<p><strong>ಢಾಕಾ:</strong> ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆಗೆ ಕಾಲಮಿತಿ ನಿಗದಿಪಡಿಸಲು ಉಸ್ತುವಾರಿ ಸರ್ಕಾರದ ನಾಯಕ ಮೊಹಮ್ಮದ್ ಯೂನಸ್ ನಿರಾಕರಿಸಿದ್ದಾರೆ. ‘ಚುನಾವಣೆಗೂ ಮೊದಲು ಕೆಲವು ಸುಧಾರಣಾ ಕಾರ್ಯಕ್ರಮಗಳು ಜಾರಿಗೊಳಿಸಬೇಕಿದೆ’ ಎಂದು ಅವರು ತಿಳಿಸಿದ್ದಾರೆ.</p>.<p>ವಿದ್ಯಾರ್ಥಿ ಸಮುದಾಯ ನೇತೃತ್ವದ ಪ್ರತಿಭಟನೆಯಿಂದಾಗಿ ಮಾಜಿ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಸರ್ಕಾರ ಪದಚ್ಯುತಗೊಂಡಿತ್ತು. ಆ ನಂತರ ರಚನೆಯಾಗಿದ್ದ ಉಸ್ತುವಾರಿ ಸರ್ಕಾರದ ಮುಖ್ಯ ಸಲಹೆಗಾರರಾಗಿ ಮೊಹಮ್ಮದ್ ಯೂನಸ್ ನೇಮಕಗೊಂಡಿದ್ದರು.</p>.<p>84 ವರ್ಷ ವಯಸ್ಸಿನ, ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರೂ ಆದ ಯೂನಸ್ ಅವರು, ಸದ್ಯ ಬಾಂಗ್ಲಾದೇಶದಲ್ಲಿ ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆಯನ್ನು ಮರುಸ್ಥಾಪಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ‘ಈ ಕಾರ್ಯ ತುಂಬಾ ಕಠಿಣವಾದುದಾಗಿದೆ’ ಎಂದೂ ಹೇಳಿಕೊಂಡಿದ್ದಾರೆ. </p>.<p>‘ಉಸ್ತುವಾರಿ ಸರ್ಕಾರದಲ್ಲಿರುವ ಯಾರಿಗೂ ಸುದೀರ್ಘ ಕಾಲ ಈ ಕಾರ್ಯದಲ್ಲಿ ಉಳಿಯುವ ಗುರಿ ಇಲ್ಲ’ ಎಂದು ಯೂನಸ್ ತಮ್ಮ ನೇತೃತ್ವದ ಉಸ್ತುವಾರಿ ಸರ್ಕಾರ ಕುರಿತು ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ. ‘ಪ್ರೊಥೊಮ್ ಅಲೊ’ ದೈನಿಕದಲ್ಲಿ ಅವರ ಸಂದರ್ಶನ ಪ್ರಕಟವಾಗಿದೆ. </p>.<p>‘ಸುಧಾರಣಾ ಕಾರ್ಯಕ್ರಮಗಳಿಗೆ ಪ್ರಥಮ ಆದ್ಯತೆ. ನೀವು ಚುನಾವಣೆ ನಡೆಸಿ ಎಂದು ಈಗ ಹೇಳಿದರೆ ನಾವು ಅದಕ್ಕೆ ಸಿದ್ಧರಿದ್ದೇವೆ. ಆದರೆ, ಮೊದಲು ಚುನಾವಣೆ ನಡೆಸುವುದು ತಪ್ಪಾಗುತ್ತದೆ’ ಎಂದು ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.</p>.