾರ:</strong> ದರ್ಶನ್ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆತರುವ ವಿಷಯ ತಿಳಿದ ನೂರಾರು ಅಭಿಮಾನಿಗಳು ಕಾರಾಗೃಹದ ಬಳಿ ಜಮಾಯಿಸಿ ಪೊಲೀಸ್ ಸಿಬ್ಬಂದಿಯ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದರು.<br /> <br /> ಕಾರಾಗೃಹದ ಪ್ರವೇಶ ದ್ವಾರದ ಬಳಿ ಗುಂಪುಗೂಡಿದ್ದ ಅಭಿಮಾನಿಗಳು ದರ್ಶನ್ ಪರ ಘೋಷಣೆಗಳನ್ನು ಕೂಗಿ ಪೊಲೀಸರು ಕಾರಾಗೃಹದ ಒಳಗೆ ಪ್ರವೇಶಿಸದಂತೆ ಅಡ್ಡಿಪಡಿಸಿದರು. ಈ ಹಂತದಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಅಭಿಮಾನಿಗಳ ಗುಂಪನ್ನು ಚದುರಿಸಿದರು.<br /> <br /> <strong>ಮುಖಕ್ಕೆ ಕಚ್ಚಿ, ಸಿಗರೇಟ್ನಿಂದ ಸುಟ್ಟ ನಟ<br /> </strong>ಪತ್ನಿಯನ್ನು ಕಾರಿನಲ್ಲಿ ಬಲವಂತವಾಗಿ ಎಳೆದೊಯ್ದ ದರ್ಶನ್ ಅವರು ಸತತ ಎರಡು ಗಂಟೆಗಳ ಕಾಲ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಅವರು ಹಲ್ಲೆ ನಡೆಸುತ್ತಿದ್ದ ವೇಳೆ ಕಾರು ನಗರದ ಹೊರವಲಯದಲ್ಲಿ ಚಲಿಸುತ್ತಲೇ ಇತ್ತು. ಇನ್ನೋವಾ ಕಾರಿನ ಸೀಟುಗಳನ್ನು ಆಲ್ಟರ್ ಮಾಡಿಕೊಳ್ಳಲಾಗಿತ್ತು. <br /> <br /> ಆದ್ದರಿಂದ ಚಾಲಕನಿಗೆ ಹಿಂದೆ ಏನು ನಡೆಯುತ್ತಿದೆ ಎಂದು ಗೊತ್ತಾಗಿಲ್ಲ. ಗಾಜುಗಳನ್ನು ಸಂಪೂರ್ಣವಾಗಿ ಬಂದ್ ಮಾಡಿಕೊಂಡಿದ್ದರಿಂದ ವಿಜಯಲಕ್ಷ್ಮಿ ಅವರ ಚೀರಾಟ ಯಾರಿಗೂ ಕೇಳಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.<br /> <br /> `ಕಾರಿನಲ್ಲಿ ಕೂರಿಸಿಕೊಂಡ ತಕ್ಷಣ ಕಿವಿ ಓಲೆಯನ್ನು ದರ್ಶನ್ ಎಳೆದರು. ಆದ್ದರಿಂದ ನನ್ನ ಕಿವಿ ಕಿತ್ತುಹೋಯಿತು. ಮುಖದ ಮೇಲೆ ಕಚ್ಚಿದ ಅವರು, ಸಿಗರೇಟ್ನಿಂದ ಕೈ-ಕಾಲುಗಳ ಮೇಲೆ ಸುಟ್ಟರು. ನನ್ನದೇ ಹೀಲ್ಡ್ ಚಪ್ಪಲಿ ಕಿತ್ತುಕೊಂಡು ತಲೆ, ಮೈ ಮೇಲೆ ಮನಬಂದಂತೆ ಹೊಡೆದರು.<br /> <br /> ರಿವಾಲ್ವರ್ ತೋರಿಸಿ ಕೊಲೆ ಮಾಡುವುದಾಗಿ ಬೆದರಿಸಿ, ಸತತವಾಗಿ ಹಲ್ಲೆ ನಡೆಸಿದರು. ನನ್ನ ಹೆಸರಿನಲ್ಲಿರುವ ಎಲ್ಲ ಆಸ್ತಿಯನ್ನು ಅವರ ಹೆಸರಿಗೆ ಬರೆದುಕೊಡುವಂತೆ ಬೆದರಿಕೆ ಹಾಕಿದರು~ ಎಂದು ವಿಜಯಲಕ್ಷ್ಮಿ ದೂರಿನಲ್ಲಿ ತಿಳಿಸಿದ್ದಾರೆ.<br /> <br /> <strong>10 ವರ್ಷ ಜೈಲು?<br /> </strong> ದರ್ಶನ್ ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 (ಕೊಲೆ ಯತ್ನ), 498ಎ (ಹಿಂಸೆ ನೀಡುವುದು), 323 (ಹಲ್ಲೆ ನಡೆಸಿ ಗಾಯಗೊಳಿಸುವುದು), 506ಬಿ (ಕ್ರಿಮಿನಲ್ ಉದ್ದೇಶದ ಕೃತ್ಯ) ಮತ್ತು ಶಸ್ತ್ರಾಸ್ತ್ರ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಈ ಎಲ್ಲ ಆರೋಪಗಳು ಸಾಬೀತಾದರೆ ಕನಿಷ್ಠ ಹತ್ತು ವರ್ಷ ಕಾಲ ಜೈಲು ಶಿಕ್ಷೆಯಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>