<p><strong>ಮ್ಯೂನಿಕ್:</strong> ಇಲ್ಲಿನ ಸಿರಿಗನ್ನಡ ಕೂಟವು ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಿತು. </p><p>ಆಗಸ್ಟ್ 31ರ ಭಾನುವಾರ ಇಲ್ಲಿನ ಎವೆನ್ವೆಲ್ಥಾಸ್ ಸಭಾಂಗಣದಲ್ಲಿ ಗಣೇಶೋತ್ಸವ ಕಾರ್ಯಕ್ರಮ ನಡೆಯಿತು.</p><p>ಆರ್ಚಕರಾದ ಸೀತರಾಮ ಶರ್ಮ ಅವರು ಗಣಪತಿಗೆ ಪೂಜೆ ಕಾರ್ಯ ನೆರವೇರಿಸಿದರು. ಸಾಮೂಹಿಕ ಪೂಜೆ, ಮಂಗಳಾರತಿ ಸೇರಿದಂತೆ ನೆರೆದಿದ್ದ ಭಕ್ತರು ಮಂತ್ರ ಪಠಣ ಮಾಡುವ ಮೂಲಕ ಭಾವಪರವಶರಾದರು.</p>. <p>ಇದೇ ವೇಳೆ ಲೋಹಿತ್ ಬ್ರಹ್ಮರವರ ಬಾಸುರಿ ಕಚೇರಿಯು ನೆರದಿದ್ದ ಭಕ್ತರ ಮನಸಿಗೆ ಮಧುರತೆಯನ್ನು ತುಂಬಿತು.</p><p>ಮಕ್ಕಳು ಶ್ಲೋಕಗಳನ್ನು ಪಠಿಸಿದರು. ಅರ್ಪಿತಾ, ಸ್ವಸ್ತಿ ಅವರು ಸಂಗೀತ ಸುಧೆ ಹರಿಸಿದರು. ಸುಕನ್ಯಾ ಲಕ್ಷ್ಮಿಕಾಂತ್ ಶ್ಲೋಕ ಪಠಣ ಮಾಡಿದರು. ಮಕ್ಕಳು ಭರತನಾಟ್ಯ ಪ್ರದರ್ಶನ ನೀಡಿದರು. ಹಾಗೂ ಗಣೇಶನ ವಿಷಯಾಧಾರಿತ ರಸಪ್ರಶ್ನೆ ಚಟುವಟಿಕೆ, ಪಜ಼ಲ್ ಆಟಗಳನ್ನು ಆಯೋಜನೆ ಮಾಡಲಾಗಿತ್ತು. </p><p>ಭಜನೆಗಳ ಝೇಂಕಾರದಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮಾಡುವ ಮೂಲಕ ಕಾರ್ಯಕ್ರಮವು ಸಮಾರೋಪಗೊಂಡಿತು.</p>. <p>ಈ ಗಣೇಶೋತ್ಸವವು ಸಾಂಪ್ರದಾಯಿಕ ಪೂಜೆ, ರುಚಿಕರ ಊಟ, ನಗು, ನಾದ, ಸಂಸ್ಕೃತಿ, ಭಕ್ತಿ ಮತ್ತು ಬಾಂಧವ್ಯದೊಂದಿಗೆ ನೆರವೇರಿತು. ಈ ಉತ್ಸವ ನಿತ್ಯ ನೆನಪಿನಲ್ಲಿ ಉಳಿಯುವ ಹಬ್ಬವಾಯಿತು ಎಂದು ಸಿರಿಗನ್ನಡ ಕೂಟ ಪ್ರಕಟಣೆಯಲ್ಲಿ ತಿಳಿಸಿದೆ.</p><p>ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಎಲ್ಲಾ ಸ್ವಯಂ ಸೇವಕರಿಗೆ ಹಾಗೂ ಭಾಗವಹಿಸಿದ ಎಲ್ಲಾ ಸಹೃದಯರಿಗೆ ಮ್ಯೂನಿಕ್ನ ಸಿರಿಗನ್ನಡಕೂಟ ಧನ್ಯವಾದಗಳನ್ನು ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮ್ಯೂನಿಕ್:</strong> ಇಲ್ಲಿನ ಸಿರಿಗನ್ನಡ ಕೂಟವು ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಿತು. </p><p>ಆಗಸ್ಟ್ 31ರ ಭಾನುವಾರ ಇಲ್ಲಿನ ಎವೆನ್ವೆಲ್ಥಾಸ್ ಸಭಾಂಗಣದಲ್ಲಿ ಗಣೇಶೋತ್ಸವ ಕಾರ್ಯಕ್ರಮ ನಡೆಯಿತು.</p><p>ಆರ್ಚಕರಾದ ಸೀತರಾಮ ಶರ್ಮ ಅವರು ಗಣಪತಿಗೆ ಪೂಜೆ ಕಾರ್ಯ ನೆರವೇರಿಸಿದರು. ಸಾಮೂಹಿಕ ಪೂಜೆ, ಮಂಗಳಾರತಿ ಸೇರಿದಂತೆ ನೆರೆದಿದ್ದ ಭಕ್ತರು ಮಂತ್ರ ಪಠಣ ಮಾಡುವ ಮೂಲಕ ಭಾವಪರವಶರಾದರು.</p>. <p>ಇದೇ ವೇಳೆ ಲೋಹಿತ್ ಬ್ರಹ್ಮರವರ ಬಾಸುರಿ ಕಚೇರಿಯು ನೆರದಿದ್ದ ಭಕ್ತರ ಮನಸಿಗೆ ಮಧುರತೆಯನ್ನು ತುಂಬಿತು.</p><p>ಮಕ್ಕಳು ಶ್ಲೋಕಗಳನ್ನು ಪಠಿಸಿದರು. ಅರ್ಪಿತಾ, ಸ್ವಸ್ತಿ ಅವರು ಸಂಗೀತ ಸುಧೆ ಹರಿಸಿದರು. ಸುಕನ್ಯಾ ಲಕ್ಷ್ಮಿಕಾಂತ್ ಶ್ಲೋಕ ಪಠಣ ಮಾಡಿದರು. ಮಕ್ಕಳು ಭರತನಾಟ್ಯ ಪ್ರದರ್ಶನ ನೀಡಿದರು. ಹಾಗೂ ಗಣೇಶನ ವಿಷಯಾಧಾರಿತ ರಸಪ್ರಶ್ನೆ ಚಟುವಟಿಕೆ, ಪಜ಼ಲ್ ಆಟಗಳನ್ನು ಆಯೋಜನೆ ಮಾಡಲಾಗಿತ್ತು. </p><p>ಭಜನೆಗಳ ಝೇಂಕಾರದಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮಾಡುವ ಮೂಲಕ ಕಾರ್ಯಕ್ರಮವು ಸಮಾರೋಪಗೊಂಡಿತು.</p>. <p>ಈ ಗಣೇಶೋತ್ಸವವು ಸಾಂಪ್ರದಾಯಿಕ ಪೂಜೆ, ರುಚಿಕರ ಊಟ, ನಗು, ನಾದ, ಸಂಸ್ಕೃತಿ, ಭಕ್ತಿ ಮತ್ತು ಬಾಂಧವ್ಯದೊಂದಿಗೆ ನೆರವೇರಿತು. ಈ ಉತ್ಸವ ನಿತ್ಯ ನೆನಪಿನಲ್ಲಿ ಉಳಿಯುವ ಹಬ್ಬವಾಯಿತು ಎಂದು ಸಿರಿಗನ್ನಡ ಕೂಟ ಪ್ರಕಟಣೆಯಲ್ಲಿ ತಿಳಿಸಿದೆ.</p><p>ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಎಲ್ಲಾ ಸ್ವಯಂ ಸೇವಕರಿಗೆ ಹಾಗೂ ಭಾಗವಹಿಸಿದ ಎಲ್ಲಾ ಸಹೃದಯರಿಗೆ ಮ್ಯೂನಿಕ್ನ ಸಿರಿಗನ್ನಡಕೂಟ ಧನ್ಯವಾದಗಳನ್ನು ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>