<p>ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ 15 ವರ್ಷದ ಆಡಳಿತಾವಧಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ವ್ಯಾಪಕವಾಗಿತ್ತು ಎಂಬ ಆರೋಪವಿತ್ತು. ಅಲ್ಲದೆ, ಕಾನೂನುಬಾಹಿರವಾಗಿ ರಾಜಕೀಯ ವಿರೋಧಿಗಳ ಬಂಧನ, ಹತ್ಯೆ ಕೂಡಾ ನಡೆದಿರುವ ದೂರುಗಳಿದ್ದವು.</p>.<p>ಸರ್ಕಾರದ ರಾಜೀನಾಮೆಗೆ ಒತ್ತಾಯಿಸಿ, ವಿದ್ಯಾರ್ಥಿ ಸಮುದಾಯದ ನೇತೃತ್ವದಲ್ಲಿ ನಡೆಸಿದ್ದ ದೇಶವ್ಯಾಪಿ ಪ್ರತಿಭಟನೆಯಲ್ಲಿ 600ಕ್ಕೂ ಹೆಚ್ಚು ಜನರು ಮೃತಪಟ್ಟರು ಎಂದು ವಿಶ್ವಸಂಸ್ಥೆಯು ಈ ಕುರಿತ ಪ್ರಾಥಮಿಕ ವರದಿಯಲ್ಲಿಯೂ ಉಲ್ಲೇಖಿಸಿದೆ.</p>.<h2> ಸಂವಿಧಾನದ ಪರಾಮರ್ಶೆ ಆಡಳಿತ ಸುಧಾರಣೆಗೆ ಕ್ರಮ: ಆಯೋಗ ರಚನೆ</h2>.<p><strong> ಢಾಕಾ:</strong> ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಆಡಳಿತ ವ್ಯವಸ್ಥೆ ಸುಧಾರಣೆಗೆ ಒಂಭತ್ತು ಸದಸ್ಯರ ಸುಧಾರಣಾ ಆಯೋಗ ರಚಿಸಿದೆ. ಈ ಸಮಿತಿ ದೇಶದ ಸಂವಿಧಾನದ ಪರಾಮರ್ಶೆಯನ್ನು ನಡೆಸಿ ಸುಧಾರಣೆಗೆ ಅಗತ್ಯ ಸಲಹೆಗಳನ್ನು ನೀಡಲಿದೆ. </p><p>ಬಾಂಗ್ಲಾ ಮೂಲದ ಅಮೆರಿಕದ ಪ್ರೊಫೆಸರ್ ಅಲಿ ರಿಯಾಜ್ ನೇತೃತ್ವದಲ್ಲಿ ಆಯೋಗ ರಚನೆಯಾಗಿದೆ. 90 ದಿನದಲ್ಲಿ ವರದಿ ಸಲ್ಲಿಸಲು ಗಡುವು ನಿಗದಿಪಡಿಸಲಾಗಿದೆ ಎಂದು ಸರ್ಕಾರದ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಸಮಿತಿಯಲ್ಲಿ ಉಸ್ತುವಾರಿ ಸರ್ಕಾರದ ಮುಖ್ಯ ಸಲಹೆಗಾರರಾದ ಮೊಹಮ್ಮದ್ ಯೂನಸ್ ಅವರ ವಿಶೇಷ ಸಹಾಯಕರಾಗಿರುವ ವಿದ್ಯಾರ್ಥಿ ಪ್ರತಿನಿಧಿ ಮಹ್ಫುಜ್ ಅಲಂ ಅವರೂ ಇದ್ದಾರೆ. </p><p>ಢಾಕಾ ವಿ.ವಿ ಕಾನೂನು ವಿಭಾಗದ ಪ್ರೊಫೆಸರ್ ಸುಮೈಯಾ ಖೈರ್ ಮೊಹಮ್ಮದ್ ಇಕ್ರಮುಲ್ ಹಕ್ ವಕೀಲ ಇಮ್ರಾನ್ ಸಿದ್ದೀಕ್ ಸುಪ್ರೀಂ ಕೋರ್ಟ್ ವಕೀಲ ಡಾ.