ಈ ಕುರಿತು ಸೋಮವಾರ ಮಾಹಿತಿ ನೀಡಿದ ಯೋಜನೆ ಮತ್ತು ಅಭಿವೃದ್ಧಿ ಸಚಿವ ಅಸಾದ್ ಉಮರ್ ‘ಬೇಸಿಗೆಯಲ್ಲಿ ಹಿರಿಯ ನಾಗರಿಕರು ಲಸಿಕಾ ಕೇಂದ್ರಗಳನ್ನು ತಲುಪುವುದು ಕಷ್ಟ. ಜತೆಗೆ ಲಸಿಕೆ ಹಾಕಿಸಿಕೊಳ್ಳಲು ಸರದಿಯಲ್ಲಿ ನಿಂತು ಕಾಯಬೇಕು. ಹಿರಿಯ ನಾಗರಿಕರು ಎದುರಿಸುವ ಇಂಥ ಹಲವು ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ‘ ಎಂದು ಅವರು ಹೇಳಿದರು.