<p><strong>ಕರಾಚಿ:</strong> ಬಲೂಚಿಸ್ತಾನ ನ್ಯಾಷನಲ್ ಪಾರ್ಟಿ ( ಬಿಎನ್ಪಿ ) ರ್ಯಾಲಿಯ ಬಳಿಕ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 14 ಜನ ಮೃತಪಟ್ಟು, 35 ಮಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.</p>.<p>ಸರ್ದಾರ್ ಅತ್ತೌಲ್ಲಾ ಮೆಂಗಲ್ ಅವರ 4ನೇ ಪುಣ್ಯತಿಥಿಯ ಅಂಗವಾಗಿ ಮಂಗಳವಾರ, ಬಿಎನ್ಪಿ ಕ್ವೆಟ್ಟಾದಲ್ಲಿ ಸಾರ್ವಜನಿಕ ರ್ಯಾಲಿಯನ್ನು ಆಯೋಜಿಸಿತ್ತು. ರ್ಯಾಲಿ ಮುಗಿದ ನಂತರ ಸರಿಯಬ್ ಪ್ರದೇಶದ ಶಹವಾನಿ ಕ್ರೀಡಾಂಗಣದ ಬಳಿ ಸ್ಫೋಟ ಸಂಭವಿಸಿದೆ ಎಂದು 'ದಿ ಎಕ್ಸ್ಪ್ರೆಸ್ ಟ್ರಿಬ್ಯೂನ್' ಪತ್ರಿಕೆ ವರದಿ ಮಾಡಿದೆ.</p>.<p>ಪ್ರಾಂತೀಯ ಆರೋಗ್ಯ ಸಚಿವ ಬಖ್ತ್ ಮುಹಮ್ಮದ್ ಕಾಕರ್ ಅವರು ಘಟನೆಯನ್ನು ದೃಢಪಡಿಸಿದ್ದಾರೆ ಎಂದೂ ಪತ್ರಿಕೆ ವರದಿ ಮಾಡಿದೆ.</p>.<p>ಅಧಿಕಾರಿಗಳು ಇದನ್ನು ಆತ್ಮಾಹುತಿ ಬಾಂಬ್ ದಾಳಿ ಎಂದು ದೃಢಪಡಿಸಿದ್ದಾರೆ ಎಂದು 'ಡಾನ್' ಪತ್ರಿಕೆ ವರದಿ ಮಾಡಿದೆ. ರ್ಯಾಲಿ ಮುಗಿದ ಸುಮಾರು 15 ನಿಮಿಷಗಳ ನಂತರ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.</p>.<p>ರ್ಯಾಲಿಯಲ್ಲಿ ಭಾಗವಹಿಸಿದ್ದವರು ಹೊರನಡೆಯುತ್ತಿದ್ದಾಗ ಪಾರ್ಕಿಂಗ್ ಪ್ರದೇಶದಲ್ಲಿ ದಾಳಿಕೋರ ಮದ್ದುಗುಂಡುಗಳಿಂದ ತುಂಬಿದ್ದ ಜಾಕೆಟ್ ಸ್ಫೋಟಿಸಿ ಆತ್ಮಾಹುತಿ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. </p>.<p>ಸಭೆಯ ಅಧ್ಯಕ್ಷತೆ ವಹಿಸಿದ್ದ ಬಿಎನ್ಪಿ ಮುಖ್ಯಸ್ಥ ಅಖ್ತರ್ ಮೆಂಗಲ್ ಅವರು ಮನೆಗೆ ತೆರಳುತ್ತಿದ್ದಾಗ ಸ್ಫೋಟ ಸಂಭವಿಸಿದ್ದರಿಂದ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.</p>.<p>ಪಖ್ತುಂಖ್ವಾ ಮಿಲ್ಲಿ ಅವಾಮಿ ಪಕ್ಷದ ಮುಖ್ಯಸ್ಥ ಮೆಹಮೂದ್ ಖಾನ್ ಅಚಕ್ಜೈ, ಅವಾಮಿ ರಾಷ್ಟ್ರೀಯ ಪಕ್ಷದ ಅಸ್ಗರ್ ಖಾನ್ ಅಚಕ್ಜೈ ಮತ್ತು ಬಿಎನ್ಪಿ ಮಾಜಿ ಸೆನೆಟರ್ ಮೀರ್ ಕಬೀರ್ ಮುಹಮ್ಮದ್ ಶೈ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಅವರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ.</p>.<p>ಆದಾಗ್ಯೂ, ಬಿಎನ್ಪಿಯ ಪ್ರಾಂತೀಯ ವಿಧಾನಸಭೆಯ ಮಾಜಿ ಸದಸ್ಯ (ಎಂಪಿಎ) ಮೀರ್ ಅಹ್ಮದ್ ನವಾಜ್ ಬಲೂಚ್, ಪಕ್ಷದ ಕಾರ್ಯದರ್ಶಿ ಮೂಸಾ ಜಾನ್ ಹಾಗೂ ಪಕ್ಷದ ಹಲವು ಕಾರ್ಯಕರ್ತರು, ಬೆಂಬಲಿಗರು ಗಾಯಗೊಂಡಿದ್ದಾರೆ.</p>.<p>ತಾವು ಸುರಕ್ಷಿತವಾಗಿರುವುದಾಗಿ ಬಿಎನ್ಪಿ ಮುಖ್ಯಸ್ಥ ಮೆಂಗಲ್ ಅವರು ಸಾಮಾಜಿಕ ಮಾಧ್ಯಮದ ಪೋಸ್ಟ್ನಲ್ಲಿ ದೃಢಪಡಿಸಿದ್ದಾರೆ. 'ಸ್ಫೋಟದಲ್ಲಿ ಬಿಎನ್ಪಿಯ 15 ಕಾರ್ಯಕರ್ತರು ಪ್ರಾಣ ಕಳೆದುಕೊಂಡಿದ್ದಾರೆ. ಅವರ ಸಾವು ಹೃದಯ ವಿದ್ರಾವಕ' ಎಂದು ಪೋಸ್ಟ್ನಲ್ಲಿ ಹೇಳಿದ್ದಾರೆ.</p>.<p>ಬಲೂಚಿಸ್ತಾನದ ಮುಖ್ಯಮಂತ್ರಿ ಮೀರ್ ಸರ್ಫ್ರಾಜ್ ಬುಗ್ತಿ, ದಾಳಿಯನ್ನು ಖಂಡಿಸಿದ್ದು, 'ಇದು ಮಾನವೀಯತೆ ವಿರುದ್ಧ ಶತ್ರುಗಳ ಹೇಡಿತನದ ಕೃತ್ಯ' ಎಂದು ಕರೆದಿದ್ದಾರೆ. </p>.<p>ದಾಳಿಯ ಹೊಣೆಯನ್ನು ಇದುವರೆಗೆ ಯಾವುದೇ ಗುಂಪು ಹೊತ್ತುಕೊಂಡಿಲ್ಲ. ಸದ್ಯ ಕ್ವೆಟ್ಟಾ ಪ್ರದೇಶದ ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕರಾಚಿ:</strong> ಬಲೂಚಿಸ್ತಾನ ನ್ಯಾಷನಲ್ ಪಾರ್ಟಿ ( ಬಿಎನ್ಪಿ ) ರ್ಯಾಲಿಯ ಬಳಿಕ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 14 ಜನ ಮೃತಪಟ್ಟು, 35 ಮಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.</p>.<p>ಸರ್ದಾರ್ ಅತ್ತೌಲ್ಲಾ ಮೆಂಗಲ್ ಅವರ 4ನೇ ಪುಣ್ಯತಿಥಿಯ ಅಂಗವಾಗಿ ಮಂಗಳವಾರ, ಬಿಎನ್ಪಿ ಕ್ವೆಟ್ಟಾದಲ್ಲಿ ಸಾರ್ವಜನಿಕ ರ್ಯಾಲಿಯನ್ನು ಆಯೋಜಿಸಿತ್ತು. ರ್ಯಾಲಿ ಮುಗಿದ ನಂತರ ಸರಿಯಬ್ ಪ್ರದೇಶದ ಶಹವಾನಿ ಕ್ರೀಡಾಂಗಣದ ಬಳಿ ಸ್ಫೋಟ ಸಂಭವಿಸಿದೆ ಎಂದು 'ದಿ ಎಕ್ಸ್ಪ್ರೆಸ್ ಟ್ರಿಬ್ಯೂನ್' ಪತ್ರಿಕೆ ವರದಿ ಮಾಡಿದೆ.</p>.<p>ಪ್ರಾಂತೀಯ ಆರೋಗ್ಯ ಸಚಿವ ಬಖ್ತ್ ಮುಹಮ್ಮದ್ ಕಾಕರ್ ಅವರು ಘಟನೆಯನ್ನು ದೃಢಪಡಿಸಿದ್ದಾರೆ ಎಂದೂ ಪತ್ರಿಕೆ ವರದಿ ಮಾಡಿದೆ.</p>.<p>ಅಧಿಕಾರಿಗಳು ಇದನ್ನು ಆತ್ಮಾಹುತಿ ಬಾಂಬ್ ದಾಳಿ ಎಂದು ದೃಢಪಡಿಸಿದ್ದಾರೆ ಎಂದು 'ಡಾನ್' ಪತ್ರಿಕೆ ವರದಿ ಮಾಡಿದೆ. ರ್ಯಾಲಿ ಮುಗಿದ ಸುಮಾರು 15 ನಿಮಿಷಗಳ ನಂತರ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.