<p><strong>ಢಾಕಾ:</strong> ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಆಶ್ರಯ ನೀಡಿದ ಭಾರತದ ನಡೆಗೆ ಬಾಂಗ್ಲಾದೇಶಿಗಳು ಕೋಪಗೊಂಡಿಲ್ಲ, ಬದಲಾಗಿ ಬೇಸರಗೊಂಡಿದ್ದಾರೆ ಎಂದು ‘ಬಾಂಗ್ಲಾದೇಶ್ ನ್ಯಾಷನಲ್ ಪಾರ್ಟಿ’ಯ ನಾಯಕರೊಬ್ಬರು ತಿಳಿಸಿದ್ದಾರೆ.</p>.ಶೇಖ್ ಹಸೀನಾ ರಾಜತಾಂತ್ರಿಕ ಪಾಸ್ಪೋರ್ಟ್ ರದ್ದು ಮಾಡಲು ಬಾಂಗ್ಲಾ ಸರ್ಕಾರ ನಿರ್ಧಾರ.<p>ಅಲ್ಲದೆ ಬಾಂಗ್ಲಾದೇಶದ ವಾಸ್ತವ ಸ್ಥಿತಿಯನ್ನು ಗಮನಿಸಿ ತಮ್ಮ ನೀತಿಯನ್ನು ಮರುಪರಿಶೀಲನೆ ಮಾಡಿ ಎಂದು ಭಾರತದ ರಾಜಕಾರಣಿ ಹಾಗೂ ಭದ್ರತಾ ತಂತ್ರಜ್ಞರಿಗೆ ಅವರು ಮನವಿ ಮಾಡಿದ್ದಾರೆ.</p><p>ಪಿಟಿಐ ಸಂದರ್ಶನದಲ್ಲಿ ಮಾತನಾಡಿದ ಬಾಂಗ್ಲಾದೇಶದ ಮಾಜಿ ಸಚಿವ ಅಬ್ದುಲ್ ಮೊಯಿನ್ ಖಾನ್, ‘ಬಾಂಗ್ಲಾದೇಶವು ಮೂರು ಬದಿಯಲ್ಲಿ ಭಾರತದೊಂದಿಗೆ ಗಡಿ ಹಂಚಿಕೊಂಡ ದೊಡ್ಡ ನೆರೆಯ ರಾಷ್ಟ್ರ. ಹೀಗಾಗಿ ಭಾರತ ಒಳ್ಳೆಯ ಸ್ನೇಹಿತ ಆಗದೇ ಇರಲು ಸಾಧ್ಯವೇ ಇಲ್ಲ’ ಎಂದು ಹೇಳಿದ್ದಾರೆ.</p>.Bangladesh | ಹಸೀನಾ ಗಡಿಪಾರಿಗೆ ಮನವಿ.<p>ಮಾಜಿ ಪ್ರಧಾನಿ ಹಸೀನಾ ಭಾರತದಲ್ಲಿ ಇರುವ ಕಾರಣ ಉಭಯ ದೇಶಗಳ ಬಾಂಧವ್ಯದ ಪಥವನ್ನು ಹೇಗೆ ನೋಡುತ್ತೀರಿ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ‘ಅದು ಭಾರತ ಹೇಗೆ ನಿರ್ಧರಿಸುತ್ತದೆ ಎಂಬುದರ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ’ ಎಂದು ನುಡಿದಿದ್ದಾರೆ.</p><p>ಬಾಂಗ್ಲಾದೇಶದಿಂದ ಪಲಾಯನ ಮಾಡಿದ ನಂತರ ಹಸೀನಾ ಭಾರತದಲ್ಲಿ ಉಳಿದುಕೊಂಡಾಗ, ‘ಬಾಂಗ್ಲಾದೇಶಿಗಳು ಕೋಪಗೊಂಡಿಲ್ಲ. ಆದರೆ ಅವರು ನೊಂದಿದ್ದಾರೆ, ಗಾಯಗೊಂಡಿದ್ದಾರೆ. ಭಾರತದಿಂದ ಈ ನಡೆ ನಿರೀಕ್ಷಿಸಿರಲಿಲ್ಲ’ ಎಂದು ಹೇಳಿದ್ದಾರೆ.</p>.Bangladesh | ಹಸೀನಾ ವಿರುದ್ಧ ಮತ್ತೊಂದು ಕೊಲೆ ಪ್ರಕರಣ ದಾಖಲು. <p>ಅವಾಮಿ ಲೀಗ್ ಮತ್ತು ಹಸೀನಾ ಅವರ ಬಗೆಗಿನ ಭಾರತದ ನಡವಳಿಕೆಯು ‘ನಿಜವಾದ ಅರ್ಥದಲ್ಲಿ ಭಾರತೀಯ ವಿರೋಧಿ ಭಾವನೆಯಾಗಿ ರೂಪಾಂತರಗೊಂಡಿದೆ’ ಎಂದು ಅವರು ಹೇಳಿದ್ದಾರೆ.</p> .