<p><strong>ಅಲ್ಜೀರಿಯಾ</strong>: ಕಾಳ್ಗಿಚ್ಚು ಆರಂಭವಾಗಲು ಕಾರಣಕರ್ತ ಎಂಬ ಶಂಕೆಯಡಿ ಕಲಾವಿದರೊಬ್ಬರನ್ನು ಹತ್ಯೆ ಮಾಡಿದ್ದ ಪ್ರಕರಣದಲ್ಲಿ ಒಟ್ಟು 49 ಜನರಿಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸಿಅಲ್ಜೀರಿಯಾದ ಕೋರ್ಟ್ ಗುರುವಾರ ಆದೇಶಿಸಿದೆ.</p>.<p>ಗುಂಪು ಹಲ್ಲೆಯಿಂದ ಮೃತಪಟ್ಟಿದ್ದ ವ್ಯಕ್ತಿಕಾಳ್ಗಿಚ್ಚು ನಂದಿಸುವ ಕಾರ್ಯಕ್ಕೆ ನೆರವಾಗಲು ಧಾವಿಸಿದ್ದರು ಎಂದು ಅವರ ಪರ ವಕೀಲರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಆಗಸ್ಟ್ 2021ರಲ್ಲಿ ಕಬೈಲಿ ಪ್ರಾಂತ್ಯದಲ್ಲಿಕಾಳ್ಗಿಚ್ಚು ಕಾಣಿಸಿಕೊಂಡಿದ್ದ ಸಂದರ್ಭದಲ್ಲಿ ಕೃತ್ಯ ನಡೆದಿತ್ತು.</p>.<p>ಬೆರ್ಬರ್ ವಲಯದ ಬೆಟ್ಟ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಬೆಂಕಿ ನಂದಿಸಲು ಧಾವಿಸಿದ್ದ ಯೋಧರು ಒಳಗೊಂಡಂತೆ 90 ಜನರು ಮೃತಪಟ್ಟಿದ್ದರು. ಗುಂಪಿನ ಆಕ್ರೋಶಕ್ಕೆ ಕಲಾವಿದ ಜಮೆಲ್ ಬೆನ್ ಇಸ್ಮಾಯಿಲ್ ಮೃತಪಟ್ಟಿದ್ದರು.</p>.<p>ಅರಣದತ್ತ ಹೋಗುವ ಮೊದಲು, ‘ಬೆಂಕಿ ನಂದಿಸಲು ಗೆಳೆಯರಿಗೆ ನೆರವಾಗಲು ಹೋಗುತ್ತಿದ್ದೇನೆ’ ಎಂದು ಕಲಾವಿದ ಟ್ವೀಟ್ ಮಾಡಿದ್ದರು. ಈ ಪ್ರಕರಣದಲ್ಲಿ 38 ಜನರಿಗೆ ಎರಡರಿಂದ 12 ವರ್ಷದವರೆಗೆ ಸಜೆಯನ್ನು ಕೋರ್ಟ್ ವಿಧಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಲ್ಜೀರಿಯಾ</strong>: ಕಾಳ್ಗಿಚ್ಚು ಆರಂಭವಾಗಲು ಕಾರಣಕರ್ತ ಎಂಬ ಶಂಕೆಯಡಿ ಕಲಾವಿದರೊಬ್ಬರನ್ನು ಹತ್ಯೆ ಮಾಡಿದ್ದ ಪ್ರಕರಣದಲ್ಲಿ ಒಟ್ಟು 49 ಜನರಿಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸಿಅಲ್ಜೀರಿಯಾದ ಕೋರ್ಟ್ ಗುರುವಾರ ಆದೇಶಿಸಿದೆ.</p>.<p>ಗುಂಪು ಹಲ್ಲೆಯಿಂದ ಮೃತಪಟ್ಟಿದ್ದ ವ್ಯಕ್ತಿಕಾಳ್ಗಿಚ್ಚು ನಂದಿಸುವ ಕಾರ್ಯಕ್ಕೆ ನೆರವಾಗಲು ಧಾವಿಸಿದ್ದರು ಎಂದು ಅವರ ಪರ ವಕೀಲರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಆಗಸ್ಟ್ 2021ರಲ್ಲಿ ಕಬೈಲಿ ಪ್ರಾಂತ್ಯದಲ್ಲಿಕಾಳ್ಗಿಚ್ಚು ಕಾಣಿಸಿಕೊಂಡಿದ್ದ ಸಂದರ್ಭದಲ್ಲಿ ಕೃತ್ಯ ನಡೆದಿತ್ತು.</p>.<p>ಬೆರ್ಬರ್ ವಲಯದ ಬೆಟ್ಟ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಬೆಂಕಿ ನಂದಿಸಲು ಧಾವಿಸಿದ್ದ ಯೋಧರು ಒಳಗೊಂಡಂತೆ 90 ಜನರು ಮೃತಪಟ್ಟಿದ್ದರು. ಗುಂಪಿನ ಆಕ್ರೋಶಕ್ಕೆ ಕಲಾವಿದ ಜಮೆಲ್ ಬೆನ್ ಇಸ್ಮಾಯಿಲ್ ಮೃತಪಟ್ಟಿದ್ದರು.</p>.<p>ಅರಣದತ್ತ ಹೋಗುವ ಮೊದಲು, ‘ಬೆಂಕಿ ನಂದಿಸಲು ಗೆಳೆಯರಿಗೆ ನೆರವಾಗಲು ಹೋಗುತ್ತಿದ್ದೇನೆ’ ಎಂದು ಕಲಾವಿದ ಟ್ವೀಟ್ ಮಾಡಿದ್ದರು. ಈ ಪ್ರಕರಣದಲ್ಲಿ 38 ಜನರಿಗೆ ಎರಡರಿಂದ 12 ವರ್ಷದವರೆಗೆ ಸಜೆಯನ್ನು ಕೋರ್ಟ್ ವಿಧಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>