ಈ ಕುರಿತಂತೆ ಹೇಳಿಕೆ ನೀಡಲು ರಾಜಪಕ್ಸೆ ಅವರಿಗೆ ಸ್ಪೀಕರ್ ಕರು ಜಯಸೂರ್ಯ ಅವರು ಅನುಮತಿ ನೀಡಿದರು. ಈ ವೇಳೆ ಮಾತನಾಡಿದ ರಾಜಪಕ್ಸೆ, ‘ಹೊಸ ಚುನಾವಣೆಗೆ ಎಲ್ಲ 225 ಮಂದಿ ಸದಸ್ಯರು ನನ್ನ ಜೊತೆ ನಿಲ್ಲುವಂತೆ ಮನವಿ ಮಾಡುತ್ತೇನೆ. ನಮಗೆ ಸಾರ್ವತ್ರಿಕ ಚುನಾವಣೆ ಬೇಕಿದೆ, ಈಗಿನ ರಾಜಕೀಯ ಬಿಕ್ಕಟ್ಟು ಬಗೆಹರಿಸಲು, ಹೊಸದಾಗಿ ಚುನಾವಣೆ ನಡೆಸುವುದೇ ಸೂಕ್ತ’ ಎಂದು ತಿಳಿಸಿದರು.