<p><strong>ಕೊಲಂಬೊ:</strong>ದ್ವೀಪರಾಷ್ಟ್ರ ಶ್ರೀಲಂಕಾ ಸಂಸತ್ತು ಗುರುವಾರಭಾರೀ ಕೋಲಾಹಲಕ್ಕೆ ಸಾಕ್ಷಿಯಾಯಿತು. ಅವಿಶ್ವಾಸ ನಿಲುವಳಿ ಗೊತ್ತುವಳಿ ವಿಚಾರದಲ್ಲಿ ರಾಜಪಕ್ಸೆ– ವಿಕ್ರಮಸಿಂಘೆ ಬೆಂಬಲಿತ ಸಂಸತ್ ಸದಸ್ಯರು ಪರಸ್ಪರ ಕೈ ಕೈ ಮಿಲಾಯಿಸಿದರು. ಈ ವೇಳೆ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ನಿಷ್ಠರೊಬ್ಬರು ಸಂಸದರೊಬ್ಬರು ಗಾಯಗೊಂಡರು.</p>.<p>ಪ್ರಧಾನಿ ಮಹಿಂದಾ ರಾಜಪಕ್ಸೆ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು ಬುಧವಾರ ಧ್ವನಿಮತದಿಂದ ಅಂಗೀಕರಿಸಲಾಗಿತ್ತು.</p>.<p>ಈ ಕುರಿತಂತೆ ಹೇಳಿಕೆ ನೀಡಲು ರಾಜಪಕ್ಸೆ ಅವರಿಗೆ ಸ್ಪೀಕರ್ ಕರು ಜಯಸೂರ್ಯ ಅವರು ಅನುಮತಿ ನೀಡಿದರು. ಈ ವೇಳೆ ಮಾತನಾಡಿದ ರಾಜಪಕ್ಸೆ, ‘ಹೊಸ ಚುನಾವಣೆಗೆ ಎಲ್ಲ 225 ಮಂದಿ ಸದಸ್ಯರು ನನ್ನ ಜೊತೆ ನಿಲ್ಲುವಂತೆ ಮನವಿ ಮಾಡುತ್ತೇನೆ. ನಮಗೆ ಸಾರ್ವತ್ರಿಕ ಚುನಾವಣೆ ಬೇಕಿದೆ, ಈಗಿನ ರಾಜಕೀಯ ಬಿಕ್ಕಟ್ಟು ಬಗೆಹರಿಸಲು, ಹೊಸದಾಗಿ ಚುನಾವಣೆ ನಡೆಸುವುದೇ ಸೂಕ್ತ’ ಎಂದು ತಿಳಿಸಿದರು.</p>.<p>ಧ್ವನಿಮತದ ಬದಲಾಗಿ, ಸದಸ್ಯರ ಹೆಸರನ್ನು ಕರೆದು ಅವಿಶ್ವಾಸ ನಿಲುವಳಿ ಮಂಡಿಸಲಿ ಎಂದುಯುಎನ್ಪಿ ಸಂಸದ ಲಕ್ಷ್ಮಣ್ ಕಿರಿಯೆಲ್ಲಾ ಅವರು ಸ್ಪೀಕರ್ ಅವರನ್ನು ಒತ್ತಾಯಿಸಿದರು. ಇದಕ್ಕೆ ಒಪ್ಪಿಗೆ ಸೂಚಿಸಿದ ಸ್ಪೀಕರ್, ಸದಸ್ಯರು ಒಪ್ಪಿಗೆ ಸೂಚಿಸಿದರೆ, ಮತ್ತೊಮ್ಮೆ ಅವಿಶ್ವಾಸ ಗೊತ್ತುವಳಿ ಮಂಡಿಸಲು ಸಿದ್ಧ ಎಂದು ಪ್ರಕಟಿಸಿದರು.</p>.<p><strong>ಸ್ಪೀಕರ್ಗೆ ಮುತ್ತಿಗೆ: </strong>ಈ ವಿಚಾರ ಪ್ರಸ್ತಾಪಿಸುತ್ತಿದ್ದಂತೆಯೇ, ಅಧ್ಯಕ್ಷ ಸಿರಿಸೇನಾ, ರಾಜಪಕ್ಸೆ ಬೆಂಬಲಿತ ಸಂಸದರು ಸ್ಪೀಕರ್ ಅವರನ್ನು ಸುತ್ತುವರಿದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.</p>.