ಟೊರೊಂಟೊ: ಅಕ್ಟೋಬರ್ 10ರೊಳಗೆ ಸುಮಾರು 40 ಮಂದಿ ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಳ್ಳುವಂತೆ ಕೆನಡಾಗೆ ಭಾರತ ಸೂಚನೆ ನೀಡಿತ್ತು.
ಈ ನಡುವೆ ಕೆನಡಾ ಭಾರತದಲ್ಲಿ ಕೆಲಸ ಮಾಡುತ್ತಿರುವ ತನ್ನ ಬಹುಪಾಲು ರಾಜತಾಂತ್ರಿಕರನ್ನು ಕೌಲಾಲಂಪುರ ಹಾಗೂ ಸಿಂಗಾಪುರಕ್ಕೆ ಸ್ಥಳಾಂತರಿಸಿದೆ ಎಂದು ಖಾಸಗಿ ಒಡೆತನದ ಕೆನಡಾದ ಟೆಲಿವಿಷನ್ ನೆಟ್ವರ್ಕ್ ಸಿಟಿವಿ ನ್ಯೂಸ್ ವರದಿ ಮಾಡಿದೆ.
ಖಾಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಹರದೀಪ್ ಸಿಂಗ್ ನಿಜ್ಜರ್ ಹತ್ಯೆ ಹಿಂದೆ ಭಾರತದ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿದ್ದರು. ಆದರೆ ಅವರ ಹೇಳಿಕೆ ಅಸಂಬದ್ಧ ಎಂದು ಭಾರತ ಜರಿದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳು ರಾಜತಾಂತ್ರಿಕರನ್ನು ಉಚ್ಛಾಟನೆ ಮಾಡಿದ್ದವು.