`ಉದ್ಯಮಿಗಳಾದ ನೀವು ಪ್ರಾಮಾ ಣಿಕರು, ನಿಮ್ಮ ವ್ಯವಹಾರ ಪಾರ ದರ್ಶಕವಾಗಿದೆ ಎನ್ನುವ ಮನವರಿಕೆ ಅಧಿಕಾರಿಗಳಿಗೆ ಆಗಬೇಕು. ಆಗ ಸಹಜವಾಗಿಯೇ ಅವರಿಗೂ ಭಯ ಹುಟ್ಟಿ ನಿಮ್ಮ ಕಡತಕ್ಕೆ ಮುಕ್ತಿ ದೊರೆಯುತ್ತದೆ. ಒಂದು ಮಾತನ್ನು ನೆನಪಿಡಿ. ಎಂತಹ ಭ್ರಷ್ಟ ಅಧಿಕಾರಿಯಾದರೂ, ಕೆಲಸ ಮುಗಿಸಿ ಮನೆಗೆ ಹೋದ ಮೇಲೆ, ತನ್ನ ಅಪ್ಪ ಲಂಚಕೋರ ಎಂದು ಮಕ್ಕಳಿಂದ ಬಹಿರಂಗವಾಗಿ ಕರೆಸಿಕೊಳ್ಳಲು ಬಯಸುವುದಿಲ್ಲ~ ಎಂಬ ಅರ್ಥಪೂರ್ಣ ಮಾತನ್ನು ನಾರಾಯಣಮೂರ್ತಿ ಉದ್ಯಮಿಗಳಿಗೆ ಹೇಳಿದರು. `ಉದ್ಯಮಿಗಳು ಸರ್ಕಾರದ ನಿಯಮಾನುಸಾರ ಎಲ್ಲ ಅಗತ್ಯ ತೆರಿಗೆಗಳನ್ನು ಕಟ್ಟಬೇಕು. ಕರ ವಂಚನೆ ಮಾಡಬಾರದು. ಇನ್ಫೋಸಿಸ್ ಸ್ಥಾಪನೆಯಾದ ದಿನದಿಂದ ಇದುವರೆಗೆ ನಾವು ಯಾವುದೇ ಅಧಿಕಾರಿಗೆ ಒಂದು ಪೈಸೆ ಲಂಚವನ್ನೂ ನೀಡಿಲ್ಲ~ ಎಂದು ಹೆಮ್ಮೆಯಿಂದ ನುಡಿದರು.