ಷರೀಫ್ ಭೂಯಿಯಾನ್ ಮಾನವ ಹಕ್ಕು ಕಾರ್ಯಕರ್ತ ಮೊಹಮ್ಮದ್ ಮುಸ್ತೈನ್ ಬಿಲ್ಲಾ ಲೇಖಕ ಫಿರೋಜ್ ಅಹ್ಮದ್ ಸದಸ್ಯರಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಢಾಕಾ:</strong> ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆಗೆ ಕಾಲಮಿತಿ ನಿಗದಿಪಡಿಸಲು ಉಸ್ತುವಾರಿ ಸರ್ಕಾರದ ನಾಯಕ ಮೊಹಮ್ಮದ್ ಯೂನಸ್ ನಿರಾಕರಿಸಿದ್ದಾರೆ. ‘ಚುನಾವಣೆಗೂ ಮೊದಲು ಕೆಲವು ಸುಧಾರಣಾ ಕಾರ್ಯಕ್ರಮಗಳು ಜಾರಿಗೊಳಿಸಬೇಕಿದೆ’ ಎಂದು ಅವರು ತಿಳಿಸಿದ್ದಾರೆ.</p>.<p>ವಿದ್ಯಾರ್ಥಿ ಸಮುದಾಯ ನೇತೃತ್ವದ ಪ್ರತಿಭಟನೆಯಿಂದಾಗಿ ಮಾಜಿ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಸರ್ಕಾರ ಪದಚ್ಯುತಗೊಂಡಿತ್ತು. ಆ ನಂತರ ರಚನೆಯಾಗಿದ್ದ ಉಸ್ತುವಾರಿ ಸರ್ಕಾರದ ಮುಖ್ಯ ಸಲಹೆಗಾರರಾಗಿ ಮೊಹಮ್ಮದ್ ಯೂನಸ್ ನೇಮಕಗೊಂಡಿದ್ದರು.</p>.<p>84 ವರ್ಷ ವಯಸ್ಸಿನ, ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರೂ ಆದ ಯೂನಸ್ ಅವರು, ಸದ್ಯ ಬಾಂಗ್ಲಾದೇಶದಲ್ಲಿ ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆಯನ್ನು ಮರುಸ್ಥಾಪಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ‘ಈ ಕಾರ್ಯ ತುಂಬಾ ಕಠಿಣವಾದುದಾಗಿದೆ’ ಎಂದೂ ಹೇಳಿಕೊಂಡಿದ್ದಾರೆ. </p>.<p>‘ಉಸ್ತುವಾರಿ ಸರ್ಕಾರದಲ್ಲಿರುವ ಯಾರಿಗೂ ಸುದೀರ್ಘ ಕಾಲ ಈ ಕಾರ್ಯದಲ್ಲಿ ಉಳಿಯುವ ಗುರಿ ಇಲ್ಲ’ ಎಂದು ಯೂನಸ್ ತಮ್ಮ ನೇತೃತ್ವದ ಉಸ್ತುವಾರಿ ಸರ್ಕಾರ ಕುರಿತು ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ. ‘ಪ್ರೊಥೊಮ್ ಅಲೊ’ ದೈನಿಕದಲ್ಲಿ ಅವರ ಸಂದರ್ಶನ ಪ್ರಕಟವಾಗಿದೆ. </p>.<p>‘ಸುಧಾರಣಾ ಕಾರ್ಯಕ್ರಮಗಳಿಗೆ ಪ್ರಥಮ ಆದ್ಯತೆ. ನೀವು ಚುನಾವಣೆ ನಡೆಸಿ ಎಂದು ಈಗ ಹೇಳಿದರೆ ನಾವು ಅದಕ್ಕೆ ಸಿದ್ಧರಿದ್ದೇವೆ. ಆದರೆ, ಮೊದಲು ಚುನಾವಣೆ ನಡೆಸುವುದು ತಪ್ಪಾಗುತ್ತದೆ’ ಎಂದು ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.</p>.