<p><strong>ವಾಷಿಂಗ್ಟನ್: </strong>ಭಾರತದಲ್ಲಿನ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಮತ್ತು ಮಾನವ ಹಕ್ಕುಗಳ ಪರಿಸ್ಥಿತಿ ಕುರಿತು ಮಂಡಿಸಿದ ನಿರ್ಣಯದ ವಿರುದ್ಧ ಷಿಕಾಗೊ ನಗರ ಪರಿಷತ್ ಮತ ಚಲಾಯಿಸಿದೆ.</p>.<p>ನಗರ ಸ್ಥಳೀಯ ಸಂಸ್ಥೆಯಲ್ಲಿ ಇಂತಹ ವಿಷಯಗಳನ್ನು ಚರ್ಚಿಸಬಾರದು ಮತ್ತು ಈ ರೀತಿಯ ನಿರ್ಣಯಗಳನ್ನು ಸಭೆಯಲ್ಲಿ ಮಂಡಿಸಲು ಅವಕಾಶವನ್ನೇ ನೀಡಬಾರದು ಎಂದು ಸದಸ್ಯರು ಆಗ್ರಹಿಸಿದರು.</p>.<p>26–18 ಮತಗಳ ಮೂಲಕ ಈ ನಿರ್ಣಯವನ್ನು ತಿರಸ್ಕರಿಸಲಾಯಿತು.</p>.<p>‘ಪರಿಷತ್ನ ಹಲವು ಸದಸ್ಯರು ಈ ನಿರ್ಣಯದ ಪರ ಮತ ಚಲಾಯಿಸಲು ಮುಜಗರಕ್ಕೆ ಒಳಗಾದರು. ಭಾರತದಲ್ಲಿ ಏನು ನಡೆಯುತ್ತಿದೆ ಮತ್ತು ಈ ವಿಷಯದ ಆಳ–ಅಗಲ ನಮಗೆ ಗೊತ್ತಿಲ್ಲ’ ಎಂದು ಷಿಕಾಗೊ ಮೇಯರ್ ಲೊರಿ ಲೈಟ್ಫೂಟ್ ಸುದ್ದಿಗಾರರಿಗೆ ತಿಳಿಸಿದರು.</p>.<p>‘ಇಂತಹ ವಿಷಯಗಳ ಬಗ್ಗೆ ಸ್ಥಳೀಯ ಸಂಸ್ಥೆಗಳು ಹೇಳಿಕೆ ನೀಡುವುದಾಗಲಿ ಅಥವಾ ನಿರ್ಣಯ ಕೈಗೊಳುವ ಕಾರ್ಯ ಮಾಡಬಾರದು. ಈ ಬಗ್ಗೆ ಹೇಳಿಕೆ ನೀಡುವುದು ಬೈಡನ್ ಆಡಳಿತದ ವಿವೇಚನೆಯಾಗಿದೆ. ಈ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ. ಹಲವು ಸದಸ್ಯರಿಗೆ ಈ ವಿಷಯದ ಬಗ್ಗೆ ಪರಿಪೂರ್ಣ ಮಾಹಿತಿ ಇರಲಿಲ್ಲ’ ಎಂದು ಹೇಳಿದರು.</p>.<p>‘ಷಿಕಾಗೊ ನಗರಕ್ಕೆ ಸಂಬಂಧಿಸಿದ ಹಲವು ಪ್ರಮುಖ ವಿಷಯಗಳಿವೆ. ಹತ್ತಾರು ಸಮಸ್ಯೆಗಳಿವೆ. ಹೀಗಿರುವಾಗ, ಜೋ ಬೈಡನ್ ಆಡಳಿತ ಕೈಗೊಳ್ಳಬೇಕಾದ ನಿರ್ಧಾರಗಳ ಬಗ್ಗೆ ಇಲ್ಲಿ ಏಕೆ ಚರ್ಚಿಸಬೇಕು’ ಎಂದು ಹೇಳಿದರು. ಮೇಯರ್ ಮಾತಿಗೆ ಇತರ ಸದಸ್ಯರು ಸಹ ದನಿಗೂಡಿಸಿದ್ದಾರೆ.