<p><strong>ಢಾಕಾ</strong>: ಅಗರ್ತಲಾದಲ್ಲಿರುವ ಬಾಂಗ್ಲಾದೇಶದ ಕಾನ್ಸುಲೇಟ್ ಮೇಲಿನ ದಾಳಿಯನ್ನು ಖಂಡಿಸಿ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ(ಬಿಎನ್ಪಿ)ಯ ಮೂರು ಘಟಕಗಳು ಭಾನುವಾರ ಪ್ರತಿಭಟನಾ ಜಾಥಾ ನಡೆಸಿವೆ.</p>.<p>ಘಟನೆ ಬಗ್ಗೆ ಕ್ರಮ ಕೈಗೊಳ್ಳುವಂತೆ ಢಾಕಾದಲ್ಲಿರುವ ಭಾರತದ ಹೈ ಕಮಿಷನ್ಗೆ ಪ್ರತಿಭಟನಕಾರರು ಜ್ಞಾಪನಾಪತ್ರ ಸಲ್ಲಿಸಿದ್ದಾರೆ.</p>.<p>ಹಿಂದೂ ಅರ್ಚಕ ಚಿನ್ಮಯಿ ಕೃಷ್ಣದಾಸ್ ಬಂಧನವನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದವರು ಅಗರ್ತಲಾದಲ್ಲಿದ್ದ ಉಪ ಹೈಕಮಿಷನ್ ಮೇಲೆ ದಾಳಿ ನಡೆಸಿದ್ದರು. ಈ ಘಟನೆಯನ್ನು ಬಾಂಗ್ಲಾ ತೀವ್ರವಾಗಿ ಖಂಡಿಸಿತ್ತು.</p>.<p>ಬಿಎನ್ಪಿಯ ವಿದ್ಯಾರ್ಥಿ, ಯುವ ಮತ್ತು ಸ್ವಯಂಸೇವಕ ಘಟಕಗಳ ಕಾರ್ಯಕರ್ತರು ಬ್ಯಾನರ್ ಹಿಡಿದುಕೊಂಡು ಪಕ್ಷದ ಕಚೇರಿಯಿಂದ ಭಾರತದ ಹೈಕಮಿಷನ್ ಕಚೇರಿವರೆಗೆ ಮೆರವಣಿಗೆ ನಡೆಸುತ್ತಿದ್ದರು. ಅವರನ್ನು ರಾಮಪುರ ಪ್ರದೇಶದ ಬಳಿ ಪೊಲೀಸರು ತಡೆದರು.</p>.<p>ಪೊಲೀಸರ ಅನುಮತಿಯ ಮೇರೆಗೆ 6 ಜನರು ಹೈಕಮಿಷನ್ ಒಳಗೆ ಹೋಗಿ ಮನವಿಪತ್ರ ಸಲ್ಲಿಸಿದರು. </p>.<p>ಭಾರತದ ವಸ್ತುಗಳನ್ನು ಬಹಿಷ್ಕರಿಸುವಂತೆ ಮತ್ತು ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಹಸ್ತಾಂತರಿಸುವಂತೆ ಒತ್ತಾಯಿಸಿ ಪ್ರತಿಭಟನಕಾರರು ಘೋಷಣೆಗೆಳನ್ನು ಕೂಗಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಢಾಕಾ</strong>: ಅಗರ್ತಲಾದಲ್ಲಿರುವ ಬಾಂಗ್ಲಾದೇಶದ ಕಾನ್ಸುಲೇಟ್ ಮೇಲಿನ ದಾಳಿಯನ್ನು ಖಂಡಿಸಿ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ(ಬಿಎನ್ಪಿ)ಯ ಮೂರು ಘಟಕಗಳು ಭಾನುವಾರ ಪ್ರತಿಭಟನಾ ಜಾಥಾ ನಡೆಸಿವೆ.</p>.<p>ಘಟನೆ ಬಗ್ಗೆ ಕ್ರಮ ಕೈಗೊಳ್ಳುವಂತೆ ಢಾಕಾದಲ್ಲಿರುವ ಭಾರತದ ಹೈ ಕಮಿಷನ್ಗೆ ಪ್ರತಿಭಟನಕಾರರು ಜ್ಞಾಪನಾಪತ್ರ ಸಲ್ಲಿಸಿದ್ದಾರೆ.</p>.<p>ಹಿಂದೂ ಅರ್ಚಕ ಚಿನ್ಮಯಿ ಕೃಷ್ಣದಾಸ್ ಬಂಧನವನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದವರು ಅಗರ್ತಲಾದಲ್ಲಿದ್ದ ಉಪ ಹೈಕಮಿಷನ್ ಮೇಲೆ ದಾಳಿ ನಡೆಸಿದ್ದರು. ಈ ಘಟನೆಯನ್ನು ಬಾಂಗ್ಲಾ ತೀವ್ರವಾಗಿ ಖಂಡಿಸಿತ್ತು.</p>.<p>ಬಿಎನ್ಪಿಯ ವಿದ್ಯಾರ್ಥಿ, ಯುವ ಮತ್ತು ಸ್ವಯಂಸೇವಕ ಘಟಕಗಳ ಕಾರ್ಯಕರ್ತರು ಬ್ಯಾನರ್ ಹಿಡಿದುಕೊಂಡು ಪಕ್ಷದ ಕಚೇರಿಯಿಂದ ಭಾರತದ ಹೈಕಮಿಷನ್ ಕಚೇರಿವರೆಗೆ ಮೆರವಣಿಗೆ ನಡೆಸುತ್ತಿದ್ದರು. ಅವರನ್ನು ರಾಮಪುರ ಪ್ರದೇಶದ ಬಳಿ ಪೊಲೀಸರು ತಡೆದರು.</p>.<p>ಪೊಲೀಸರ ಅನುಮತಿಯ ಮೇರೆಗೆ 6 ಜನರು ಹೈಕಮಿಷನ್ ಒಳಗೆ ಹೋಗಿ ಮನವಿಪತ್ರ ಸಲ್ಲಿಸಿದರು. </p>.<p>ಭಾರತದ ವಸ್ತುಗಳನ್ನು ಬಹಿಷ್ಕರಿಸುವಂತೆ ಮತ್ತು ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಹಸ್ತಾಂತರಿಸುವಂತೆ ಒತ್ತಾಯಿಸಿ ಪ್ರತಿಭಟನಕಾರರು ಘೋಷಣೆಗೆಳನ್ನು ಕೂಗಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>