<p>ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ 15 ವರ್ಷದ ಆಡಳಿತಾವಧಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ವ್ಯಾಪಕವಾಗಿತ್ತು ಎಂಬ ಆರೋಪವಿತ್ತು. ಅಲ್ಲದೆ, ಕಾನೂನುಬಾಹಿರವಾಗಿ ರಾಜಕೀಯ ವಿರೋಧಿಗಳ ಬಂಧನ, ಹತ್ಯೆ ಕೂಡಾ ನಡೆದಿರುವ ದೂರುಗಳಿದ್ದವು.</p>.<p>ಸರ್ಕಾರದ ರಾಜೀನಾಮೆಗೆ ಒತ್ತಾಯಿಸಿ, ವಿದ್ಯಾರ್ಥಿ ಸಮುದಾಯದ ನೇತೃತ್ವದಲ್ಲಿ ನಡೆಸಿದ್ದ ದೇಶವ್ಯಾಪಿ ಪ್ರತಿಭಟನೆಯಲ್ಲಿ 600ಕ್ಕೂ ಹೆಚ್ಚು ಜನರು ಮೃತಪಟ್ಟರು ಎಂದು ವಿಶ್ವಸಂಸ್ಥೆಯು ಈ ಕುರಿತ ಪ್ರಾಥಮಿಕ ವರದಿಯಲ್ಲಿಯೂ ಉಲ್ಲೇಖಿಸಿದೆ.</p>.<h2> ಸಂವಿಧಾನದ ಪರಾಮರ್ಶೆ ಆಡಳಿತ ಸುಧಾರಣೆಗೆ ಕ್ರಮ: ಆಯೋಗ ರಚನೆ</h2>.<p><strong> ಢಾಕಾ:</strong> ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಆಡಳಿತ ವ್ಯವಸ್ಥೆ ಸುಧಾರಣೆಗೆ ಒಂಭತ್ತು ಸದಸ್ಯರ ಸುಧಾರಣಾ ಆಯೋಗ ರಚಿಸಿದೆ. ಈ ಸಮಿತಿ ದೇಶದ ಸಂವಿಧಾನದ ಪರಾಮರ್ಶೆಯನ್ನು ನಡೆಸಿ ಸುಧಾರಣೆಗೆ ಅಗತ್ಯ ಸಲಹೆಗಳನ್ನು ನೀಡಲಿದೆ. </p><p>ಬಾಂಗ್ಲಾ ಮೂಲದ ಅಮೆರಿಕದ ಪ್ರೊಫೆಸರ್ ಅಲಿ ರಿಯಾಜ್ ನೇತೃತ್ವದಲ್ಲಿ ಆಯೋಗ ರಚನೆಯಾಗಿದೆ. 90 ದಿನದಲ್ಲಿ ವರದಿ ಸಲ್ಲಿಸಲು ಗಡುವು ನಿಗದಿಪಡಿಸಲಾಗಿದೆ ಎಂದು ಸರ್ಕಾರದ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಸಮಿತಿಯಲ್ಲಿ ಉಸ್ತುವಾರಿ ಸರ್ಕಾರದ ಮುಖ್ಯ ಸಲಹೆಗಾರರಾದ ಮೊಹಮ್ಮದ್ ಯೂನಸ್ ಅವರ ವಿಶೇಷ ಸಹಾಯಕರಾಗಿರುವ ವಿದ್ಯಾರ್ಥಿ ಪ್ರತಿನಿಧಿ ಮಹ್ಫುಜ್ ಅಲಂ ಅವರೂ ಇದ್ದಾರೆ. </p><p>ಢಾಕಾ ವಿ.ವಿ ಕಾನೂನು ವಿಭಾಗದ ಪ್ರೊಫೆಸರ್ ಸುಮೈಯಾ ಖೈರ್ ಮೊಹಮ್ಮದ್ ಇಕ್ರಮುಲ್ ಹಕ್ ವಕೀಲ ಇಮ್ರಾನ್ ಸಿದ್ದೀಕ್ ಸುಪ್ರೀಂ ಕೋರ್ಟ್ ವಕೀಲ ಡಾ.ಷರೀಫ್ ಭೂಯಿಯಾನ್ ಮಾನವ ಹಕ್ಕು ಕಾರ್ಯಕರ್ತ ಮೊಹಮ್ಮದ್ ಮುಸ್ತೈನ್ ಬಿಲ್ಲಾ ಲೇಖಕ ಫಿರೋಜ್ ಅಹ್ಮದ್ ಸದಸ್ಯರಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>