</p>.<p>‘ಈ ನಿರ್ಣಯವು ದ್ವೇಷದಿಂದ ಕೂಡಿದೆ. ಈ ನಿರ್ಣಯವನ್ನು ನಾನು ಬೆಂಬಲಿಸಿಲ್ಲ. ಭಾರತದ ಕಾನ್ಸುಲ್ ಜನರಲ್ ಸಹ ನನ್ನ ಜತೆ ಚರ್ಚಿಸಿದ್ದಾರೆ’ ಎಂದು ಸದಸ್ಯ ರೇಮಂಡ್ ಎ ಲೋಪೇಜ್ ತಿಳಿಸಿದ್ದಾರೆ.</p>.<p>‘ಭಾರತದ ಬಗ್ಗೆ ನಗರ ಪರಿಷತ್ನಲ್ಲಿ ಚರ್ಚಿಸುವುದಾದರೆ ಚೀನಾದಲ್ಲಿ ಉಯಿಘರ್ ಸಮುದಾಯದ ಸಾಮೂಹಿಕ ಹತ್ಯೆಯ ಬಗ್ಗೆಯೂ ಚರ್ಚೆ ಮಾಡಬೇಕಾಗುತ್ತದೆ. ಇದೇ ರೀತಿ, ಇಸ್ರೇಲ್–ಪ್ಯಾಲೆಸ್ಟೀನ್ ಸಂಘರ್ಷ ಸೇರಿದಂತೆ ಹಲವಾರು ಅಂತರರಾಷ್ಟ್ರೀಯ ವಿಷಯಗಳಿವೆ’ ಎಂದು ಸದಸ್ಯ ಜಾರ್ಜ್ ಎ. ಕಾರ್ಡೆನಾಸ್ ಪ್ರತಿಪಾದಿಸಿದ್ದಾರೆ.</p>.<p>ಸದಸ್ಯರಾದ ಮರಿಯಾ ಹ್ಯಾಡೆನ್ ಈ ಬಗ್ಗೆ ನಿರ್ಣಯ ಮಂಡಿಸಿದ್ದರು. ‘ದಕ್ಷಿಣ ಏಷ್ಯಾದಲ್ಲಿ ನಡೆಯುತ್ತಿರುವ ಬೆಳವಣಿಗೆಯ ಬಗ್ಗೆ ಮಾಹಿತಿ ಪಡೆದು ಈ ನಿರ್ಣಯ ಮಂಡಿಸಲಾಗಿತ್ತು. ಬೇರೆ ದೇಶದಲ್ಲಿನ ಪ್ರಜಾಪ್ರಭುತ್ವದ ಆಡಳಿತ ಉತ್ತರದಾಯಿತ್ವದಿಂದ ಕೂಡಿರಬೇಕು’ ಎಂದು ಹ್ಯಾಡೆನ್ ಹೇಳಿದ್ದಾರೆ.</p>.<p>ಈ ನಿರ್ಣಯ ಮಂಡಿಸುವ ಮುನ್ನವೇ ಷಿಕಾಗೊದಲ್ಲಿನ ಭಾರತದ ಕಾನ್ಸುಲೇಟ್ ಕಚೇರಿ ಅಧಿಕಾರಿಗಳು ಮೇಯರ್ ಮತ್ತು ಇತರ ಎಲ್ಲ 50 ಸದಸ್ಯರ ಜತೆ ಚರ್ಚಿಸಿದ್ದರು. ಷಿಕಾಗೊ ನಗರ ಪರಿಷತ್ತಿನ ನಿರ್ಧಾರವನ್ನು ಭಾರತ–ಅಮೆರಿಕನ್ ಡಾ. ಭಾರತ ಬಾರೈ ಸ್ವಾಗತಿಸಿದ್ದಾರೆ.</p>.<p>‘ಈ ನಿರ್ಣಯದ ಹಿಂದೆ ಅಮೆರಿಕನ್ ಇಸ್ಲಾಮಿಕ್ ರಿಲೇಷನ್ಸ್ ಕೌನ್ಸಿಲ್ (ಸಿಎಐಆರ್) ಕೈವಾಡವಿದೆ. ಈ ಬಗ್ಗೆ ಪರಿಶೀಲನೆ ನಡೆಸಬೇಕು’ ಎಂದು ಹೇಳಿದ್ದಾರೆ.</p>.<p>‘ಭಾರತದ ಆಂತರಿಕ ರಾಜಕೀಯದಿಂದ ಸಿಎಐಆರ್ ದೂರವಿರಬೇಕು. ಈ ನಿರ್ಣಯ ದ್ವೇಷದ ಅಂಶಗಳನ್ನು ಒಳಗೊಂಡಿದೆ ಎಂದು ನಾವು ಎಲ್ಲ ಸದಸ್ಯರಿಗೂ ಮನವರಿಕೆ ಮಾಡಿದ್ದೇವೆ’ ಎಂದು ಭಾರತ–ಅಮೆರಿಕನ್ ಸಮುದಾಯದ ನಾಯಕ ಅಮಿತಾಭ್ ಮಿತ್ತಲ್ ಹೇಳಿದ್ದಾರೆ.</p>.<p><strong>ಇದನ್ನೂ ಓದಿ... <a href="https://www.prajavani.net/op-ed/analysis/one-year-of-lockdown-in-india-lessons-we-learnt-816335.html" target="_blank">PV Web Exclusive | ಲಾಕ್ಡೌನ್ಗೊಂದು ವರ್ಷ: ಪ್ರಕೃತಿ ಕಲಿಸಿದ ಪಾಠ ಕಲಿತೆವೇ?</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಾಷಿಂಗ್ಟನ್: </strong>ಭಾರತದಲ್ಲಿನ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಮತ್ತು ಮಾನವ ಹಕ್ಕುಗಳ ಪರಿಸ್ಥಿತಿ ಕುರಿತು ಮಂಡಿಸಿದ ನಿರ್ಣಯದ ವಿರುದ್ಧ ಷಿಕಾಗೊ ನಗರ ಪರಿಷತ್ ಮತ ಚಲಾಯಿಸಿದೆ.</p>.<p>ನಗರ ಸ್ಥಳೀಯ ಸಂಸ್ಥೆಯಲ್ಲಿ ಇಂತಹ ವಿಷಯಗಳನ್ನು ಚರ್ಚಿಸಬಾರದು ಮತ್ತು ಈ ರೀತಿಯ ನಿರ್ಣಯಗಳನ್ನು ಸಭೆಯಲ್ಲಿ ಮಂಡಿಸಲು ಅವಕಾಶವನ್ನೇ ನೀಡಬಾರದು ಎಂದು ಸದಸ್ಯರು ಆಗ್ರಹಿಸಿದರು.</p>.<p>26–18 ಮತಗಳ ಮೂಲಕ ಈ ನಿರ್ಣಯವನ್ನು ತಿರಸ್ಕರಿಸಲಾಯಿತು.</p>.<p>‘ಪರಿಷತ್ನ ಹಲವು ಸದಸ್ಯರು ಈ ನಿರ್ಣಯದ ಪರ ಮತ ಚಲಾಯಿಸಲು ಮುಜಗರಕ್ಕೆ ಒಳಗಾದರು. ಭಾರತದಲ್ಲಿ ಏನು ನಡೆಯುತ್ತಿದೆ ಮತ್ತು ಈ ವಿಷಯದ ಆಳ–ಅಗಲ ನಮಗೆ ಗೊತ್ತಿಲ್ಲ’ ಎಂದು ಷಿಕಾಗೊ ಮೇಯರ್ ಲೊರಿ ಲೈಟ್ಫೂಟ್ ಸುದ್ದಿಗಾರರಿಗೆ ತಿಳಿಸಿದರು.