<p>‘ನಾನು ಸ್ಪೀಕರ್, ನಾನೇ ನಿರ್ಧರಿಸುತ್ತೇನೆ’ ಎಂದು ಸಂಸದರಿಗೆ ಸ್ಪೀಕರ್ ಜಯಸೂರ್ಯ ಅವರು ಎಚ್ಚರಿಕೆ ನೀಡಿದರು.</p>.<p>‘ಇದರಿಂದ ಆಕ್ರೋಶಗೊಂಡ ಕೆಲವು ಸಂಸದರು ಸ್ಪೀಕರ್ ಕುರ್ಚಿಯತ್ತ ನೀರಿನ ಬಾಟಲಿ, ಪುಸ್ತಕ, ಕಸದ ಬುಟ್ಟಿಗಳನ್ನು ಎಸೆದರು. ಸ್ಪೀಕರ್ ಅವರ ಮೈಕ್ರೊಪೋನ್ ಮುರಿದ ಸಂಸದ ದಿಲಂ ಅಮುನುಗಮ ಅವರಿಗೆ ಕೈಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ’ ಎಂದುಎಂದು ಸಂಡೇಟೈಮ್ಸ್ ವರದಿ ಮಾಡಿದೆ.</p>.<p><strong>ಹೊಯ್ ಕೈ: </strong>ಇದೇ ವೇಳೆ ಸ್ಪೀಕರ್ ಅವರ ಬಳಿಯಿದ್ಧ ಸಂಸದ ಪ್ರಸನ್ನ ರಣವೀರ, ನವೀನ್ ದಿಸ್ಸಾನಾಯಿಕೆ ಪರಸ್ಪರ ಕೈ ಕೈ ಮಿಲಾಯಿಸಿದ್ದಾರೆ. ಅರ್ಧ ತಾಸಿನ ತನಕ ಇದೇ ಪರಿಸ್ಥಿತಿ ಮುಂದುವರಿದಿತ್ತು. ಬಳಿಕ ಕಲಾಪವನ್ನು ಸ್ಪೀಕರ್ ಮುಂದೂಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಲಂಬೊ:</strong>ದ್ವೀಪರಾಷ್ಟ್ರ ಶ್ರೀಲಂಕಾ ಸಂಸತ್ತು ಗುರುವಾರಭಾರೀ ಕೋಲಾಹಲಕ್ಕೆ ಸಾಕ್ಷಿಯಾಯಿತು. ಅವಿಶ್ವಾಸ ನಿಲುವಳಿ ಗೊತ್ತುವಳಿ ವಿಚಾರದಲ್ಲಿ ರಾಜಪಕ್ಸೆ– ವಿಕ್ರಮಸಿಂಘೆ ಬೆಂಬಲಿತ ಸಂಸತ್ ಸದಸ್ಯರು ಪರಸ್ಪರ ಕೈ ಕೈ ಮಿಲಾಯಿಸಿದರು. ಈ ವೇಳೆ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ನಿಷ್ಠರೊಬ್ಬರು ಸಂಸದರೊಬ್ಬರು ಗಾಯಗೊಂಡರು.</p>.<p>ಪ್ರಧಾನಿ ಮಹಿಂದಾ ರಾಜಪಕ್ಸೆ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು ಬುಧವಾರ ಧ್ವನಿಮತದಿಂದ ಅಂಗೀಕರಿಸಲಾಗಿತ್ತು.</p>.<p>ಈ ಕುರಿತಂತೆ ಹೇಳಿಕೆ ನೀಡಲು ರಾಜಪಕ್ಸೆ ಅವರಿಗೆ ಸ್ಪೀಕರ್ ಕರು ಜಯಸೂರ್ಯ ಅವರು ಅನುಮತಿ ನೀಡಿದರು. ಈ ವೇಳೆ ಮಾತನಾಡಿದ ರಾಜಪಕ್ಸೆ, ‘ಹೊಸ ಚುನಾವಣೆಗೆ ಎಲ್ಲ 225 ಮಂದಿ ಸದಸ್ಯರು ನನ್ನ ಜೊತೆ ನಿಲ್ಲುವಂತೆ ಮನವಿ ಮಾಡುತ್ತೇನೆ. ನಮಗೆ ಸಾರ್ವತ್ರಿಕ ಚುನಾವಣೆ ಬೇಕಿದೆ, ಈಗಿನ ರಾಜಕೀಯ ಬಿಕ್ಕಟ್ಟು ಬಗೆಹರಿಸಲು, ಹೊಸದಾಗಿ ಚುನಾವಣೆ ನಡೆಸುವುದೇ ಸೂಕ್ತ’ ಎಂದು ತಿಳಿಸಿದರು.