<p><strong>ಕಂಪಾಲ (ಉಗಾಂಡ</strong>): ಭಯೋತ್ಪಾದನೆ ಬಗ್ಗೆ ಶೂನ್ಯ ಸಹಿಷ್ಣುತೆ ನೀತಿ ಪಾಲಿಸುವಂತೆ ಅಲಿಪ್ತ ಚಳವಳಿ (ಎನ್ಎಎಂ) ಸದಸ್ಯ ರಾಷ್ಟ್ರಗಳಿಗೆ ಭಾರತ ಗುರುವಾರ ಕರೆ ನೀಡಿದೆ. ಭಯೋತ್ಪಾದನೆಗೆ ಪ್ರಾಯೋಜಕತ್ವ, ಬೆಂಬಲ, ಸಮರ್ಥನೆ ನೀಡಿದವರಿಗೇ ಅದು ಕೊನೆಗೆ ‘ಕಚ್ಚಲು ಬರುತ್ತದೆ’ ಎಂದು ಭಾರತ ಎಚ್ಚರಿಸಿದೆ.</p>.<p>ಇಲ್ಲಿ ನಡೆದ ಎನ್ಎಎಂನ 19ನೇ ಮಧ್ಯಾವಧಿ ಸಚಿವರ ಸಭೆಯಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವ ಕೀರ್ತಿವರ್ಧನ್ ಸಿಂಗ್, ಭಯೋತ್ಪಾದನೆ ಒಂದು ಸಾಮಾಜಿಕ ಬೆದರಿಕೆಯಾಗಿದ್ದು, ಅದನ್ನು ಅಂತರರಾಷ್ಟ್ರೀಯ ಸಹಕಾರದಿಂದ ಕೊನೆಗೊಳಿಸಬಹುದು ಎಂದು ಹೇಳಿದರು.</p>.<p class="title">‘ಭಾರತವು ದಶಕಗಳಿಂದ ಗಡಿಯಾಚೆಗಿನ ಭೀಕರ ಭಯೋತ್ಪಾದಕ ದಾಳಿಗಳಿಗೆ ಬಲಿಯಾಗಿದೆ. ಏಪ್ರಿಲ್ 22ರಂದು ಕೂಡ ಜಮ್ಮು–ಕಾಶ್ಮೀರದ ಪಹಲ್ಗಾಮ್ನಲ್ಲಿ ಅಮಾಯಕ ಪ್ರವಾಸಿಗರನ್ನು ಹತ್ಯೆ ಮಾಡಲಾಯಿತು. ಈ ಚಳವಳಿಯ ಪ್ರತಿ ಸದಸ್ಯರಿಗೂ ಭಯೋತ್ಪಾದನೆಯ ಸಮಸ್ಯೆಯ ಬಗ್ಗೆ ಅರಿವಿದ್ದು, ಅದನ್ನು ಎದುರಿಸಲು ಬದ್ಧವಾಗಿದೆ’ ಎಂದು ಅವರು ತಿಳಿಸಿದರು.</p>.<p class="title">‘ಆದಾಗ್ಯೂ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಚರ್ಚಿಸಿದಾಗ ಸದಸ್ಯ ರಾಷ್ಟ್ರವೊಂದು ಅಪರಾಧಿಯನ್ನು ಸಮರ್ಥನೆ ಮಾಡಿಕೊಂಡಿದ್ದು ತೀವ್ರ ವಿಷಾದದ ಸಂಗತಿಯಾಗಿದೆ. ದುರದೃಷ್ಟವಶಾತ್, ಆ ದೇಶವನ್ನು ಸಮರ್ಥಿಸುವ ಮತ್ತೊಂದು ಸದಸ್ಯ ರಾಷ್ಟ್ರವೂ ಇದೆ’ ಎಂದು ಕೀರ್ತಿವರ್ಧನ್ ಸಿಂಗ್ ಪರೋಕ್ಷವಾಗಿ ಪಾಕಿಸ್ತಾನ ಮತ್ತು ಚೀನಾವನ್ನು ಉಲ್ಲೇಖಸುತ್ತಾ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಂಪಾಲ (ಉಗಾಂಡ</strong>): ಭಯೋತ್ಪಾದನೆ ಬಗ್ಗೆ ಶೂನ್ಯ ಸಹಿಷ್ಣುತೆ ನೀತಿ ಪಾಲಿಸುವಂತೆ ಅಲಿಪ್ತ ಚಳವಳಿ (ಎನ್ಎಎಂ) ಸದಸ್ಯ ರಾಷ್ಟ್ರಗಳಿಗೆ ಭಾರತ ಗುರುವಾರ ಕರೆ ನೀಡಿದೆ. ಭಯೋತ್ಪಾದನೆಗೆ ಪ್ರಾಯೋಜಕತ್ವ, ಬೆಂಬಲ, ಸಮರ್ಥನೆ ನೀಡಿದವರಿಗೇ ಅದು ಕೊನೆಗೆ ‘ಕಚ್ಚಲು ಬರುತ್ತದೆ’ ಎಂದು ಭಾರತ ಎಚ್ಚರಿಸಿದೆ.</p>.<p>ಇಲ್ಲಿ ನಡೆದ ಎನ್ಎಎಂನ 19ನೇ ಮಧ್ಯಾವಧಿ ಸಚಿವರ ಸಭೆಯಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವ ಕೀರ್ತಿವರ್ಧನ್ ಸಿಂಗ್, ಭಯೋತ್ಪಾದನೆ ಒಂದು ಸಾಮಾಜಿಕ ಬೆದರಿಕೆಯಾಗಿದ್ದು, ಅದನ್ನು ಅಂತರರಾಷ್ಟ್ರೀಯ ಸಹಕಾರದಿಂದ ಕೊನೆಗೊಳಿಸಬಹುದು ಎಂದು ಹೇಳಿದರು.</p>.<p class="title">‘ಭಾರತವು ದಶಕಗಳಿಂದ ಗಡಿಯಾಚೆಗಿನ ಭೀಕರ ಭಯೋತ್ಪಾದಕ ದಾಳಿಗಳಿಗೆ ಬಲಿಯಾಗಿದೆ. ಏಪ್ರಿಲ್ 22ರಂದು ಕೂಡ ಜಮ್ಮು–ಕಾಶ್ಮೀರದ ಪಹಲ್ಗಾಮ್ನಲ್ಲಿ ಅಮಾಯಕ ಪ್ರವಾಸಿಗರನ್ನು ಹತ್ಯೆ ಮಾಡಲಾಯಿತು. ಈ ಚಳವಳಿಯ ಪ್ರತಿ ಸದಸ್ಯರಿಗೂ ಭಯೋತ್ಪಾದನೆಯ ಸಮಸ್ಯೆಯ ಬಗ್ಗೆ ಅರಿವಿದ್ದು, ಅದನ್ನು ಎದುರಿಸಲು ಬದ್ಧವಾಗಿದೆ’ ಎಂದು ಅವರು ತಿಳಿಸಿದರು.</p>.<p class="title">‘ಆದಾಗ್ಯೂ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಚರ್ಚಿಸಿದಾಗ ಸದಸ್ಯ ರಾಷ್ಟ್ರವೊಂದು ಅಪರಾಧಿಯನ್ನು ಸಮರ್ಥನೆ ಮಾಡಿಕೊಂಡಿದ್ದು ತೀವ್ರ ವಿಷಾದದ ಸಂಗತಿಯಾಗಿದೆ. ದುರದೃಷ್ಟವಶಾತ್, ಆ ದೇಶವನ್ನು ಸಮರ್ಥಿಸುವ ಮತ್ತೊಂದು ಸದಸ್ಯ ರಾಷ್ಟ್ರವೂ ಇದೆ’ ಎಂದು ಕೀರ್ತಿವರ್ಧನ್ ಸಿಂಗ್ ಪರೋಕ್ಷವಾಗಿ ಪಾಕಿಸ್ತಾನ ಮತ್ತು ಚೀನಾವನ್ನು ಉಲ್ಲೇಖಸುತ್ತಾ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>