</p>.<p>ರ್ಯಾಲಿಯಲ್ಲಿ ಭಾಗವಹಿಸಿದ್ದವರು ಹೊರನಡೆಯುತ್ತಿದ್ದಾಗ ಪಾರ್ಕಿಂಗ್ ಪ್ರದೇಶದಲ್ಲಿ ದಾಳಿಕೋರ ಮದ್ದುಗುಂಡುಗಳಿಂದ ತುಂಬಿದ್ದ ಜಾಕೆಟ್ ಸ್ಫೋಟಿಸಿ ಆತ್ಮಾಹುತಿ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. </p>.<p>ಸಭೆಯ ಅಧ್ಯಕ್ಷತೆ ವಹಿಸಿದ್ದ ಬಿಎನ್ಪಿ ಮುಖ್ಯಸ್ಥ ಅಖ್ತರ್ ಮೆಂಗಲ್ ಅವರು ಮನೆಗೆ ತೆರಳುತ್ತಿದ್ದಾಗ ಸ್ಫೋಟ ಸಂಭವಿಸಿದ್ದರಿಂದ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.</p>.<p>ಪಖ್ತುಂಖ್ವಾ ಮಿಲ್ಲಿ ಅವಾಮಿ ಪಕ್ಷದ ಮುಖ್ಯಸ್ಥ ಮೆಹಮೂದ್ ಖಾನ್ ಅಚಕ್ಜೈ, ಅವಾಮಿ ರಾಷ್ಟ್ರೀಯ ಪಕ್ಷದ ಅಸ್ಗರ್ ಖಾನ್ ಅಚಕ್ಜೈ ಮತ್ತು ಬಿಎನ್ಪಿ ಮಾಜಿ ಸೆನೆಟರ್ ಮೀರ್ ಕಬೀರ್ ಮುಹಮ್ಮದ್ ಶೈ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಅವರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ.</p>.<p>ಆದಾಗ್ಯೂ, ಬಿಎನ್ಪಿಯ ಪ್ರಾಂತೀಯ ವಿಧಾನಸಭೆಯ ಮಾಜಿ ಸದಸ್ಯ (ಎಂಪಿಎ) ಮೀರ್ ಅಹ್ಮದ್ ನವಾಜ್ ಬಲೂಚ್, ಪಕ್ಷದ ಕಾರ್ಯದರ್ಶಿ ಮೂಸಾ ಜಾನ್ ಹಾಗೂ ಪಕ್ಷದ ಹಲವು ಕಾರ್ಯಕರ್ತರು, ಬೆಂಬಲಿಗರು ಗಾಯಗೊಂಡಿದ್ದಾರೆ.</p>.<p>ತಾವು ಸುರಕ್ಷಿತವಾಗಿರುವುದಾಗಿ ಬಿಎನ್ಪಿ ಮುಖ್ಯಸ್ಥ ಮೆಂಗಲ್ ಅವರು ಸಾಮಾಜಿಕ ಮಾಧ್ಯಮದ ಪೋಸ್ಟ್ನಲ್ಲಿ ದೃಢಪಡಿಸಿದ್ದಾರೆ. 'ಸ್ಫೋಟದಲ್ಲಿ ಬಿಎನ್ಪಿಯ 15 ಕಾರ್ಯಕರ್ತರು ಪ್ರಾಣ ಕಳೆದುಕೊಂಡಿದ್ದಾರೆ. ಅವರ ಸಾವು ಹೃದಯ ವಿದ್ರಾವಕ' ಎಂದು ಪೋಸ್ಟ್ನಲ್ಲಿ ಹೇಳಿದ್ದಾರೆ.</p>.<p>ಬಲೂಚಿಸ್ತಾನದ ಮುಖ್ಯಮಂತ್ರಿ ಮೀರ್ ಸರ್ಫ್ರಾಜ್ ಬುಗ್ತಿ, ದಾಳಿಯನ್ನು ಖಂಡಿಸಿದ್ದು, 'ಇದು ಮಾನವೀಯತೆ ವಿರುದ್ಧ ಶತ್ರುಗಳ ಹೇಡಿತನದ ಕೃತ್ಯ' ಎಂದು ಕರೆದಿದ್ದಾರೆ. </p>.<p>ದಾಳಿಯ ಹೊಣೆಯನ್ನು ಇದುವರೆಗೆ ಯಾವುದೇ ಗುಂಪು ಹೊತ್ತುಕೊಂಡಿಲ್ಲ. ಸದ್ಯ ಕ್ವೆಟ್ಟಾ ಪ್ರದೇಶದ ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>