</p>.<p>‘ಇಂತಹ ವಿಷಯಗಳ ಬಗ್ಗೆ ಸ್ಥಳೀಯ ಸಂಸ್ಥೆಗಳು ಹೇಳಿಕೆ ನೀಡುವುದಾಗಲಿ ಅಥವಾ ನಿರ್ಣಯ ಕೈಗೊಳುವ ಕಾರ್ಯ ಮಾಡಬಾರದು. ಈ ಬಗ್ಗೆ ಹೇಳಿಕೆ ನೀಡುವುದು ಬೈಡನ್ ಆಡಳಿತದ ವಿವೇಚನೆಯಾಗಿದೆ. ಈ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ. ಹಲವು ಸದಸ್ಯರಿಗೆ ಈ ವಿಷಯದ ಬಗ್ಗೆ ಪರಿಪೂರ್ಣ ಮಾಹಿತಿ ಇರಲಿಲ್ಲ’ ಎಂದು ಹೇಳಿದರು.</p>.<p>‘ಷಿಕಾಗೊ ನಗರಕ್ಕೆ ಸಂಬಂಧಿಸಿದ ಹಲವು ಪ್ರಮುಖ ವಿಷಯಗಳಿವೆ. ಹತ್ತಾರು ಸಮಸ್ಯೆಗಳಿವೆ. ಹೀಗಿರುವಾಗ, ಜೋ ಬೈಡನ್ ಆಡಳಿತ ಕೈಗೊಳ್ಳಬೇಕಾದ ನಿರ್ಧಾರಗಳ ಬಗ್ಗೆ ಇಲ್ಲಿ ಏಕೆ ಚರ್ಚಿಸಬೇಕು’ ಎಂದು ಹೇಳಿದರು. ಮೇಯರ್ ಮಾತಿಗೆ ಇತರ ಸದಸ್ಯರು ಸಹ ದನಿಗೂಡಿಸಿದ್ದಾರೆ.</p>.<p>‘ಈ ನಿರ್ಣಯವು ದ್ವೇಷದಿಂದ ಕೂಡಿದೆ. ಈ ನಿರ್ಣಯವನ್ನು ನಾನು ಬೆಂಬಲಿಸಿಲ್ಲ. ಭಾರತದ ಕಾನ್ಸುಲ್ ಜನರಲ್ ಸಹ ನನ್ನ ಜತೆ ಚರ್ಚಿಸಿದ್ದಾರೆ’ ಎಂದು ಸದಸ್ಯ ರೇಮಂಡ್ ಎ ಲೋಪೇಜ್ ತಿಳಿಸಿದ್ದಾರೆ.</p>.<p>‘ಭಾರತದ ಬಗ್ಗೆ ನಗರ ಪರಿಷತ್ನಲ್ಲಿ ಚರ್ಚಿಸುವುದಾದರೆ ಚೀನಾದಲ್ಲಿ ಉಯಿಘರ್ ಸಮುದಾಯದ ಸಾಮೂಹಿಕ ಹತ್ಯೆಯ ಬಗ್ಗೆಯೂ ಚರ್ಚೆ ಮಾಡಬೇಕಾಗುತ್ತದೆ. ಇದೇ ರೀತಿ, ಇಸ್ರೇಲ್–ಪ್ಯಾಲೆಸ್ಟೀನ್ ಸಂಘರ್ಷ ಸೇರಿದಂತೆ ಹಲವಾರು ಅಂತರರಾಷ್ಟ್ರೀಯ ವಿಷಯಗಳಿವೆ’ ಎಂದು ಸದಸ್ಯ ಜಾರ್ಜ್ ಎ. ಕಾರ್ಡೆನಾಸ್ ಪ್ರತಿಪಾದಿಸಿದ್ದಾರೆ.</p>.