<p><strong>ಢಾಕಾ</strong>: ಬಾಂಗ್ಲಾದೇಶದಲ್ಲಿ ಜುಲೈ–ಆಗಸ್ಟ್ನಲ್ಲಿ ಯಾಕಾಗಿ ದಂಗೆ ನಡೆದಿತ್ತು ಎನ್ನುವುದನ್ನು ಭಾರತ ತನ್ನ ಧೋರಣೆ ಬದಲಿಸಿಕೊಂಡು, ಒಪ್ಪಿಕೊಳ್ಳಬೇಕಿದೆ. ಹೀಗಾದಲ್ಲಿ ಮಾತ್ರ ಎರಡೂ ದೇಶಗಳ ನಡುವೆ ಹೊಸದಾಗಿ ದ್ವಿಪಕ್ಷೀಯ ಮಾತುಕತೆ ಸಾಧ್ಯವಾಗಲಿದೆ ಎಂದು ಮಧ್ಯಂತರ ಸರ್ಕಾರದ ಪ್ರಮುಖ ಸಲಹೆಗಾರ ಮಹಫುಜ್ ಆಲಮ್ ಹೇಳಿದ್ದಾರೆ.</p><p>ಈ ಹಿಂದಿನ ಪ್ರಧಾನಿ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಿದ ದಂಗೆಯ ನಿಜ ಸ್ವರೂಪವನ್ನು ಭಾರತ ಒಪ್ಪಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. </p><p>‘ಭಾರತವು ಜುಲೈ ದಂಗೆಯನ್ನು ಭಯೋತ್ಪಾದನೆ, ಹಿಂದೂ ವಿರೋಧಿ ಮತ್ತು ಇಸ್ಲಾಮಿಸ್ಟ್ ಪ್ರಭುತ್ವದ ಹೇರಿಕೆ ಎಂಬಂತೆ ಪರಿಗಣಿಸುತ್ತಿದೆ. ತನ್ನ ಈ ದೃಷ್ಟಿಕೋನವನ್ನು ಬದಲಿಸಿಕೊಂಡು, ಬಾಂಗ್ಲಾದೇಶದ ವಾಸ್ತವಗಳನ್ನು ಅರಿಯಬೇಕಿದೆ’ ಎಂದು ಮಧ್ಯಂತರ ಸರ್ಕಾರದ ಸಚಿವ, ವಿದ್ಯಾರ್ಥಿ ಚಳವಳಿಯ ನಾಯಕ ಮಹಫುಜ್ ಆಲಮ್ ‘ಫೇಸ್ಬುಕ್’ನಲ್ಲಿ ಬರೆದುಕೊಂಡಿದ್ದಾರೆ.</p><p>‘70 ಉಗ್ರರು ಜೈಲಿನಿಂದ ಪರಾರಿಯಾಗಿದ್ದರು’: ಪ್ರಧಾನಿ ಶೇಖ್ ಹಸೀನಾ ಪದಚ್ಯುತಿಗೆ ಕಾರಣವಾದ ವಿದ್ಯಾರ್ಥಿ ದಂಗೆಯ ಸಂದರ್ಭ, 70 ಉಗ್ರರು ಹಾಗೂ ಮರಣದಂಡನೆಗೆ ಒಳಗಾಗಿದ್ದ ಕೈದಿಗಳು ಸೇರಿದಂತೆ 2,200ಕ್ಕೂ ಹೆಚ್ಚು ಮಂದಿ ಜೈಲಿನಿಂದ ಪರಾರಿಯಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p><p>ದಂಗೆಯ ಸಂದರ್ಭ ಪರಾರಿಯಾಗಿದ್ದವರನ್ನು ಪತ್ತೆಹಚ್ಚಿ ಮತ್ತೆ ಬಂಧಿಸಿ ಜೈಲಿಗಟ್ಟಲಾಗಿದ್ದು, 700ಕ್ಕೂ ಹೆಚ್ಚು ಕೈದಿಗಳು ಈಗಲೂ ಕಾರಾಗೃಹ ಬಂಧನದಿಂದ ತಪ್ಪಿಸಿಕೊಂಡು ಹೊರಗಿದ್ದಾರೆ ಎಂದು ಕಾರಾಗೃಹಗಳ ಐಜಿ ಜನರಲ್ ಬ್ರಿಗೇಡಿಯರ್ ಸೈಯದ್ ಮೊತಾಹರ್ ಹುಸೇನ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಢಾಕಾ</strong>: ಬಾಂಗ್ಲಾದೇಶದಲ್ಲಿ ಜುಲೈ–ಆಗಸ್ಟ್ನಲ್ಲಿ ಯಾಕಾಗಿ ದಂಗೆ ನಡೆದಿತ್ತು ಎನ್ನುವುದನ್ನು ಭಾರತ ತನ್ನ ಧೋರಣೆ ಬದಲಿಸಿಕೊಂಡು, ಒಪ್ಪಿಕೊಳ್ಳಬೇಕಿದೆ. ಹೀಗಾದಲ್ಲಿ ಮಾತ್ರ ಎರಡೂ ದೇಶಗಳ ನಡುವೆ ಹೊಸದಾಗಿ ದ್ವಿಪಕ್ಷೀಯ ಮಾತುಕತೆ ಸಾಧ್ಯವಾಗಲಿದೆ ಎಂದು ಮಧ್ಯಂತರ ಸರ್ಕಾರದ ಪ್ರಮುಖ ಸಲಹೆಗಾರ ಮಹಫುಜ್ ಆಲಮ್ ಹೇಳಿದ್ದಾರೆ.</p><p>ಈ ಹಿಂದಿನ ಪ್ರಧಾನಿ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಿದ ದಂಗೆಯ ನಿಜ ಸ್ವರೂಪವನ್ನು ಭಾರತ ಒಪ್ಪಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. </p><p>‘ಭಾರತವು ಜುಲೈ ದಂಗೆಯನ್ನು ಭಯೋತ್ಪಾದನೆ, ಹಿಂದೂ ವಿರೋಧಿ ಮತ್ತು ಇಸ್ಲಾಮಿಸ್ಟ್ ಪ್ರಭುತ್ವದ ಹೇರಿಕೆ ಎಂಬಂತೆ ಪರಿಗಣಿಸುತ್ತಿದೆ. ತನ್ನ ಈ ದೃಷ್ಟಿಕೋನವನ್ನು ಬದಲಿಸಿಕೊಂಡು, ಬಾಂಗ್ಲಾದೇಶದ ವಾಸ್ತವಗಳನ್ನು ಅರಿಯಬೇಕಿದೆ’ ಎಂದು ಮಧ್ಯಂತರ ಸರ್ಕಾರದ ಸಚಿವ, ವಿದ್ಯಾರ್ಥಿ ಚಳವಳಿಯ ನಾಯಕ ಮಹಫುಜ್ ಆಲಮ್ ‘ಫೇಸ್ಬುಕ್’ನಲ್ಲಿ ಬರೆದುಕೊಂಡಿದ್ದಾರೆ.</p><p>‘70 ಉಗ್ರರು ಜೈಲಿನಿಂದ ಪರಾರಿಯಾಗಿದ್ದರು’: ಪ್ರಧಾನಿ ಶೇಖ್ ಹಸೀನಾ ಪದಚ್ಯುತಿಗೆ ಕಾರಣವಾದ ವಿದ್ಯಾರ್ಥಿ ದಂಗೆಯ ಸಂದರ್ಭ, 70 ಉಗ್ರರು ಹಾಗೂ ಮರಣದಂಡನೆಗೆ ಒಳಗಾಗಿದ್ದ ಕೈದಿಗಳು ಸೇರಿದಂತೆ 2,200ಕ್ಕೂ ಹೆಚ್ಚು ಮಂದಿ ಜೈಲಿನಿಂದ ಪರಾರಿಯಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p><p>ದಂಗೆಯ ಸಂದರ್ಭ ಪರಾರಿಯಾಗಿದ್ದವರನ್ನು ಪತ್ತೆಹಚ್ಚಿ ಮತ್ತೆ ಬಂಧಿಸಿ ಜೈಲಿಗಟ್ಟಲಾಗಿದ್ದು, 700ಕ್ಕೂ ಹೆಚ್ಚು ಕೈದಿಗಳು ಈಗಲೂ ಕಾರಾಗೃಹ ಬಂಧನದಿಂದ ತಪ್ಪಿಸಿಕೊಂಡು ಹೊರಗಿದ್ದಾರೆ ಎಂದು ಕಾರಾಗೃಹಗಳ ಐಜಿ ಜನರಲ್ ಬ್ರಿಗೇಡಿಯರ್ ಸೈಯದ್ ಮೊತಾಹರ್ ಹುಸೇನ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>