</p>.<p>ಧ್ವನಿಮತದ ಬದಲಾಗಿ, ಸದಸ್ಯರ ಹೆಸರನ್ನು ಕರೆದು ಅವಿಶ್ವಾಸ ನಿಲುವಳಿ ಮಂಡಿಸಲಿ ಎಂದುಯುಎನ್ಪಿ ಸಂಸದ ಲಕ್ಷ್ಮಣ್ ಕಿರಿಯೆಲ್ಲಾ ಅವರು ಸ್ಪೀಕರ್ ಅವರನ್ನು ಒತ್ತಾಯಿಸಿದರು. ಇದಕ್ಕೆ ಒಪ್ಪಿಗೆ ಸೂಚಿಸಿದ ಸ್ಪೀಕರ್, ಸದಸ್ಯರು ಒಪ್ಪಿಗೆ ಸೂಚಿಸಿದರೆ, ಮತ್ತೊಮ್ಮೆ ಅವಿಶ್ವಾಸ ಗೊತ್ತುವಳಿ ಮಂಡಿಸಲು ಸಿದ್ಧ ಎಂದು ಪ್ರಕಟಿಸಿದರು.</p>.<p><strong>ಸ್ಪೀಕರ್ಗೆ ಮುತ್ತಿಗೆ: </strong>ಈ ವಿಚಾರ ಪ್ರಸ್ತಾಪಿಸುತ್ತಿದ್ದಂತೆಯೇ, ಅಧ್ಯಕ್ಷ ಸಿರಿಸೇನಾ, ರಾಜಪಕ್ಸೆ ಬೆಂಬಲಿತ ಸಂಸದರು ಸ್ಪೀಕರ್ ಅವರನ್ನು ಸುತ್ತುವರಿದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.</p>.<p>‘ನಾನು ಸ್ಪೀಕರ್, ನಾನೇ ನಿರ್ಧರಿಸುತ್ತೇನೆ’ ಎಂದು ಸಂಸದರಿಗೆ ಸ್ಪೀಕರ್ ಜಯಸೂರ್ಯ ಅವರು ಎಚ್ಚರಿಕೆ ನೀಡಿದರು.</p>.<p>‘ಇದರಿಂದ ಆಕ್ರೋಶಗೊಂಡ ಕೆಲವು ಸಂಸದರು ಸ್ಪೀಕರ್ ಕುರ್ಚಿಯತ್ತ ನೀರಿನ ಬಾಟಲಿ, ಪುಸ್ತಕ, ಕಸದ ಬುಟ್ಟಿಗಳನ್ನು ಎಸೆದರು. ಸ್ಪೀಕರ್ ಅವರ ಮೈಕ್ರೊಪೋನ್ ಮುರಿದ ಸಂಸದ ದಿಲಂ ಅಮುನುಗಮ ಅವರಿಗೆ ಕೈಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ’ ಎಂದುಎಂದು ಸಂಡೇಟೈಮ್ಸ್ ವರದಿ ಮಾಡಿದೆ.</p>.<p><strong>ಹೊಯ್ ಕೈ: </strong>ಇದೇ ವೇಳೆ ಸ್ಪೀಕರ್ ಅವರ ಬಳಿಯಿದ್ಧ ಸಂಸದ ಪ್ರಸನ್ನ ರಣವೀರ, ನವೀನ್ ದಿಸ್ಸಾನಾಯಿಕೆ ಪರಸ್ಪರ ಕೈ ಕೈ ಮಿಲಾಯಿಸಿದ್ದಾರೆ. ಅರ್ಧ ತಾಸಿನ ತನಕ ಇದೇ ಪರಿಸ್ಥಿತಿ ಮುಂದುವರಿದಿತ್ತು. ಬಳಿಕ ಕಲಾಪವನ್ನು ಸ್ಪೀಕರ್ ಮುಂದೂಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>