<p>ಶಾಲಾ ಚಟುವಟಿಕೆ ಪರಿಶೀಲಿಸಲು ಶಿಕ್ಷಣಾಧಿಕಾರಿ ಬಂದಿದ್ದರು.</p><p>‘ಪ್ರೇಯರ್ ಹಾಲ್ನಲ್ಲಿ ವಿದ್ಯಾರ್ಥಿಗಳ ‘ನ್ಯೂಸ್ ಪೇಪರ್ ರೀಡಿಂಗ್’ ಚಟುವಟಿಕೆಯನ್ನು ಈಗ ನಿಲ್ಲಿಸಿದ್ದೀರಂತೆ ಯಾಕೆ?’ ಗರಂ ಆಗಿ ಕೇಳಿದರು.</p><p>‘ಸಾರ್, ಪೇಪರ್ ಹೆಡ್ಲೈನ್ ಓದಿಸುವುದು ನಮಗೆ ಹೆಡ್ಡೇಕ್ ಆಗಿದೆ’ ಎಂದರು ಹೆಡ್ ಮೇಷ್ಟ್ರು.</p><p>‘ಅದೇ ಯಾಕೇಂತ? ನ್ಯೂಸ್ ಪೇಪರ್ ಓದಿದರೆ ಮಕ್ಕಳಲ್ಲಿ ಲೋಕಜ್ಞಾನ ಬೆಳೆಯುತ್ತೆ ಕಣ್ರೀ’.</p><p>‘ಬಂಡೆಗೆ ಟಗರು ಡಿಚ್ಚಿ, ರಾಜಾ ಹುಲಿ ಅಖಾಡಕ್ಕೆ’ ಎನ್ನುವ ಹೆಡ್ಲೈನ್ಗಳ ಬಗ್ಗೆ ಮಕ್ಕಳು ಕೇಳಿದರೆ ಏನು ವಿವರಣೆ ಕೊಡೋದು ಸಾರ್?’ ವಿಜ್ಞಾನ ಮೇಷ್ಟ್ರು ಕೇಳಿದರು.</p><p>‘60 ಪರ್ಸೆಂಟ್ ಸರ್ಕಾರ: ವಿಪಕ್ಷ ಆರೋಪ’ ಎಂಬ ಹೆಡ್ಲೈನ್ ಓದಿದ ಮಕ್ಕಳು, ‘ಇನ್ನೂ ಹಾರ್ಡ್ ವರ್ಕ್ ಮಾಡಿ ಪರ್ಸೆಂಟೇಜ್ ಹೆಚ್ಚಿಸಿಕೊಂಡರೆ ಸರ್ಕಾರ<br>ಡಿಸ್ಟಿಂಕ್ಷನ್ನಲ್ಲಿ ಪಾಸಾಗಬಹುದು ಅಲ್ವಾ ಸಾರ್?’<br>ಎಂದು ಕೇಳಿದರೆ ಏನು ಹೇಳೋದು?’ ಗಣಿತ ಮೇಷ್ಟ್ರಿಗೆ ಕಳವಳ.</p><p>‘ವಿದ್ಯಾರ್ಥಿ ನೇಣಿಗೆ ಶರಣು, ಮೊಬೈಲ್ ಕೊಡಲಿಲ್ಲವೆಂದು ಮನೆ ಬಿಟ್ಟುಹೋದ ಬಾಲಕ’ ಈ ರೀತಿ ಹೆಡ್ಲೈನ್ಗಳನ್ನು ಮಕ್ಕಳಿಂದ ಓದಿಸಬೇಕೆ ಸಾರ್?’ ಸಮಾಜ ಶಿಕ್ಷಕರು ಕೇಳಿದರು.</p><p>‘ಸಮಾಜದಲ್ಲಿ ನಡೆಯುವಂಥ ಪ್ರಕರಣಗಳನ್ನೇ<br>ಪತ್ರಿಕೆಗಳು ವರದಿ ಮಾಡುತ್ತವೆ ಕಣ್ರೀ’ ಅಂದ್ರು ಶಿಕ್ಷಣಾಧಿಕಾರಿ.</p><p>‘ಸಾರ್, ‘ನಾಟಿ ಕೋಳಿ ಟಿಫನ್ ತಿಂದ ಸಿಎಂ–ಡಿಸಿಎಂ’ ಎಂಬ ನ್ಯೂಸ್ ಓದಿದ ಮೇಲೆ ಮಕ್ಕಳು ಸ್ಕೂಲ್ನಲ್ಲಿ ಮೊಟ್ಟೆ ತಿನ್ನೋದಿಲ್ಲ ಎನ್ನುತ್ತಿವೆ’ ಹೆಡ್ ಮೇಷ್ಟ್ರು ವಿಚಾರ ಹೇಳಿದರು.</p><p>‘ಯಾಕಂತೆ?’</p><p>‘ಮೊಟ್ಟೆ ಬೇಡ, ಬಿಸಿಯೂಟಕ್ಕೆ ನಾಟಿ ಕೋಳಿ ಸಾಂಬಾರ್ ಬೇಕೆಂದು ಕೇಳುತ್ತಿದ್ದಾರೆ!’</p><p>‘ಕೋಳಿ ಕೇಳಿ ಮಸಾಲೆ ಅರೆಯಬಾರದು, ಮಕ್ಕಳನ್ನು ಕೇಳಿ ಸಾಂಬಾರ್ ಮಾಡಬಾರದು ಕಣ್ರೀ...’ ಎಂದು ಸಣ್ಣದಾಗಿ ರೇಗಿ ಶಿಕ್ಷಣಾಧಿಕಾರಿ ಹೊರಟರು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಾಲಾ ಚಟುವಟಿಕೆ ಪರಿಶೀಲಿಸಲು ಶಿಕ್ಷಣಾಧಿಕಾರಿ ಬಂದಿದ್ದರು.