<p>ಸದಸ್ಯರಾದ ಮರಿಯಾ ಹ್ಯಾಡೆನ್ ಈ ಬಗ್ಗೆ ನಿರ್ಣಯ ಮಂಡಿಸಿದ್ದರು. ‘ದಕ್ಷಿಣ ಏಷ್ಯಾದಲ್ಲಿ ನಡೆಯುತ್ತಿರುವ ಬೆಳವಣಿಗೆಯ ಬಗ್ಗೆ ಮಾಹಿತಿ ಪಡೆದು ಈ ನಿರ್ಣಯ ಮಂಡಿಸಲಾಗಿತ್ತು. ಬೇರೆ ದೇಶದಲ್ಲಿನ ಪ್ರಜಾಪ್ರಭುತ್ವದ ಆಡಳಿತ ಉತ್ತರದಾಯಿತ್ವದಿಂದ ಕೂಡಿರಬೇಕು’ ಎಂದು ಹ್ಯಾಡೆನ್ ಹೇಳಿದ್ದಾರೆ.</p>.<p>ಈ ನಿರ್ಣಯ ಮಂಡಿಸುವ ಮುನ್ನವೇ ಷಿಕಾಗೊದಲ್ಲಿನ ಭಾರತದ ಕಾನ್ಸುಲೇಟ್ ಕಚೇರಿ ಅಧಿಕಾರಿಗಳು ಮೇಯರ್ ಮತ್ತು ಇತರ ಎಲ್ಲ 50 ಸದಸ್ಯರ ಜತೆ ಚರ್ಚಿಸಿದ್ದರು. ಷಿಕಾಗೊ ನಗರ ಪರಿಷತ್ತಿನ ನಿರ್ಧಾರವನ್ನು ಭಾರತ–ಅಮೆರಿಕನ್ ಡಾ. ಭಾರತ ಬಾರೈ ಸ್ವಾಗತಿಸಿದ್ದಾರೆ.</p>.<p>‘ಈ ನಿರ್ಣಯದ ಹಿಂದೆ ಅಮೆರಿಕನ್ ಇಸ್ಲಾಮಿಕ್ ರಿಲೇಷನ್ಸ್ ಕೌನ್ಸಿಲ್ (ಸಿಎಐಆರ್) ಕೈವಾಡವಿದೆ. ಈ ಬಗ್ಗೆ ಪರಿಶೀಲನೆ ನಡೆಸಬೇಕು’ ಎಂದು ಹೇಳಿದ್ದಾರೆ.</p>.<p>‘ಭಾರತದ ಆಂತರಿಕ ರಾಜಕೀಯದಿಂದ ಸಿಎಐಆರ್ ದೂರವಿರಬೇಕು. ಈ ನಿರ್ಣಯ ದ್ವೇಷದ ಅಂಶಗಳನ್ನು ಒಳಗೊಂಡಿದೆ ಎಂದು ನಾವು ಎಲ್ಲ ಸದಸ್ಯರಿಗೂ ಮನವರಿಕೆ ಮಾಡಿದ್ದೇವೆ’ ಎಂದು ಭಾರತ–ಅಮೆರಿಕನ್ ಸಮುದಾಯದ ನಾಯಕ ಅಮಿತಾಭ್ ಮಿತ್ತಲ್ ಹೇಳಿದ್ದಾರೆ.</p>.<p><strong>ಇದನ್ನೂ ಓದಿ... <a href="https://www.prajavani.net/op-ed/analysis/one-year-of-lockdown-in-india-lessons-we-learnt-816335.html" target="_blank">PV Web Exclusive | ಲಾಕ್ಡೌನ್ಗೊಂದು ವರ್ಷ: ಪ್ರಕೃತಿ ಕಲಿಸಿದ ಪಾಠ ಕಲಿತೆವೇ?</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>