ಬಾಂಗ್ಲಾ ನಾಶ ಮಾಡಿದ ಹಸೀನಾ: ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನುಸ್ ಕಿಡಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಢಾಕಾ:</strong> ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಆಶ್ರಯ ನೀಡಿದ ಭಾರತದ ನಡೆಗೆ ಬಾಂಗ್ಲಾದೇಶಿಗಳು ಕೋಪಗೊಂಡಿಲ್ಲ, ಬದಲಾಗಿ ಬೇಸರಗೊಂಡಿದ್ದಾರೆ ಎಂದು ‘ಬಾಂಗ್ಲಾದೇಶ್ ನ್ಯಾಷನಲ್ ಪಾರ್ಟಿ’ಯ ನಾಯಕರೊಬ್ಬರು ತಿಳಿಸಿದ್ದಾರೆ.</p>.ಶೇಖ್ ಹಸೀನಾ ರಾಜತಾಂತ್ರಿಕ ಪಾಸ್ಪೋರ್ಟ್ ರದ್ದು ಮಾಡಲು ಬಾಂಗ್ಲಾ ಸರ್ಕಾರ ನಿರ್ಧಾರ.<p>ಅಲ್ಲದೆ ಬಾಂಗ್ಲಾದೇಶದ ವಾಸ್ತವ ಸ್ಥಿತಿಯನ್ನು ಗಮನಿಸಿ ತಮ್ಮ ನೀತಿಯನ್ನು ಮರುಪರಿಶೀಲನೆ ಮಾಡಿ ಎಂದು ಭಾರತದ ರಾಜಕಾರಣಿ ಹಾಗೂ ಭದ್ರತಾ ತಂತ್ರಜ್ಞರಿಗೆ ಅವರು ಮನವಿ ಮಾಡಿದ್ದಾರೆ.</p><p>ಪಿಟಿಐ ಸಂದರ್ಶನದಲ್ಲಿ ಮಾತನಾಡಿದ ಬಾಂಗ್ಲಾದೇಶದ ಮಾಜಿ ಸಚಿವ ಅಬ್ದುಲ್ ಮೊಯಿನ್ ಖಾನ್, ‘ಬಾಂಗ್ಲಾದೇಶವು ಮೂರು ಬದಿಯಲ್ಲಿ ಭಾರತದೊಂದಿಗೆ ಗಡಿ ಹಂಚಿಕೊಂಡ ದೊಡ್ಡ ನೆರೆಯ ರಾಷ್ಟ್ರ. ಹೀಗಾಗಿ ಭಾರತ ಒಳ್ಳೆಯ ಸ್ನೇಹಿತ ಆಗದೇ ಇರಲು ಸಾಧ್ಯವೇ ಇಲ್ಲ’ ಎಂದು ಹೇಳಿದ್ದಾರೆ.</p>.Bangladesh | ಹಸೀನಾ ಗಡಿಪಾರಿಗೆ ಮನವಿ.<p>ಮಾಜಿ ಪ್ರಧಾನಿ ಹಸೀನಾ ಭಾರತದಲ್ಲಿ ಇರುವ ಕಾರಣ ಉಭಯ ದೇಶಗಳ ಬಾಂಧವ್ಯದ ಪಥವನ್ನು ಹೇಗೆ ನೋಡುತ್ತೀರಿ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ‘ಅದು ಭಾರತ ಹೇಗೆ ನಿರ್ಧರಿಸುತ್ತದೆ ಎಂಬುದರ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ’ ಎಂದು ನುಡಿದಿದ್ದಾರೆ.</p><p>ಬಾಂಗ್ಲಾದೇಶದಿಂದ ಪಲಾಯನ ಮಾಡಿದ ನಂತರ ಹಸೀನಾ ಭಾರತದಲ್ಲಿ ಉಳಿದುಕೊಂಡಾಗ, ‘ಬಾಂಗ್ಲಾದೇಶಿಗಳು ಕೋಪಗೊಂಡಿಲ್ಲ. ಆದರೆ ಅವರು ನೊಂದಿದ್ದಾರೆ, ಗಾಯಗೊಂಡಿದ್ದಾರೆ. ಭಾರತದಿಂದ ಈ ನಡೆ ನಿರೀಕ್ಷಿಸಿರಲಿಲ್ಲ’ ಎಂದು ಹೇಳಿದ್ದಾರೆ.</p>.Bangladesh | ಹಸೀನಾ ವಿರುದ್ಧ ಮತ್ತೊಂದು ಕೊಲೆ ಪ್ರಕರಣ ದಾಖಲು. <p>ಅವಾಮಿ ಲೀಗ್ ಮತ್ತು ಹಸೀನಾ ಅವರ ಬಗೆಗಿನ ಭಾರತದ ನಡವಳಿಕೆಯು ‘ನಿಜವಾದ ಅರ್ಥದಲ್ಲಿ ಭಾರತೀಯ ವಿರೋಧಿ ಭಾವನೆಯಾಗಿ ರೂಪಾಂತರಗೊಂಡಿದೆ’ ಎಂದು ಅವರು ಹೇಳಿದ್ದಾರೆ.</p> .ಬಾಂಗ್ಲಾ ನಾಶ ಮಾಡಿದ ಹಸೀನಾ: ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನುಸ್ ಕಿಡಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>