</p><p>‘ಪ್ರೇಯರ್ ಹಾಲ್ನಲ್ಲಿ ವಿದ್ಯಾರ್ಥಿಗಳ ‘ನ್ಯೂಸ್ ಪೇಪರ್ ರೀಡಿಂಗ್’ ಚಟುವಟಿಕೆಯನ್ನು ಈಗ ನಿಲ್ಲಿಸಿದ್ದೀರಂತೆ ಯಾಕೆ?’ ಗರಂ ಆಗಿ ಕೇಳಿದರು.</p><p>‘ಸಾರ್, ಪೇಪರ್ ಹೆಡ್ಲೈನ್ ಓದಿಸುವುದು ನಮಗೆ ಹೆಡ್ಡೇಕ್ ಆಗಿದೆ’ ಎಂದರು ಹೆಡ್ ಮೇಷ್ಟ್ರು.</p><p>‘ಅದೇ ಯಾಕೇಂತ? ನ್ಯೂಸ್ ಪೇಪರ್ ಓದಿದರೆ ಮಕ್ಕಳಲ್ಲಿ ಲೋಕಜ್ಞಾನ ಬೆಳೆಯುತ್ತೆ ಕಣ್ರೀ’.</p><p>‘ಬಂಡೆಗೆ ಟಗರು ಡಿಚ್ಚಿ, ರಾಜಾ ಹುಲಿ ಅಖಾಡಕ್ಕೆ’ ಎನ್ನುವ ಹೆಡ್ಲೈನ್ಗಳ ಬಗ್ಗೆ ಮಕ್ಕಳು ಕೇಳಿದರೆ ಏನು ವಿವರಣೆ ಕೊಡೋದು ಸಾರ್?’ ವಿಜ್ಞಾನ ಮೇಷ್ಟ್ರು ಕೇಳಿದರು.</p><p>‘60 ಪರ್ಸೆಂಟ್ ಸರ್ಕಾರ: ವಿಪಕ್ಷ ಆರೋಪ’ ಎಂಬ ಹೆಡ್ಲೈನ್ ಓದಿದ ಮಕ್ಕಳು, ‘ಇನ್ನೂ ಹಾರ್ಡ್ ವರ್ಕ್ ಮಾಡಿ ಪರ್ಸೆಂಟೇಜ್ ಹೆಚ್ಚಿಸಿಕೊಂಡರೆ ಸರ್ಕಾರ<br>ಡಿಸ್ಟಿಂಕ್ಷನ್ನಲ್ಲಿ ಪಾಸಾಗಬಹುದು ಅಲ್ವಾ ಸಾರ್?’<br>ಎಂದು ಕೇಳಿದರೆ ಏನು ಹೇಳೋದು?’ ಗಣಿತ ಮೇಷ್ಟ್ರಿಗೆ ಕಳವಳ.</p><p>‘ವಿದ್ಯಾರ್ಥಿ ನೇಣಿಗೆ ಶರಣು, ಮೊಬೈಲ್ ಕೊಡಲಿಲ್ಲವೆಂದು ಮನೆ ಬಿಟ್ಟುಹೋದ ಬಾಲಕ’ ಈ ರೀತಿ ಹೆಡ್ಲೈನ್ಗಳನ್ನು ಮಕ್ಕಳಿಂದ ಓದಿಸಬೇಕೆ ಸಾರ್?’ ಸಮಾಜ ಶಿಕ್ಷಕರು ಕೇಳಿದರು.</p><p>‘ಸಮಾಜದಲ್ಲಿ ನಡೆಯುವಂಥ ಪ್ರಕರಣಗಳನ್ನೇ<br>ಪತ್ರಿಕೆಗಳು ವರದಿ ಮಾಡುತ್ತವೆ ಕಣ್ರೀ’ ಅಂದ್ರು ಶಿಕ್ಷಣಾಧಿಕಾರಿ.</p><p>‘ಸಾರ್, ‘ನಾಟಿ ಕೋಳಿ ಟಿಫನ್ ತಿಂದ ಸಿಎಂ–ಡಿಸಿಎಂ’ ಎಂಬ ನ್ಯೂಸ್ ಓದಿದ ಮೇಲೆ ಮಕ್ಕಳು ಸ್ಕೂಲ್ನಲ್ಲಿ ಮೊಟ್ಟೆ ತಿನ್ನೋದಿಲ್ಲ ಎನ್ನುತ್ತಿವೆ’ ಹೆಡ್ ಮೇಷ್ಟ್ರು ವಿಚಾರ ಹೇಳಿದರು.</p><p>‘ಯಾಕಂತೆ?’</p><p>‘ಮೊಟ್ಟೆ ಬೇಡ, ಬಿಸಿಯೂಟಕ್ಕೆ ನಾಟಿ ಕೋಳಿ ಸಾಂಬಾರ್ ಬೇಕೆಂದು ಕೇಳುತ್ತಿದ್ದಾರೆ!’</p><p>‘ಕೋಳಿ ಕೇಳಿ ಮಸಾಲೆ ಅರೆಯಬಾರದು, ಮಕ್ಕಳನ್ನು ಕೇಳಿ ಸಾಂಬಾರ್ ಮಾಡಬಾರದು ಕಣ್ರೀ...’ ಎಂದು ಸಣ್ಣದಾಗಿ ರೇಗಿ ಶಿಕ್ಷಣಾಧಿಕಾರಿ ಹೊರಟರು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>